ಸಾಮಾನ್ಯವಾಗಿ ಭಾವುಕನಾಗದ ಮುರುಳಿಯ ಕಣ್ಣುಗಳು ತುಂಬಿ ಬಂದಿದ್ದರೂ ಗಟ್ಟಿ ಹೃದಯದ ಮುರುಳಿ ತನ್ನ ಎಲ್ಲಾ ಭಾವನೆಗಳನ್ನು ಅದ್ಭುತವಾಗಿ ಹಿಡಿದಿಟ್ಟುಕೊಂಡಿದ್ದ..
ನನಗೆ ಅನಿಸಿದ್ದು ಭಾವನೆಗಳನ್ನು ಹಿಡಿದಿಟ್ಟುಕೊಳ್ಳುವ ಅದ್ಭುತ ಆಣೆಕಟ್ಟು ಕೆಲವರಿಗೆ ಮಾತ್ರ ಲಭ್ಯವಿರುತ್ತೆ.. ಆ ಪರಿಸ್ಥಿತಿಯಲ್ಲಿ ನಾ ಇದ್ದಿದ್ದರೆ ಖಂಡಿತ ಒಂದಷ್ಟು ಟಿಶ್ಯೂ ಅಥವ ಕರವಸ್ತ್ರ ಬೇಕಾಗಿರುತ್ತಿತ್ತು.
.
ಎಲ್ಲರ ಗಮನ ಒಬ್ಬನ ಮೇಲಿದೆ.. ಹತ್ತಾರು ಮೊಬೈಲು ಫೋನುಗಳು, ವಿಡಿಯೋವಾಲ, ಫೋಟೋಗ್ರಾಫರ್ ಎಲ್ಲರ ಕೇಂದ್ರ ಬಿಂದುವಾಗಿ ನಿಲ್ಲುವುದು.. ಅದರಲ್ಲೂ ಮುರುಳಿ ಒಬ್ಬ ನಾಚಿಕೆ ಸ್ವಭಾವದ ವ್ಯಕ್ತಿ.. ಲೈಮ್ ಲೈಟ್ ಬೇಕು ಅಂತಾರಲ್ಲ ಆ ತರಹದ ಸ್ವಭಾವದ ಹುಡುಗನಲ್ಲ.. ಅಂತರ್ಮುಖಿ ತನ್ನ ನೋವೇ ಆಗಲಿ, ನಲಿವೆ ಆಗಲಿ ಅದರ ಜೊತೆ ತಾನೊಬ್ಬನೇ ಹೆಜ್ಜೆ ಹಾಕಬೇಕೆಂಬ ಗುಣ ಸ್ವಭಾವದ ಹುಡುಗ..
ಮೆಲ್ಲನೆ ನೆಡೆದುಬಂದ ಅನೇಕಾನೇಕ ಅಭಿಮಾನಿ ದೇವರುಗಳು ಅವನಿಗೆ ಹಸ್ತಲಾಘವ ಕೊಟ್ಟು.. ಆತ್ಮೀಯ ಅಲಿಂಘನ ಕೊಟ್ಟು.. ಸುವರ್ಣ ಸಂಭ್ರಮದ ಶುಭ ಹಾರೈಕೆಗಳನ್ನು ಕೋರಿದರು.. ಅವನ ಕಣ್ಣಾಲಿಗಳು ತುಂಬುತ್ತಿದ್ದವು..
ಮಾತಾಡು ಅಂತ ಮೈಕ್ ಕೊಟ್ಟರೆ "ಏನು ಹೇಳಬೇಕು ಗೊತ್ತಾಗ್ತಾ ಇಲ್ಲ.. ಒಂದೆರಡು ದಿನಗಳಿಂದ ಏನೋ ನೆಡೆಯುತ್ತಿದ್ದೆ.. ಏನೋ ಕಾರುಬಾರು ಮಾಡ್ತಾ ಇದ್ದಾರೆ ಅನಿಸಿತ್ತು.. ಆದರೆ ಈ ಮಟ್ಟಕ್ಕೆ ಅಂತ ಗೊತ್ತಿರಲಿಲ್ಲ.. ಅಥವ ಅಂದುಕೊಂಡಿರಲಿಲ್ಲ.. ಅಂತ ಮೈಕ್ ಇನ್ನೊಬ್ಬರಿಗೆ ಕೊಟ್ಟ
ಮತ್ತಷ್ಟು ಮಾತಾಡು ಅಂದಾಗ ಕೂಡ ಮಾತಾಡೇ ನಿಂತಾಗ. ಯಾಕೋ ಏನೋ ಅವನ ಭುಜದ ಮೇಲೆ ಒಂದು ಚೂರು ತೂಕ ಇಟ್ಟರೆ ಸರಿಯಾಗಬಹುದು ಎನಿಸಿತು.. ಸಾಮಾನ್ಯ ನಾ ಹಾಗೆ ಮಾಡೋನಲ್ಲ ವೇದಿಕೆಯ ಮೇಲೆ ಧುಮಕುವುದು ನನಗೆ ಆಗದ ಕೆಲಸ .. ಆದರೆ ಇವನ ಜೊತೆ ನನ್ನ ಐವತ್ತು ವರ್ಷಗಳ ಪಯಣದಲ್ಲಿ ಒಂದು ಚೂರು ಸಹಕರಿಸೋಣ ಅನಿಸಿ.. ವೇದಿಕೆ ಬಳಿ ಓಡಿ ಹೋಗಿ ಅವನ ಬೆನ್ನಿನ ಮೇಲೆ ಕೈಯಿಟ್ಟು.. ಸಂತೈಸಿದೆ.. ಪ್ರಾಯಶಃ ಅವನೂ ಕೂಡ ಇದನ್ನು ನಿರೀಕ್ಷಿಸಿರಲಿಲ್ಲ.. ಒಂದು ಕ್ಷಣ ನಿಶ್ಯಬ್ಧ.. ಮತ್ತೆ ತುಂಡು ತುಂಡಾಗಿ ಮಾತಾಡತೊಡಗಿದ.. ಇದೊಂದು ಮನದಾಳದ ,ಮಾತಿನ ಝರಿ.. ಕಬಾಬ್ ಮೇ ಹಡ್ಡಿ ಆಗಬಾರದು ಅಂತ ಸುಮ್ಮನೆ ಅವನ ಬೆನ್ನನ್ನು ತಟ್ಟುತ್ತಾ ನಿಂತಿದ್ದೆ..
ಮುಂದೆ ಸುಮಾರು ಒಂದು ಘಂಟೆಗಳ ಕಾಲ.. ತಮಾಷೆ, ಆಟ.. ಕೊಂಚ ಮನಸ್ಸು ನಿರಾಳವಾಗುವಂತಹ ಮಾತುಗಳು.. ಎಲ್ಲರನ್ನು ಒಂದು ಬಕೆಟ್ಟಿನಲ್ಲಿ ಹಾಕಿ ಆಟವಾಡಿಸಿದ "ಅಂಕಲ್, ಬ್ರೋ, ಭಾಯ್, ಅಣ್ಣ, ಗುರು" ಇವರಿಗೆ ವಂದನೆಗಳು..
ನಮ್ಮ ಯಾವುದೇ ಸಮಾರಂಭವಿರಲಿ ನನ್ನ ಅಪ್ಪ ಹೇಳುತ್ತಿದ್ದ "ಕಟ್ಟೆ ಬಳಗ"ದ ಸದಸ್ಯರು ಬಂದರೆ ಆ ಸಮಾರಂಭಕ್ಕೆ ಎಲ್ಲರೂ ಬಂದಿದ್ದಾರೆ ಅನಿಸುವ ಈ ಗುಂಪು ಕೊಂಚ ಮೊದಲೇ ಬಂದಿದ್ದರು.. ಮುರುಳಿಯನ್ನು ವೇದಿಕೆಯ ಹಿಂಬದಿಗೆ ಕರೆದುಕೊಂಡು ಹೋಗಿ, ತಾವು ತಂದಿದ್ದ ಉಡುಗೊರೆಯನ್ನು ಹಾಕಿಕೊಂಡು ಬರಲೇ ಬೇಕು ಅಂತ ಒತ್ತಾಯಿಸಿ, ಟೀ ಶರ್ಟ್ ಹಾಕಿಸಿಕೊಂಡು ಬಂದರು.. ಲೈಟ್ ಬಣ್ಣಗಳಲ್ಲಿ ಯಾವಾಗಲೂ ಅದ್ಭುತವಾಗಿ ಕಾಣುವ ಮುರುಳಿ ಈ ಸಮಾರಂಭದ ಸಂತಸದ ಕ್ಷಣಗಳಿಂದ ಇನ್ನಷ್ಟು ಹೊಳೆಯುತ್ತಿದ್ದ..
ನಂತರ ಈ ಸಮಾರಂಭದ ಆಕರ್ಷಣೆ ಕೇಕ್.. ನಂತರ ವಿಷ್ಣು ರಚಿಸಿದ ತನ್ನ ಚಿಕ್ಕಪ್ಪನ ಚಿತ್ರವನ್ನು ಬಿಡುಗಡೆ ಮಾಡಿದರು.. ಅದ್ಭುತವಾದ ಚಿತ್ರಕಲೆಯದು.. ಮುರಳಿಯ ಸ್ವಿಟ್ಜರ್ಲ್ಯಾಂಡ್ ಪ್ರವಾಸದ ಅದ್ಭುತ ಚಿತ್ರವನ್ನು ಹಾಗೆ ರಚಿಸಿದ್ದ ವಿಷ್ಣುವಿಗೆ ಅಭಿನಂದನೆಗಳು.. ಆರ್ ಸಿ ಬಿಯ ಹುಚ್ಚು ಕೇಕಿನ ಮೇಲೂ ಇತ್ತು..
ಡಿಜೆ ಜೋರಾಗಿಯೇ ಹಾಕಿದ್ದ "ಸಲಾಂ ರಾಖಿ ಭಾಯ್" ಹಾಡು ಈ ಸಂದರ್ಭಕ್ಕೆ ಹೊಂದುತ್ತಿತ್ತು .. ಎಲ್ಲರೂ ಹೊರಗೆ ಗೇಟಿನ ಹತ್ತಿರ ಬರಬೇಕು ಅಂತ ಕೇಳಿಕೊಂಡಾಗ ಅಲ್ಲಿ ಇನ್ನೊಂದು ಅಚ್ಚರಿ ಕಾದಿತ್ತು .. ಸುವರ್ಣ ಸಮಾರಂಭಕ್ಕೆ ಬೆಳ್ಳಿಯ ವರ್ಣದ ಹೊಸ ಕಾರು ನಿಗಿ ನಿಗಿ ಅಂತ ನಿಂತಿತ್ತು..
ಎಲ್ಲರ ಶುಭಾಶಯಗಳೊಂದಿಗೆ ಕಾರಿನ ಕೀಲಿ ಮುರುಳಿಗೆ ತಲುಪಿದಾಗ.. ಅವನು ತನ್ನ ಸಹೋದ್ಯೋಗಿಗಳಿಗೆ ಬೆರಳು ತೋರಿಸಿ ನಿಮಗಿದೆ ಮಾರಿ ಹಬ್ಬ ಅಂತ ತಮಾಷೆ ಮಾಡಿದ.. ಅಚ್ಚರಿ ಉಡುಗೊರೆ ಅನ್ನೋದು ಇದೆ ಅಲ್ಲವೇ..
ಸಮುದ್ರ ಶಾಂತವಾಗಿದ್ದರೆ ಅದನ್ನು ಸಮುದ್ರ ಅಂತ ಕರೆಯುತ್ತಾರೆಯೇ.. ಅದೊಂದು ಕೆರೆ ಅಷ್ಟೇ ಅನಿಸುತ್ತದೆ.. ಆದರೆ ಮುರುಳಿ ಹೃದಯದಲ್ಲಿ ಭಾವಗಳ ಕಡಲನ್ನೇ ಹೊತ್ತಿದ್ದರೂ ಹೊರಗೆ ಶಾಂತತೆಯಿಂದ ನಿಂತಿದ್ದು.. ಮತ್ತೆ ಎಲ್ಲಾ ಸಂತಸದ ಕ್ಷಣಗಳನ್ನು ಅನುಭವಿಸಿದ್ದು ಖುಷಿಕೊಟ್ಟಿತು..
ಟಿ ಆರ್ ಪಿ ಗೆ ಹಂಬಲಿಸದ ಆದರೆ ದುಂಬಿಗಳ ಹಾಗೆ ತನ್ನಷ್ಟಕ್ಕೆ ತನ್ನ ಕೆಲಸ ಮಾಡಿಕೊಂಡು ಇರುವ ಮುರುಳಿಯ ಇನ್ನೊಂದು ಮೊಗವನ್ನು.. ಅವನ ಕೊಂಚ ಕೋಪದ ಮೊಗವನ್ನು, ಹಾಸ್ಯ ಪ್ರಜ್ಞೆಯನ್ನು ಹಾಗೂ ಹಠದ ಗುಣವನ್ನು ಕೊಂಚ ಪರಿಚಯ ಮಾಡಿಕೊಡಬೇಕು ಅಂತ ಅನಿಸಿತು.. ಅವನ ಕಂಪನಿಯ ಮುಖ್ಯಸ್ಥರಾದ ಬದರಿ ಅವರಿಗೆ ಈ ಮಾತನ್ನು ಹೇಳಿದಾಗ.. ಅಯ್ಯೋ ಶ್ರೀ ನೀವು ಮಾತಾಡಿ.. ನಮಗೆ ಬರೋಲ್ಲ.. ವೇದಿಕೆ ನಿಮ್ಮದು ಅಂತ ವೇದಿಕೆ ಬಿಟ್ಟುಕೊಟ್ಟರು..
ಮುರುಳಿಯ ಜೊತೆಯ ತುಂಟ ಬಾಲ್ಯದ ಕೆಲವು ಪುಟಗಳನ್ನೂ ತೆರೆದಿಟ್ಟೆ.. ಮಾತಾಡಿದ್ದು ಸರಿಯಿತ್ತೋ, ತಪ್ಪಿತ್ತೋ ಅಥವ ಅಲ್ಲಿ ಅಗತ್ಯವಿರಲಿಲ್ಲವೋ ನನಗೆ ಗೊತ್ತಿಲ್ಲ.. ಆದರೆ ಅವನ ಬಗ್ಗೆ ಒಂದೆರಡು ಮಾತುಗಳನ್ನು ಹೇಳಬೇಕು ಅನ್ನಿಸಿತ್ತು.. ಹಾಗಾಗಿ ಮಾತಾಡಿದೆ..
ಬಾಲ್ಯದಲ್ಲಿ ನಾ ತರಲೆ ಮಾಡಿದರೂ, ಅವನು ತರಲೆ ಮಾಡಿದರೂ ಅಪ್ಪ ಅಮ್ಮನಿಂದ ಒದೆ ಬೀಳುತ್ತಿದ್ದದ್ದು ಮುರುಳಿಗೇನೇ..
ಅಮ್ಮನ ಮುದ್ದು ಮಗ.. ಅಮ್ಮನ ಅದ್ಭುತ ಹೋಲಿಕೆ.. ಇದೆಲ್ಲ ಇವನ ವಿಶಿಷ್ಟತೆ..
ವೇದಿಕೆಯ ಮೇಲೆ ಆಡದೆ ಮರೆತು ಹೋಗಿದ್ದ ಒಂದು ಮಾತು ಇಲ್ಲಿ..
ಬಾಲ್ಯದಲ್ಲಿ ಬಹಳ ಮುದ್ದಾಗಿದ್ದ.. ಈಗಲೂ ಮುದ್ದಾಗಿದ್ದಾನೆ ಅದು ಹೇಳುವ ಅವಶ್ಯಕತೆಯೇ ಇಲ್ಲ.. ನಾನು ಏಕ್ ದಂ ಪ್ಯಾದೆ ತರಹ ಇದ್ದೆ.. ಚೂಪು ಕೂದಲು, ಕಪ್ಪು ಬಣ್ಣ. ವಿಚಿತ್ರವಾಗಿದ್ದ ತಲೆಯ ಆಕೃತಿ.. ಒಂದು ರೀತಿ ಕೀಳರಿಮೆ ಇತ್ತು.. ಮತ್ತೆ ಬಂದವರೆಲ್ಲರೂ ಮುರುಳಿಯನ್ನು ಮುದ್ದಾಡುತ್ತಿದ್ದರು.. ಅವನನ್ನೇ ಎಲ್ಲಾ ಕಡೆ ಕರೆದುಕೊಂಡು ಹೋಗುತ್ತಿದ್ದರು.. ಅದು ನನಗೆ ಇನ್ನಷ್ಟು ಕೀಳರಿಮೆ ಕಾಡಲು ಸಹಾಯ ಮಾಡಿತ್ತು.. ನನ್ನ ಯಾರೂ ಇಷ್ಟಪಡಲ್ಲ.. ಅದಕ್ಕೆ ಇವನೂ ಕಾರಣ ಅನ್ನುವ ಒಂದು ವಿಚಿತ್ರ ಭಾವ ಮೂಡುತಿತ್ತು.. ಆದರೆ ಆಟದಲ್ಲಿ ಇವನ ಜೊತೆ ಇರಲೇ ಬೇಕಿತ್ತು.. ಇಬ್ಬರೂ ಒಟ್ಟಿಗೆ ಶಾಲೆಗೇ ಹೋಗುತ್ತಿದ್ದೆವು.. ನನ್ನ ಗೆಳೆಯರು.. ಇವನ ಗೆಳೆಯರು .. ಹಾಗಾಗಿ ಜೊತೆಯಲ್ಲಿ ಆಟ .. ಆ ದಿನಗಳ ಮಜವೇ ಮಜಾ.. ಆದರೆ ಗಲಾಟೆಯಾದಾಗ ಅಪ್ಪ ಅಮ್ಮ ನನಗೆ ಹೊಡೆಯಲು ಬಂದರೆ. ತಲೆ ನೋವು ಅಂತ ಜೋರಾಗಿ ಅತ್ತು ಬಿಡುತ್ತಿದ್ದೆ (ನಿಜವಾಗಿಯೂ ತಲೆ ನೋವು ಅಸಾಧ್ಯ ಬರುತ್ತಿತ್ತು..) ಆಗ ನನ್ನ ಮೇಲಿನ ಸಿಟ್ಟನ್ನೆಲ್ಲ ಅಪ್ಪ ಅಮ್ಮ ಮುರುಳಿಯ ಮೇಲೆ ತೀರಿಸಿಕೊಳ್ಳುತ್ತಿದ್ದರು.. ನನ್ನ ಕೀಳರಿಮೆಗೆ ಇವನಿಗೆ ಬೀಳುತ್ತಿದ್ದ ಏಟು ಕೊಂಚ ಔಷಧಿಯ ರೂಪದಲ್ಲಿ ಸಹಾಯ ಮಾಡುತ್ತಿತ್ತು ಅನಿಸುತ್ತದೆ (ಹ ಹ ಹ ಹ ಹ)
ಆದರೆ ಅಂದಿಗೂ ಇಂದಿಗೂ ಎಂದಿಗೂ ಇವನ ಮೇಲಿನ ಪ್ರೀತಿ ಕಡಿಮೆಯಾಗಿಲ್ಲ.. ಆಗೋಲ್ಲ..
ಅಣ್ಣ, ಅಕ್ಕ, ನನ್ನ ಮುದ್ದು ತಮ್ಮನಾಗಿ ಬೆಳೆದು ಸುವರ್ಣ ಸಂಭ್ರಮದಲ್ಲಿ ಮುಳುಗಿ ಏಳುತ್ತಿರುವ ಮುರುಳಿಗೆ ನನ್ನ ಮನೆಗೆ ಬಂದವರು ಅತ್ತಿಗೆಯಾಗಿ, ಮಾತೃ ಸ್ವರೂಪಿಯಾಗಿ ನಿಂತಿರುವ ವಾಣಿ ಅತ್ತಿಗೆ, ನನ್ನ ಮಡದಿ ಸೀಮಾ.. ಜೊತೆಯಲ್ಲಿ ಚಿಕ್ಕಪ್ಪ ಎಂದರೆ ಹೆದರಿಕೆ .. ಪ್ರೀತಿ.. ಭಯ ಎಲ್ಲವನ್ನೂ ಒಂದು ಬಟ್ಟಲಿನಲ್ಲಿ ಕಲೆಸಿ ಪ್ರೀತಿಸುವ ವರ್ಷ, ವಿಷ್ಣು, ಶೀತಲ್ ... ಮಾವ ಮಾವ ಅಂತ ಕರೆದು ನಂತರ ಆತ್ಮೀಯ ಸ್ನೇಹಿತನಾಗಿರುವ ಅಕ್ಕನ ಮಗ ಆದಿತ್ಯ.. ಎಲ್ಲರ ಪ್ರೀತಿಯ ಹಡಗನ್ನೇ ಏರಿ ಪಯಣಿಸುತ್ತಿದ್ದಾನೆ..
ಅಣ್ಣ ವಿಜಯ್ ಮತ್ತೆ ಇವನು ಇಬ್ಬರೂ ಸ್ನೇಹಿತರಂತೆ.. ತಮಾಷೆ, ಮಾತುಗಳು, ಎಲ್ಲಾ ಯೋಜನೆಗಳಲ್ಲಿ ಸಹಕಾರ..
ಅಕ್ಕ ಇವನಿಗೆ ಎರಡನೇ ತಾಯಿಯಾಗಿದ್ದಾಳೆ.. ಪ್ರತಿ ಹಂತದಲ್ಲೂ ಇವನನ್ನು ರಕ್ಷಿಸುವ, ಸಲಹುವ ರಕ್ಷಾ ಕವಚವಾಗಿದ್ದಾಳೆ..
ಈ ಸಮಾರಂಭದಲ್ಲಿ ಮುರುಳಿಯ ಹಿತೈಷಿಯಾಗಿ ಬದರಿ, ಮತ್ತು ಅವರ ಕಚೇರಿಯ ಎಲ್ಲರೂ ಶುಭ ನುಡಿ ಹಾರೈಸಿದ್ದು..
ಆರ್ ಸಿ ಬಿ ತಂಡದ ಹಾಗೆ ಹದಿನೆಂಟು ವರ್ಷಗಳ ಬದರಿ ಮತ್ತು ಮುರುಳಿಯ ಬಂಧ.. ಅವನ ಹುಟ್ಟು ಹಬ್ಬದ ಕೇಕಿನಲ್ಲೂ ಕಂಡಿತ್ತು.. "ಆಫೀಸಿನಲ್ಲಿ ಕಿತ್ತಾಡಿದ್ದೇವೆ, ಕೂಗಾಡಿದ್ದೇವೆ, ಆದರೆ ನಮ್ಮ ಸ್ನೇಹ ಹೊಸದಾಗುತ್ತಲೇ ಇದೆ.. ಮುರುಳಿ ನಮ್ಮ ಆಸ್ತಿ" ಎನ್ನುವಂತಹ ಮಾತುಗಳು.. ಅದ್ಭುತವಾಗಿತ್ತು
ಅವನ ತುಂಟತನ, ಹಠಮಾರಿತನ, ಕೋಪ ಎಲ್ಲವನ್ನೂ ಸಹಿಸಿಕೊಂಡಿರುವ ಅವನ ಕಟ್ಟೆ ಬಳಗದ (ನನ್ನ ಅಪ್ಪ ಮುರುಳಿಯ ಸ್ನೇಹಿತರನ್ನು ಕರೆಯುತ್ತಿದ್ದದ್ದು ಹೇಗೆ .. ಗುರುಗಳು, ನರೇಂದ್ರ, ಜೈ, ರಾಜ, ಅರುಣ್, ರಮೇಶ, ಮಲ್ಲಿಕ್) ಸ್ನೇಹಿತರು ಶುಭಕೋರಿದರು.. ಇವನನ್ನು ಬಿಟ್ಟು ಅವರು ಎಲ್ಲೂ ಹೋಗೋಲ್ಲ.. ಇವನು ಬರೋಲ್ಲ ಅಂದರೆ ಕಾರ್ಯಕ್ರಮವನ್ನೇ ರದ್ದು ಪಡಿಸುವಷ್ಟು ಇವನ ಮೇಲೆ ಪ್ರೀತಿ.. , ಕಟ್ಟೆ ಬಳಗದ ಅಧ್ಯಕ್ಷರು ಮುರುಳಿಯ ಬಗ್ಗೆ ಆಡಿದ ಅಭಿಮಾನ ಪೂರಿತ ಮಾತುಗಳು ಈ ಸಮಾರಂಭಕ್ಕೆ ಅದ್ಭುತ ಸ್ಪರ್ಶ ನೀಡಿತು.. ಮುರುಳಿಯ ಮೊಬೈಲ್ ಹೆಲ್ಲೊ ಟ್ಯೂನ್ "ಮಾಮರವೆಲ್ಲೋ ಕೋಗಿಲೆಯೆಲ್ಲೋ ಏನೀ ಸ್ನೇಹ ಸಂಬಂಧ" ಹಾಡಿನಂತೆ ಮುರುಳಿಯ ಜೊತೆಗೆ ನಾವು .. ಅಂದ ಮಾತಿಗೆ ಎಲ್ಲರೂ ಚಪ್ಪಾಳೆ ತಟ್ಟಿದರು.. ಬದುಕಿನ ಸಾರ್ಥಕತೆಯ ಕ್ಷಣಗಳು ಅಂದರೆ ಇದೆ ಅಲ್ಲವೇ.. ಯಾರಿಗೂ ಹೇಳದೆ. .ಇಷ್ಟೊಂದು ಅವನ ಬಂಧು ಮಿತ್ರರು ಬಂದಿದ್ದಾರೆ.. ಇನ್ನೂ ಎಲ್ಲರಿಗೂ ಹೇಳಿದ್ದರೆ ಬಹುಶಃ ಈ ಸಭಾಂಗಣ ಸಾಕಾಗುತ್ತಿರಲಿಲ್ಲ.. ವಾಹ್ ಇದು ಮಾತು ಅಂದರೆ.. ಇದು ಸ್ನೇಹ ಬಂಧ ಅಂದರೆ ಅಲ್ಲವೇ..
ಕೋರವಂಗಲ ಕುಟುಂಬದ ರಜನೀಶ ನಮ್ಮನ್ನು ನಾಲ್ಕು ದಶಕಗಳ ಹಿಂದಕ್ಕೆ ಕರೆದೊಯ್ದು ಅಂದಿನ ಕತೆಯನ್ನು ಹೇಳಿದ್ದು ಬಾಲ್ಯದ ನೆನಪನ್ನು ಹಸಿರಾಗಿಸಿತು..
ಕೋರವಂಗಲ ಕುಟುಂಬದ ನಮ್ಮ ಪದ್ಮ ಚಿಕ್ಕಮ್ಮ, ನರೇಂದ್ರ, ರಜನೀಶ, ಕಾರ್ತಿಕ್, ಸು"ಮಗಳೇ", ನಾಗಲಕ್ಷ್ಮಿ, ಮಧುರ ಪುಟ್ಟಿ, ಮಕ್ಕಳಾದ ವೈಷ್ಣವಿ, ಭರತ, ಸರಯೂ, ಸೌರವಿ, ಸುರಭಿ, ವಿಷ್ಣು, ಶೀತಲ್, ವರ್ಷ, ಇಂಪನಾ, ಸಿಂಚನ ಇವರೆಲ್ಲ ಜೊತೆಯಲ್ಲಿ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಸುವರ್ಣ ಚೌಕಟ್ಟು ಒದಗಿಸಿತು..
ಈ ಕಾರ್ಯಕ್ರಮಕ್ಕೆ ತೆರೆಯ ಹಿಂದೆ ಶ್ರಮಿಸಿದ ಬದರಿ ಮತ್ತು ಅವರ ಆಪ್ತ ತಂಡಕ್ಕೆ (ಬದರಿ, ರೂಪ, ಸುರೇಶ, ಮಾಧವ, ಮಧು .. ಇತರ ಆತ್ಮೀಯ ಗೆಳೆಯರು ... ಕ್ಷಮಿಸಿ ಎಲ್ಲರ ಹೆಸರು ನೆನಪಿಗೆ ಬರುತ್ತಿಲ್ಲ) ಜೊತೆಗೆ ಬದರಿ ಮತ್ತು ಈ ಕಾರ್ಯಕ್ರಮಕ್ಕೆ ನಮ್ಮ ಮನೆಯ ಕೊಂಡಿಯಾಗಿ ನಿಂತ ನನ್ನ ಅಣ್ಣ ವಿಜಯ್ ಮತ್ತು ಆತನ ಕಾರ್ಯಶೀಲ ಕುಟುಂಬಕ್ಕೆ ಧನ್ಯವಾದಗಳು..
ಅಚ್ಚರಿ ಅನ್ನುವುದು ಹೀಗೆ ಬರಬೇಕು.. ಹೀಗೆ ಇರಬೇಕು.. !
ಭರ್ಜರಿ ಊಟ.. ಭರ್ಜರಿ ಫೋಟೋಗಳು.. ಎಲ್ಲವೂ ಸೊಗಸಾಗಿದ್ದವು..
ಎಲ್ಲರನ್ನೂ ಬೀಳ್ಕೊಟ್ಟು ಹೊರಡುವಾಗ ಮುರುಳಿಯ ಮನದಲ್ಲಿ ಹಾಡುತ್ತಿದ್ದ ಹಾಡು
"ಕಂಗಳು ವಂದನೆ ಹೇಳಿದೆ
ಹೃದಯವೂ ತುಂಬಿ ಹಾಡಿದೆ..
ಆಡದೆ ಉಳಿದಿಹ ಮಾತು ನೂರಿದೆ"
You have written your heart out!!!
ReplyDeleteThank.you Rajaneesha
DeleteSuper writeup srikanthaa
ReplyDeleteThank you brother
Deleteನಾವು ಊರಿನಲ್ಲಿ ಇರದ ಕಾರಣ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ ಭಾವ...ಆದರೆ ನಿಮ್ಮ ಬರಹದಿಂದ ನಾವೂ ಕಾರ್ಯಕ್ರಮದಲ್ಲಿ ಭಾಗಿಯಾದಂತೆ ಭಾಸವಾಯಿತು☺️🙏🙏
ReplyDeleteThank you akkayya
Delete🙏❤️
ReplyDeleteThank you
Deleteಮೊದಲು ಮುರಳಿಗೆ ಐವತ್ತರ ಹುಟ್ಟುಹಬ್ಬದ ಹಾರ್ದಿಕ ಶುಭಾಶಯಗಳು, ಶ್ರೀಕಾಂತ ನಿನ್ನ ಬರಹ ಓದಿದ ನಂತರ ನಾನು ಮುರಳಿಯ ಜೊತೆಗಿನ ಒಡನಾಟದ ಪುಸ್ತಕದ ಪುಟ ತೆರೆಯುತ್ತಾ ಹೋಯಿತು, ಅದ್ಭುತ ಲೇಖನ ಶ್ರೀ, ಮತ್ತೊಮ್ಮ ಶುಭಾಶಯಗಳು
ReplyDeleteSuper sir
ReplyDeleteWonderful writeup. Felt as if I attended that function. Mr. Murali is so lucky to have such loving friends and family
ReplyDeleteಮುರುಳಿಗೆ ಹುಟ್ಟುಹಬ್ಬದ ಶುಭಾಶಯ ಗಳು 🎂🎂🎂ಅಣ್ಣ ತಮ್ಮಂದಿರು ಮತ್ತು ಅಕ್ಕ ಖುಷಿಯಿಂದ ಇರಿ ಒಳ್ಳೆಯದಾಗಲಿ 🙌🙌🙌
ReplyDelete