Tuesday, February 28, 2017

ಹಳ್ಳಿಯಾತನ ಅಮರವಾಣಿ...

ಬದುಕು ತೋರುವ  ಮಾರ್ಗ...  ಅಚಾನಕ್ ಕೊಡುವ ತಿರುವುಗಳು .. ಮನುಜನನ್ನು ಅಂತರ್ಮುಖಿಯನ್ನಾಗಿ ಮಾಡುವುದು ಸಹಜ.

ಪರಿಸ್ಥಿತಿಗೆ ಹೇಗೆ ಉತ್ತರಿಸುವುದು, ಹೇಗೆ ನಿಭಾಯಿಸುವುದು....  ಒಂದು ಚಿದಂಬರ ರಹಸ್ಯವಾಗೇ ಉಳಿದುಬಿಡುತ್ತದೆ..

ಸುಮಾರು ಮೂರುವರೆ ಘಂಟೆಯಾಗಿತ್ತು..ಬೆಳಗಿನ ಜಾವ..

ಶ್ರೀ ಶ್ರೀ.. ಯಾರೋ ಕರೆದ ಹಾಗೆ..

ದ ರಾ ಬೇಂದ್ರೆಯವರ ಯುಗ ಯುಗಾದಿ ಕಳೆದರೂ.. ಹಾಡಿನಲ್ಲಿ ಬರುವಂತೆ.. "ನಿದ್ದೆಗೊಮ್ಮೆ ನಿತ್ಯ ಮರಣ ಎದ್ದ ಸಲ ನವೀನ ಜನನ" ತರಹ ಗಾಢವಾದ ನಿದ್ದೆ ಮಾಡುವ ಆಸಾಮಿ ನಾ.. ನಮ್ಮ ಮನೆಯಲ್ಲಿ ಹೇಳುವಂತೆ ಮೈಮೇಲೆ ಆನೆ ಹೋದರೂ ಎಚ್ಚರವಾಗದಂತಹ ವರವನ್ನು ಆ ಭಗವಂತ ನೀಡಿದ್ದಾನೆ..

ನಾ ಪೂರ್ತಿ ಗಾಢವಾದ ನಿದ್ದೆಯಲ್ಲಿದ್ದೆ.. ಶ್ರೀ ಶ್ರೀ ಮತ್ತೊಮ್ಮೆ ಕರೆದ ಹಾಗೆ.. ಕಣ್ಣು ಬಿಟ್ಟೆ ಗವ್ ಗತ್ತಲೆ.. ಏನೂ ಕಾಣುತ್ತಿರಲಿಲ್ಲ..

"ಶ್ರೀ ಶ್ರೀ.. "
ಐದಾರು ಬಾರಿ ಮೈಯನ್ನು ಅಲುಗಾಡಿಸಿದಾಗ ಎಚ್ಚರವಾಯಿತು ಮತ್ತೆ  ಗೊತ್ತಾಯಿತು.. ನನ್ನ ಮಡದಿ..

"ಏನಪ್ಪಾ"

"ಶ್ರೀ ... ಅಪ್ಪ ಕನಸಲ್ಲಿ ಬಂದಿದ್ರು.. ನೋಡು ಸವಿ ನಿನ್ನ ಬಾಳಿನಲ್ಲಿ ಶ್ರೀಕಾಂತ ಬಂದದ್ದು ಫೆಬ್ರುವರಿ ೨೪ .. ನಾ ಇವಳನ್ನು ಬಿಟ್ಟು ಪರಲೋಕಕ್ಕೆ ಹೋಗಿದ್ದು ಜುಲೈ ೨೪.. ನನ್ನ ಬಾಳಸಂಗಾತಿ ನನ್ನ ಕೂಡಿಕೊಳ್ಳಲು ಹೊರಟಿದ್ದು ಫೆಬ್ರುವರಿ ೨೪..
ಈ ಇಪ್ಪತ್ತನಾಲ್ಕು ದಿನಾಂಕ ನಮ್ಮ ಬಾಳಿನಲ್ಲಿ ವಿಶೇಷವಾಗಿದೆ.. ಹೀಗೆ ಹೇಳಿದರು ಶ್ರೀ.. "

ನಾ ನನ್ನ ಮಡದಿಯ ತಲೆ ಸವರಿ "ನೋಡು ಟಿ.. ಜೀವನದಲ್ಲಿ ಹೀಗೆ ಆಗುವುದು ಸಹಜ.. ಕಳೆದುಕೊಂಡ ನೋವಿನ ಅರಿವು ನನಗಿದೆ.. ನಾವು ಸುಖವಾಗಿ ನೆಮ್ಮದಿಯಿಂದ ಇದ್ದದರಲ್ಲಿ ತೃಪ್ತಿ ಪಡುತ್ತಾ ನಲಿವಿನಿಂದ ಬಾಳ್ವೆ ಮಾಡಿದರೆ ಅದೇ ನಾವು ಅಗಲಿದ ಜೀವಕ್ಕೆ ತೋರುವ ಗೌರವ.. "

ಕಣ್ಣಲ್ಲಿ ನೀರಿತ್ತು.. "ಹೌದು ಶ್ರೀ.. ನಿಮ್ಮ ಮಾತು ಸರಿ" ಎಂದಳು..

ಇವಳು ಭಾವುಕಳಾಗುವುದು ತುಂಬಾ ವಿರಳ.. ನಾ ಆಗೊಮ್ಮೆ ಈಗೊಮ್ಮೆ ಈ ಹದಿನೈದು ವರ್ಷಗಳಲ್ಲಿ ಕಂಡಿದ್ದೇನೆ... ಇವಳ ಈ ಮಾತು ಮತ್ತು ಕನಸಿನಲ್ಲಿ ಮೂಡಿಬಂದ ಮಾತುಕತೆ ನನ್ನನ್ನು ಹಿಂದಿನ ದಿನಕ್ಕೆ ಕರೆದೊಯ್ದಿತು.

ಬೆಳಿಗ್ಗೆ ಎದ್ದು ನನ್ನ ನಿತ್ಯ ಕರ್ಮಗಳನ್ನು ಮುಗಿಸಿ ಆಫೀಸಿಗೆ ಹೊರಟಾಗ ಸುಮಾರು ಏಳು ಘಂಟೆ.. ಅಂದು ಜಗತ್ತೇ ಮೃತ್ಯುಂಜಯ ಭಕ್ತರ ಭಕ್ತ ಪರಶಿವನ ದಿನ ಅಂದರೆ ಮಹಾಶಿವರಾತ್ರಿ... ಎಲ್ಲೆಡೆಯೂ ಸಂಭ್ರಮ. ಫೇಸ್ಬುಕ್ ವಾಟ್ಸಾಪ್              ಇ -ಮೇಲ್ ಎಲ್ಲಾ ಕಡೆಯೂ ಶಿವಮಯ...  ಸರ್ವಂ ಶಿವಮಯಂ.. !

ಆ ಕಡೆಯಿಂದ ಕರೆಬಂತು.. "ಶ್ರೀಕಾಂತ್ ಬೇಗ ಬನ್ನಿ .. ಅಮ್ಮನನ್ನು (ನನ್ನ ಅತ್ತೆಯನ್ನು) ತುರ್ತು ನಿಗಾ ಘಟಕಕ್ಕೆ ಕರೆದುಕೊಂಡು ಹೋಗಿದ್ದಾರೆ.. ರಕ್ತದ ಒತ್ತಡ ಬಹಳ ಕಡಿಮೆಯಾಗಿದ್ದ ಕಾರಣ, ಹೀಮೋಗ್ಲೋಬಿನ್ ನಿರಂತರವಾಗಿ ಕಡಿಮೆಯಾಗುತ್ತಿರುವ ಕಾರಣ.. ವೈದ್ಯರು ಉಳಿಯುವುದು ಕಷ್ಟ ಎಂದಿದ್ದಾರೆ.. " ಮಡದಿಯನ್ನು ನೋಡಿದೆ. ಕಣ್ಣಲ್ಲಿ ಪ್ರವಾಹ ಉಕ್ಕುತ್ತಿತ್ತು.. ಹಾಗೆ ಸಮಾಧಾನ ಮಾಡಿ.. ಕಾರಿನಲ್ಲಿ ಕೂತೆವು..

ಆಸ್ಪತ್ರೆಗೆ ಬರುವತನಕ ಇವಳಿಗೆ ನೆಮ್ಮದಿಯಿಲ್ಲ... ದಡ ದಡನೆ ಮೂರನೇ ಮಹಡಿಗೆ ಬಂದೆವು.. ಅಲ್ಲಿ ನನ್ನ ಮಡದಿಯ ಅಣ್ಣ.. ಅಮ್ಮ ಉಳಿಯುವುದು ಕಷ್ಟ ಅಂತ ಹೇಳಿ ಬಿಕ್ಕಳಿಸಲು ಶುರುಮಾಡಿದರು.. ಇವಳು ಹೃದಯ ಒಡೆಯುವಂತೆ ಅಳಲು ಶುರುಮಾಡಿದಳು.. ಇಬ್ಬರನ್ನು ಸಮಾಧಾನ ಪಡಿಸಿ.. ನಾ ನನ್ನ ಮನೆಗೆ ವಿಷಯ ಮುಟ್ಟಿಸಲು ಕೆಳಗೆ ಬಂದೆ.. ಅನಂತರ ಸುಮಾರು ಹತ್ತು ನಿಮಿಷದಲ್ಲಿ ಎಲ್ಲವೂ ಮುಗಿದಿತ್ತು..

ನಂತರದ ಕಾರ್ಯಕ್ರಮದ ಬಗ್ಗೆ ರೂಪುರೇಷೆಗಳು ಸಿದ್ಧವಾಗಿತ್ತು..

ಹಿರಿಯ ಸಂಬಂಧಿಗಳ ಅಭಿಪ್ರಾಯದಂತೆ.. ಅರಸೀಕೆರೆಯ ಬಳಿಯ ಕಲ್ಯಾಡಿ ಗ್ರಾಮಕ್ಕೆ ಹೋದೆವು.. ಅಂತ್ಯ ಸಂಸ್ಕಾರದ ಪದ್ಧತಿಗಳು ಆರಂಭವಾದವು..

ನನ್ನ ಕಣ್ಣುಗಳು ಮಂಜಾಗಿರಲಿಲ್ಲ.. ಆದರೆ ಹೃದಯದಲ್ಲಿ ಉಕ್ಕುತ್ತಿದ್ದ ನೀರವತೆಯ ಪ್ರವಾಹದ ಆಣೆಕಟ್ಟು ಯಾವಾಗ ಬೇಕಾದರೂ ಒಡೆದು ಹೋಗಲು ಸಿದ್ಧವಾಗಿತ್ತು.. ತದೇಕ ಚಿತ್ತದಿಂದ ಆ ಅಂತಿಮ ನಮನದ  ಸಂಸ್ಕಾರವನ್ನು ನೋಡುತ್ತಾ ಕೂತಿದ್ದೆ.

ಕೆಲವು ಘಂಟೆಗಳ ಹಿಂದೆ ನಮ್ಮ ಜೊತೆಯಲ್ಲಿ ಮಾತಾಡಿದ್ದ ಜೀವ.. ಇಂದು ನಾ ಮಾತಾಡಲಾರೆ ಎಂದು ಬಾಯಿಗೆ ಬಟ್ಟೆ ಬಿಗಿದುಕೊಂಡು ಮಲಗಿದ್ದರು.. ಕಣ್ಣುಗಳು ಶಾಶ್ವತವಾಗಿ ಮುಚ್ಚಿಕೊಂಡಿದ್ದವು.. ಜೀವದ ವಾಯು ತೆಗೆದುಕೊಂಡು ಉಸಿರಾಡುವ ಶ್ವಾಸಕೋಶ ಬರ ಪ್ರದೇಶದಲ್ಲಿ ಮುಚ್ಚಿದ ಅಂಗಡಿಯಂತೆ ಇತ್ತು.. ಸುಮಾರು ಒಂದು ವರ್ಷದಿಂದ ಮಾತ್ರೆಗಳು ಟಾನಿಕ್, ವೈದ್ಯಕೀಯ ಚಿಕಿತ್ಸೆಗಳಿಂದ ಬಳಲಿ ಕೃಷವಾಗಿದ್ದ ದೇಹದಲ್ಲಿ ಸತ್ವದ ಅಂಶವೇ ಇರಲಿಲ್ಲ.. ಆರೋಗ್ಯ ಭಾಗ್ಯ.. ಅದಿಲ್ಲದೆ ಹೋದರೆ ಏನೇ ಇದ್ದರೂ ನಿಷ್ಪ್ರಯೋಜಕ ಅನ್ನಿಸುವ ಉದಾಹರಣೆ ಕಣ್ಣ ಮುಂದಿತ್ತು..

ನನ್ನ ಗಮನ ಸುತ್ತಮುತ್ತಲ ಮಾತುಗಳು, ಅದರ ಹಿಂದಿನ ತಕರಾರುಗಳು, ಬೇಕಾಗಿದ್ದ, ಬೇಡವಾಗಿದ್ದ ಯಾವ ಮಾತುಗಳ ಕಡೆಯೂ ಲಕ್ಷ್ಯವಿರಲಿಲ್ಲ..ಒಂದು ರೀತಿಯ ವೇದಾಂತ ಜೀವಿಯ ಉತ್ತುಂಗದ ತುದಿಯಲ್ಲಿ ನಿಂತ ಅನುಭವ.. ಮನುಜನ ಜನ್ಮ ಇಷ್ಟೆಯೇ.. ಹುಟ್ಟುವುದು ಒಂದು ಕಡೆ.. ಬೆಳೆಯುವುದು ಒಂದು ಕಡೆ.. "ಕಡೆ" ಒಂದು ಕಡೆ.. ಅಯ್ಯೋ ಇಷ್ಟರ ನಡುವೆ ಲೆಕ್ಕವಿಲ್ಲದಷ್ಟು ಸುಂದರ ಕ್ಷಣಗಳನ್ನು ಅನುಭವಿಸಿದ ಹಿರಿಯ ಜೀವದ ಜೀವ,  ಒಂದು ಕ್ಷಣದಲ್ಲಿ ಪರಮಾತ್ಮನ ಪಾದದಡಿಗೆ ತೆರಳಿದ್ದು.. ಏಕೆ ಹೀಗೆ.. ಹೀಗಾದರೆ ಹೇಗೆ.. ಈ ರೀತಿಯ  ನೂರಾರು ಪ್ರಶ್ನೆಗಳು ಕಲ್ಲು ಒಗೆದ ಜೇನುಗೂಡಿನಿಂದ ಹಾರಿಬರುವ ಜೇನು ನೊಣಗಳಂತೆ ನನ್ನನ್ನು ಕಾಡಲು ಶುರು ಮಾಡಿದವು..

ಗೋವಿಂದ ಗೋವಿಂದ ಎನ್ನುತ್ತಾ ಎಲ್ಲರೂ ಆ ಹಿರಿಯಜೀವದ ಕಳೇಬರವನ್ನು ಹೆಗಲು ಕೊಟ್ಟು ನೆಡೆಯಲು ಶುರುಮಾಡಿದೆವು.. ಎಲ್ಲರಿಗೂ ಹೆಗಲು ಕೊಡಲು ಅವಕಾಶ ಮಾಡಿಕೊಡಿ.. ಇದು ಎಲ್ಲರ ಮಾತಾಗಿತ್ತು... ಒಂದು ೩೦೦ ಮೀಟರ್ ನೆಡೆದು ಹೊರಟೆವು.. ಕಣ್ಣಲ್ಲಿ ನೀರು... ಮನದಲ್ಲಿ ಪ್ರವಾಹ.. ಮೌನದಿಂದಾಚೆಗಿನ ಲೋಕದಲ್ಲಿ ಎಲ್ಲರೂ ವಿಹರಿಸುತ್ತಿದ್ದರು.. ಯಾರಿಗೂ ಮಾತಾಡಲು ಅವಕಾಶವಿರದ ಪರಿಸ್ಥಿತಿ ಅದು... ಮೌನವೇ ಒಳ್ಳೆಯ ಆಭರಣ ಎನ್ನಿಸಿದ ಹೊತ್ತು.

ಅಲ್ಲಿದ್ದ ಕಟ್ಟಿಗೆಯ ರಾಶಿಯನ್ನು ನೋಡಿದೆ... ಬಣ್ಣ ಕಳೆದುಕೊಂಡು ಅದು ತನ್ನ ಅಂತಿಮ ಪಯಣಕ್ಕೆ ಸಿದ್ಧವಾಗಿದೆ ಅನ್ನಿಸಿತು. ತೆಂಗಿನ ಕಾಯಿ ಸಿಪ್ಪೆ.. ತನ್ನ ಒಡಲಲ್ಲಿದ್ದ ಅಮೃತಧಾರೆಯನ್ನು ಧಾರೆಯೆರೆದು, ತನ್ನ ಪುಣ್ಯದ ಫಲ ಆಗಲೇ ಯಾವುದೇ ಅಡಿಗೆಯಲ್ಲಿ ಲೀನವಾಗಿದ್ದು.. ಈಗ ಬರಿ ತನ್ನ ದೇಹದ ಸಿಪ್ಪೆ ಮಾತ್ರ ನಿಮ್ಮ ಅನುಕೂಲಕ್ಕೆ ನಿಂತಿದ್ದೇನೆ ಎನ್ನುವಂತೆ ತೋರಿತು.. ತಾನು ಹಸಿರಾಗಿದ್ದಾಗ ಸುತ್ತ ಮುತ್ತಲ ಪ್ರದೇಶಕ್ಕೆ ನೆರಳು ನೀಡುತ್ತಿದ್ದೆ.. ಆದರೆ ನನ್ನ ಬಣ್ಣ ಹೋದ ಮೇಲೆ.. ಅಗ್ನಿದೇವನಿಗೆ ರಂಗು ತರಲು ನಾ ಆಹುತಿಯಾಗುತ್ತೇನೆ ಎಂದಿತ್ತು ತೆಂಗಿನ ಗರಿ...... !

ಇಷ್ಟೆಲ್ಲಾ ನೆಡಯುತ್ತಾ ಇದ್ದರೂ ನನಗೆ ಸಂಬಂಧವಿಲ್ಲ ಎನ್ನುವಂತೆ ಹಿರಿಯ ಜೀವ ಮಲಗಿತ್ತು.. ಸಂಸ್ಕಾರದ ಅಂತಿಮ ಹಂತ ತಲುಪಿತ್ತು.. ಕಡೆಯ ಬಾರಿ ಮುಖ ದರ್ಶನ ಮಾಡಿದರು.. ನಂತರ ಆ ದೇಹದ ಮೇಲೆ ಭವ ಬಂಧನದ ಯಾವುದೇ ಬಂಧವಿರಬಾರದು ಎಂದು.. ಕಟ್ಟಿದ್ದ ಹಗ್ಗ, ಬೆಸೆದಿದ್ದ ಅಂತಿಮ ಯಾತ್ರೆಯ ಚಟ್ಟ ಎಲ್ಲವನ್ನು ತನ್ನ ಮೊದಲಿನ ಸ್ಥಿತಿಯಿಂದ ಭಿನ್ನತೆ ಕಾಣುವಂತೆ ಮಾಡಲಾಯಿತು.. ಅಲ್ಲಿದ್ದ ಪುರೋಹಿತರು... ಆ ದೇಹ ತೊಟ್ಟಿದ್ದ ಬಟ್ಟೆಯನ್ನು ಸ್ವಲ್ಪವೇ ಹರಿಯಿರಿ ಎಂದಾಗ... ಪೂರ್ತಿ ಹರಿಯಬೇಕೆ.. ಅಥವಾ ತುಸುವೇ ಹರಿಯಬೇಕೆ ಎನ್ನುವ ಜಿಜ್ಞಾಸೆ ಹುಟ್ಟಿತು.. ಆಗ ಅಲ್ಲಿದ್ದ ಹಿರಿಯರು ಮತ್ತು ಪುರೋಹಿತರು. .. ಬೇಡ ಬೇಡ ಸ್ವಲ್ಪವೇ ಶಾಸ್ತ್ರಕ್ಕೆ ಹರಿಯಿರಿ ಸಾಕು "ಬೆತ್ತಲೆ ಮಾಡಬಾರದು" ಎಂದರು..

ನನ್ನ ಯೋಚನಾ ಲಹರಿ ಮತ್ತೆ ಕಡಲಿನ ಅಲೆಗಳಂತೆ ಅಪ್ಪಳಿಸಲು ಶುರುಮಾಡಿದವು.. ಭಕ್ತ ಕುಂಬಾರ ಚಿತ್ರದಲ್ಲಿ ಅಣ್ಣಾವ್ರು ಹಾಡು "ಬರುವಾಗ ಬೆತ್ತಲೆ.. ಹೋಗುವಾಗ ಬೆತ್ತಲೆ.. ಬಂದು ಹೋಗುವ ನಡುವೆ ಕತ್ತಲೆ"   ಕಾಡುತ್ತಿತ್ತು.. ಮೌನವಾಗಿ ಅಂತರಂಗದಲ್ಲಿಯೇ ಹನಿಹನಿಯಾಗಿ ಕಣ್ಣೀರು ಇಂಗತೊಡಗಿತ್ತು..

ದೇಹದಲ್ಲಿ ಜಿಡ್ಡಿನ ಅಂಶ ಇಲ್ಲ ಅಂತ ಒಬ್ಬರು ಹೇಳಿದರು.. ಅದಕ್ಕೆ ಸಮವಾಗಿ.. ನನ್ನ ದೇಹವೂ ಒಣಗಿದ ವಾಟೆಗರಿಯಂತಾಗಿದೆ ಎಂದು ಕಟ್ಟಿಗೆ ಹಲ್ಲು ತೋರಿಸಿತು..  ಬ್ರಹ್ಮ ಸೃಷ್ಟಿಸಿದ ಕಟ್ಟಿಗೆ.. ಬ್ರಹ್ಮ ಸೃಷ್ಟಿಸಿದ ಈ ದೇಹವೆಂಬ ಕಟ್ಟಿಗೆ .. ಪೈಪೋಟಿ ಬಿದ್ದಂತೆ ಅಗ್ನಿದೇವನನ್ನು ಆಲಂಗಿಸಿಕೊಂಡು ಅಗ್ನಿಯ ಜಳಕ ಮಾಡಲು ಶುರುಮಾಡಿದವು... ಹಾಕಿದ್ದು ಕೆಲವೇ ಗ್ರಾಂ ತುಪ್ಪಾ.. ಕಾರಣ ತುಪ್ಪವೇ ಬೇಕಿರಲಿಲ್ಲ.. ಸಂಸಾರ ಸಾಗರದಲ್ಲಿ ಮುಳುಗೆದ್ದಿದ್ದ ಕಾಯ, ಸೂರ್ಯನ ತಾಪಕ್ಕೆ ಒಳಗಿನ ಜಲವನ್ನು ಸಂಪೂರ್ಣ ಆವಿಯಾಗಿಸಿಕೊಂಡಿದ್ದ ಕಟ್ಟಿಗೆ.. ಹೆಚ್ಚು ಹೊತ್ತು ಕಾಯಿಸದೆ ಅಗ್ನಿದೇವ ತನ್ನ ಕೆನ್ನಾಲಿಗೆಯನ್ನು ಎಲ್ಲಾ ದಿಕ್ಕುಗಳಲ್ಲಿಯೂ ಹಬ್ಬಿಸಿಕೊಂಡು ಭಕ್ಷಿಸಲು ಶುರುಮಾಡಿದ್ದ..

ಚಿತ್ರ ಕೃಪೆ - ಅಂತರ್ಜಾಲ 

ಸುಮಾರು ೪೫ ನಿಮಿಷಕ್ಕೂ ಹೆಚ್ಚು ನಾ ಅಲ್ಲಿಯೇ ಕುಳಿತ ಶಿವನ ಧ್ಯಾನ ಮಾಡಿದೆ..

ಸ್ಮಶಾನವಾಸಿ ಪರಮಶಿವ.. ಅವನ ಧ್ಯಾನ ರುಧ್ರಭೂಮಿಯಲ್ಲಿ.. ದಿನ ಶಿವರಾತ್ರಿಯ ಸುಮೂಹೂರ್ತ.. ಎಲ್ಲವೂ ಕನಸಲ್ಲಿ ನೆಡೆಯಿತ್ತಿದೆಯೇನೋ ಎನ್ನುವಂಥ ಭಾಸವಾಗುತ್ತಿತ್ತು..

ಇನ್ನೇನೂ ಹೊರಗೆ ಹೊರಡಬೇಕು . ಆ ಊರಿನ ಒಬ್ಬ ಹಿರಿಯ ವ್ಯಕ್ತಿ.. "ಬೆತ್ತಲೆ ಮಾಡದೆ ಸಂಸ್ಕಾರ ಮಾಡಬಾರದು.. "

ಆ ಕಡೆಯಿಂದ ಬಂದ ಉತ್ತರ.. "ಬೆತ್ತಲೆ ದಹನ ಮಾಡಬಾರದು..."

ಹಳ್ಳಿಯಾವ ನೋಡಿದರೆ ಅಕ್ಷರಸ್ಥ ಅನ್ನಿಸುವ ಹಾಗಿರಲಿಲ್ಲ ಆತ  "ಹೆಣಕ್ಕೇನೂ ಗೊತ್ತು ಬೆತ್ತಲೆ"

ನಾ ಸರ್ರನೆ ತಿರುಗಿ ನೋಡಿದೆ.. ನಿರ್ಮಲ ಮುಖ ಆತನದು.. ಆದರೆ ಆತ ಹೇಳಿದ ಆ ಮೂರು ಪದಗಳು.. ಅಬ್ಬಾ

ಆ ಮನುಷ್ಯ ಹೇಳಿದ್ದು ಮೂರೇ ಮೂರು ಪದಗಳು.. ಅರ್ಥ ಇಡೀ ಸಂಸಾರದ ಸಾರವೇ ಈ ಮೂರು ಪದಗಳಲ್ಲಿ ಮೂಡಿಬಂದದ್ದು.. ಮೊದಲೇ ಮೊಸರು ಗಡಿಗೆಯಾಗಿದ್ದ ನನ್ನ ತಲೆ ಇನ್ನಷ್ಟು ಕದಡಿ ಹೋಗಲು ಶುರುಮಾಡಿತು..

ಬೆಂಗಳೂರಿಗೆ ಬಂದ ಮೇಲೂ ನನಗೆ ಆ ಸಾಲುಗಳೇ ಕಾಡತೊಡಗಿತು..!!!

Monday, February 13, 2017

ಕಾಣದಂತೆ ಮಾಯವಾದನೋ .... ಭಾಗ - ೧

ಹಚ್ಚಿದ್ದ ಕಿಂಗ್ ಇನ್ನೂ ಮುಗಿದಿರಲಿಲ್ಲ.. ಆಗಲೇ ಆಶ್ ಟ್ರೇ ತುಂಬಾ ಕಿಂಗ್ ತುಂಡುಗಳು ತುಂಬಿತ್ತು. ಕೂತಿದ್ದ ಆಫೀಸಿನ ಕೊಠಡಿ ದಟ್ಟವಾದ ಧೂಮದಿಂದ ತುಂಬಿತ್ತು.. ಗಡಿಯಾರ ಬೆಳಗಿನ ಜಾವ  ಮೂರು ಎಂದು ಸಾರಿ ಸಾರಿ ಹೇಳುತ್ತಿತ್ತು. ಕುಡಿದು ಕಸದ ಬುಟ್ಟಿಯಲ್ಲಿ ಹಾಕಿದ್ದ ಟೀ, ಕಾಫಿ ಕಪ್ಪುಗಳು ನಿದ್ದೆಯನ್ನು ದೂರ ದೂರ ತಳ್ಳಿದ್ದು ನಾವೇ ಎಂದು ಸಾಕ್ಷ್ಯ ತೋರಿಸುತ್ತಿತ್ತು.

ಕೆದರಿದ ತಲೆಕೂದಲು, ಕೆಂಪಾದ ಕಣ್ಣುಗಳು.. ಅಸ್ತವ್ಯಸ್ಥವಾಗಿದ್ದ ಸಮವಸ್ತ್ರ.. ಟೇಬಲ್ ಮೇಲೆ ಹರಡಿದ್ದ ಫೈಲಿನ ಕಾಗದಗಳು, ಫೋಟೋಗಳು.. ಬೇರೆ ಏನನ್ನೋ ಹೇಳೋಕೆ ಕಾಯುತ್ತಿದ್ದವು. ಹೊರಗೆ ಜಿಟಿ ಜಿಟಿ ಮಳೆ... ತಾ ಹಿಡಿದಿದ್ದ ಕೇಸಿನ ತನಿಖೆ ಹೇಗೆ ಮುಂದುವರೆಸೋದು ಅನ್ನೋದು ಗೋಜಲಾಗಿತ್ತು.

"ಸಾರ್. .. ಇನ್ನೊಂದು ಕಾಫಿ ತರಲೆ.. "

ಯೋಚನಾ ಲಹರಿಯಲ್ಲಿದ್ದ  ರಾಜೇಶನನ್ನ ಮತ್ತೆ ಧರೆಗೆ ತಂದಿತು ಆ ಧ್ವನಿ..

"ಬೇಡ್ರಿ ಸೀನಪ್ಪ.. ಆಗಲೇ ಎಷ್ಟೊಂದು ಕಾಫಿ ಆಗಿದೆ..  ಬೆಳಿಗ್ಗೆ ಆಗಲಿ ಮನೆಗೆ ಹೋಗಿ ಸ್ನಾನ ಮಾಡಿ ಫ್ರೆಶ್ ಆಗಿ ಬರ್ತೀನಿ.. "

"ಸರಿ ಸಾಹೇಬ್ರೆ ಹಾಗೆ ಮಾಡಿ.. ಹಾಳಾದ್ದು ಸುಮ್ನೆ ನಮ್ಮ ತಲೆ ತಿನ್ನೋಕೆ ಹೀಗೆಲ್ಲಾ ಮಾಡ್ತಾರೆ.. " ಗೊಣಗಾಡುತ್ತಾ ಸೀನಪ್ಪ ತಮ್ಮ ಕುರ್ಚಿಯಲ್ಲಿ ಸೇರಿಕೊಂಡರು..

ಮಳೆ ತರುತ್ತಿದ್ದ ಗಾಳಿ, ಗಾಳಿ ತರುತ್ತಿದ್ದ ಮಳೆ.. ಮೈಯನ್ನು ನಡುಗಿಸುತ್ತಿತ್ತು.. ಥರ್ಮಾಸ್ ಫ್ಲಾಸ್ಕ್ ಗಳಲ್ಲಿ  ಕಾಫೀ, ಟೀ ತಳ ಕಂಡಿತ್ತು.. ಸ್ಟೇಷನ್ ಎದುರು ಇದ್ದ ಟೀ ಅಂಗಡಿಯವ ಕೊಟ್ಟಿದ್ದ ಮಿರ್ಚಿ ಮೆಣಸಿನಕಾಯಿ, ಮಿರ್ಚಿ ಬೋಂಡಾ ಆಗಲೇ ಹೊಟ್ಟೆಯೊಳಗೆ ಅಸ್ತಂಗತವಾಗಿದ್ದವು.. ಮಳೆಯಿಂದಾಗಿ ಅವನಿಗೂ ತಲೆ ಕೆಟ್ಟು ಮಧ್ಯರಾತ್ರೀ ಸುಮಾರು ಎರಡಕ್ಕೆ ಬಾಗಿಲು ಎಳೆದುಹೋಗಿದ್ದ.

ಅದು ಕಾಡಿನಂಚಿನಲ್ಲಿರುವ ಸ್ಟೇಷನ್.. ಜೊತೆಯಲ್ಲಿ ಎರಡು ರಾಜ್ಯಗಳ ಗಡಿಯಲ್ಲಿದ್ದದ್ದು..ತಪಾಸಣೆ, ಆರಕ್ಷಕ ಸಿಬ್ಬಂದಿ .. ಇದೆಲ್ಲದರ ಜೊತೆಯಲ್ಲಿ ಬಸ್ ಮತ್ತು ರೈಲ್ವೆ ನಿಲ್ದಾಣಗಳು ಆ ಸುತ್ತಮುತ್ತಲ ಪ್ರದೇಶವನ್ನು ಗಿಜಿ ಗಿಜಿ ಎನ್ನುವಂತೆ ಮಾಡಿತ್ತು.

ಪ್ರಯಾಣಿಕರು, ಊರಿಂದ ಊರಿಗೆ ಓಡಾಡುವವರು, ಕಾಡಿನ ಮೂಲಕ ಹೋಗುವವರು ಎಲ್ಲಾರೂ ಒಂದು ಬಾರಿ ಅಲ್ಲಿ ವಿಶ್ರಮಿಸಿ ಹೋಗುತ್ತಿದ್ದ ತಾಣವಾದದ್ದರಿಂದ ಬೋಂಡದ ಅಂಗಡಿಗೆ ಒಳ್ಳೆಯ ವ್ಯಾಪಾರವಾಗುತ್ತಿತು.. ಆದರೆ ಯಾಕೋ ಆ ಘಟನೆ ನೆಡೆದ ಒಂದು ವಾರದಿಂದ ಯಾರೂ ಅಲ್ಲಿ ಹೆಚ್ಚು ನಿಲ್ಲುತ್ತಿರಲಿಲ್ಲ. ಆದರೆ ವ್ಯಾಪಾರಿಗಳು ಓಡಾಡಲೇ ಬೇಕಿದ್ದ ಅನಿರ್ವಾರ್ಯತೆ ಇದ್ದದ್ದರಿಂದಲೋ ಏನೋ.. ಇಪ್ಪತ್ತನಾಲ್ಕು ಘಂಟೆ ತೆರೆದೇ ಇರುತ್ತಿದ್ದ ಆ ಬೋಂಡದ ಅಂಗಡಿಗೆ ಗಿರಾಕಿಗಳು ಮೊದಲಿನಷ್ಟು ಇಲ್ಲದೆ ಇದ್ದರೂ, ತಡರಾತ್ರಿ ತನಕ ಹಾಗೂ ಹೀಗೂ ತನ್ನ ಸರಕನ್ನು ಮಾರುತ್ತಿದ್ದ ಆ ಅಂಗಡಿ ಮಾಲೀಕ ಗಣೇಶ.

ಒಂದು ರೀತಿಯಲ್ಲಿ ಗವ್ವ್ ಎನ್ನುವ ಕತ್ತಲೆ, ಈ ಮಳೆಯ ಕಾಟ.. ಚಳಿ.. ರಾಜೇಶನಿಗೆ ಬೆಳಿಗ್ಗೆ ಆದರೆ ಸಾಕು ಎನ್ನಿಸುತ್ತಿತ್ತು..

"ರೀ ಸೀನಪ್ಪ.. ಹಾಗೆ ಮಲಗಿರ್ತೀನಿ ಕಣ್ರೀ.. ಫೋನ್ ಏನಾದರೂ ಬಂದರೆ ನೀವೇ ಅಟೆಂಡ್ ಮಾಡಿ.. "

"ಸರಿ ಸಾಹೇಬ್ರೆ.. ನೀವು ತುಂಬಾ ಸುಸ್ತಾಗಿದ್ದೀರಾ.. ನಡೀರಿ ಸಾಹೇಬ್ರೆ ನಾನೇ ಮನೆಗೆ ಬಿಟ್ಟುಬರುತ್ತೇನೆ"

"ಬೇಡ ಸೀನಪ್ಪ.. ನೀವು ನನ್ನ ಜೊತೆ ತಿರುಗಿ ತಿರುಗಿ ಸುಸ್ತಾಗಿದ್ದೀರಾ.. ಸ್ವಲ್ಪ ಹೊತ್ತು ಇನ್ನೇನೂ ಬೆಳಗಾಗುತ್ತೆ.. ನಾ ಮನೆಗೆ ಹೋಗಿ ಸ್ವಲ್ಪ ಹೊತ್ತು ನಿದ್ದೆ ಮಾಡಿ ಬರುತ್ತೇನೆ.. ಬೆಳಿಗ್ಗೆ ರಂಗ ಬಂದ ಮೇಲೆ ನೀವು ಮನೆಗೆ ಹೋಗಿ ಆಮೇಲೆ ಬನ್ನಿ"

"ಸರಿ ಸಾಹೇಬ್ರೆ.. ಮಾತಾಡಿ ಆಯಾಸವು ಹೆಚ್ಚಾಗುತ್ತದೆ.. ನೀವು ಹಾಗೆ ನಿದ್ದೆ ಮಾಡಿ ನಾ ನೋಡಿಕೊಳ್ಳುತ್ತೇನೆ"

"ಥ್ಯಾಂಕ್ಸ್ ಕಣ್ರೀ.. ಸೀನ...... " ಇನ್ನೂ ವಾಕ್ಯವನ್ನು ಪೂರ್ತಿ ಮಾಡಿರಲಿಲ್ಲ.. ಆಗಲೇ ಕಣ್ಣು ಭಾರವಾಗಿತ್ತು.. ಹಾಗೆ ಕುರ್ಚಿಗೆ ಒರಗಿಕೊಂಡು ಕಣ್ಣು ಮುಚ್ಚಿದ್ದ..

"ಪಾಪ ಸಾಹೇಬ್ರು.. ಹಗಲು ರಾತ್ರಿ ಅನ್ನದೆ ಡ್ಯೂಟಿ ಮಾಡ್ತಾರೆ.. ಪಾಪ ಚೆನ್ನಾಗಿ ನಿದ್ದೆ ಮಾಡಲಿ" ಎಂದು ಹೇಳಿಕೊಳ್ಳುತ್ತಾ.. ಸ್ಟೇಷನ್ ಕಿಟಕಿ ಬಾಗಿಲು ಎಲ್ಲಾ ಮುಚ್ಚಿ.. ಹೊರಗಿನ ಒಂದೇ ದೀಪ ಬಿಟ್ಟು ಮಿಕ್ಕ ದೀಪಗಳನ್ನು ಆಫ್ ಮಾಡಿದ..

ಸೀನಪ್ಪನ ಮನಸ್ಸು ಒಮ್ಮೆ ಹಿಂದಕ್ಕೆ ಜಾರಿತು.. ಕಾಡಿನ ಅಂಚಿನಲ್ಲಿದ್ದ ಪೊಲೀಸ್ ಸ್ಟೇಷನ್ ಹತ್ತಿರದ ಒಂದು ಮರದ ಹತ್ತಿರ ಬೆಳಿಗ್ಗೆಯಿಂದ ಒಬ್ಬ ವ್ಯಕ್ತಿ ಕೂತಿದ್ದಾನೆ ಎಂದು ಫಾರೆಸ್ಟ್ ಚೆಕ್ ಪೋಸ್ಟ್ ನವರು ಹೇಳಿದ್ದರು. ಕಾಡಲ್ಲವೇ ಸುಮ್ಮನೆ ವಿಶ್ರಾಂತಿಗೆಂದು ಕೂರುವವರು ಇರುತ್ತಾರೆ ಎಂದು ಅಷ್ಟೊಂದು ತಲೆ ಕೆಡಿಸಿಕೊಂಡಿರಲಿಲ್ಲ.. ಜೊತೆಯಲ್ಲಿ ಗಿಜಿ ಗಿಜಿ ಜನಜಂಗುಳಿ, ಕಡತಗಳು ಆ ವ್ಯಕ್ತಿಯ ಮೇಲೆ ಗಮನ ಹರಿಸಲು ಆಗಿರಲಿಲ್ಲ.. ಆದರೆ ಸಂಜೆಯಾದರೂ ಆ ವ್ಯಕ್ತಿ ಏಳದೆ ಇದ್ದದ್ದು ನೋಡಿ.. ಯಾಕೋ ಅನುಮಾನ ಬಂದು.. ಜನ ಸೇರಿದರು.. ಆಗ ಗೊತ್ತಾಗಿದ್ದು.. ಆ ವ್ಯಕ್ತಿಯ ಹೃದಯ ಬಡಿತ ನಿಂತು ಹೋಗಿತ್ತು.. ಎಂದು..

ಶವ ತಪಾಸಣೆ ಎಂದು..ವ್ಯಕ್ತಿಯ ಜೇಬನ್ನೆಲ್ಲ ಹುಡುಕಿದಾಗ.. ಸಿಕ್ಕ ಒಂದು ಪತ್ರವನ್ನು ನೋಡಿ ರಾಜೇಶ ಅಕ್ಷರಶಃ ಒಮ್ಮೆ ಬೆವತಿದ್ದ..

"ಏನ್ರಿ ಸೀನಪ್ಪ ಇದು? ಹೀಗೆಲ್ಲಾ.... ?"

"ಸೀನಪ್ಪ .. ಸೀನಪ್ಪ.. ನೀನು ಸರಿ ಇದ್ದೀಯ.. ನೀನು ನಿದ್ದೆ ಮಾಡಿದ್ದೀಯಾ.. " ರಂಗ ಬಂದು ಅಲುಗಾಡಿಸಿದಾಗ.. ಎಚ್ಚರ.. ಸೀನಪ್ಪನಿಗೆ.. ಯೋಚನೆ ಮಾಡುತ್ತಾ ಅದು ಯಾವಾಗ ನಿದ್ದೆಗೆ ಜಾರಿದ್ದನೋ ಅರಿವಿಲ್ಲ..

"ಸರಿ ಸರಿ ಸೀನಪ್ಪ.. ನೀ ಹೊರಡು.. ಹಾಗೆ ಸಾಹೇಬ್ರ ಜೀಪನ್ನು ನೀನೆ ಡ್ರೈವ್ ಮಾಡಿಕೊಂಡು ಹೋಗು.. "

"ಆಅಹ್!.. ಸಾಹೇಬ್ರ ಜೀಪಾ?.. ಅವರೆಲ್ಲಿ ಹೋದ್ರು..? "

"ನೀ ಮಲಗಿದ್ದನ್ನು ನೋಡಿ ನಿನಗೆ ಒಂದು ಹೊದ್ದಿಕೆ ಹೊದ್ದಿಸಿ.. ಗಣೇಶನ ಅಂಗಡಿಯಲ್ಲಿ ಟೀ ಕುಡಿದು.. ರಂಗ ನಾ ಹೀಗೆ ನೆಡೆದು ಹೋಗುತ್ತೇನೆ.. ಸೀನಪ್ಪನಿಗೆ ಜೀಪು ತಗೊಂಡು ಹೋಗೋಕೆ ಹೇಳು.. ಬರುವಾಗ ನನ್ನ ಮನೆಯ ಹತ್ತಿರ ಬರಲಿ.. ನಾ ಜೊತೆಯಲ್ಲಿ ಬರುತ್ತೇನೆ ಎಂದು ಹೇಳಿ ಹೋಗಿದ್ದಾರೆ"

"ಅಯ್ಯೋ ಎಂಥಹ ಕೆಲಸ ಆಯಿತು.. ಪಾಪ ಸಾಹೇಬ್ರು.. .. ಸರಿ ನಾ ಹೋಗಿ ಬರುತ್ತೇನೆ.. "

ಮನೆಗೆ ಹೊರಟ ಸೀನಪ್ಪನ ತಲೆ ಮೊಸರು ಗಡಿಗೆಯಾಗಿತ್ತು..

ಇತ್ತ ರಾಜೇಶ ಕಿಂಗ್ ಹಚ್ಚಿಸಿಕೊಂಡು ಆರಾಮಾಗಿ ಆ ಬೆಳಗಿನ ಮಂಜಿನ ಹನಿಯಲ್ಲಿ ಕಾಡಿನ ಕಾಲುದಾರಿಯಲ್ಲಿ ಅಂಚಿನಲ್ಲಿದ್ದ ತನ್ನ ಮನೆಗೆ ನೆಡೆಯುತ್ತಾ ಸಾಗಿದ..

ಬೆಳಿಗ್ಗೆ ದಿನಪತ್ರಿಕೆ ಹಂಚುವವ, ಹಾಲು ಮಾರುವವ ಸಲಾಮು ಹೊಡೆಯುತ್ತಾ ಸಾಗುತಿದ್ದರು.. ಮನೆ ತಲುಪಿ.. ಸುಸ್ತಾಗಿದ್ದ .. ಮನೆಯ ಹಾಲಿನಲ್ಲಿದ್ದ ದೀವಾನ್ ಮೇಲೆ ಹಾಗೆ ವಿರಮಿಸಿದ.. ಕಣ್ಣುಗಳು ಎಳೆದುಕೊಂಡು ನಿದ್ರಾದೇವಿಯನ್ನು ಆಲಂಗಿಸಿಕೊಂಡಿತ್ತು..

ಗಡಿಯಾರ ಹನ್ನೊಂದು ಘಂಟೆ ಎಂದು ಹೊಡೆದಾಗಲೇ ರಾಜೇಶನಿಗೆ ಎಚ್ಚರ..   ಟ್ರಾನ್ಸ್ಫರ್ ಕೆಲಸವಾದ್ದರಿಂದ ಮಡದಿ ಮತ್ತು ಮಗ ಊರಿನಲ್ಲಿಯೇ ಇದ್ದರು.. ಇವನು ಮಾತ್ರ ವಾರಕ್ಕೊಮ್ಮೆ ಹೋಗಿ ಬರುತ್ತಿದ್ದ.. ಆದರೆ ಈ ಕೇಸು ಹಿಡಿದಾಗಿಂದ.. ಮನೆಗೆ ಹೋಗಿರಲೇ ಇಲ್ಲ..

ಕೆಲಸದವ ಮಾಡಿಟ್ಟಿದ್ದ ಕಾಫಿ ಬಗ್ಗಿಸಿಕೊಂಡು, ಪೇಪರ್ ಓದುತ್ತಾ.. ಟಿವಿ ಆನ್ ಮಾಡಿದ..

"ಏನೋ ಕಪ್ಪಗಿದ್ದಾಳೆ ಅಂದಿದ್ದೆ.. ಒಳ್ಳೆ ಆಪಲ್ ಇದ್ದಾಗೆ ಇದ್ದಾಳಲ್ಲೋ.. "
ಅಯ್ಯೋ ಫೂಲ್ ನೀ ಯಾರನ್ನೂ ನೋಡಿದೆಯೋ" ಹೀಗೆ ತನ್ನ ನೆಚ್ಚಿನ ಅಣ್ಣಾವ್ರ ಚಿತ್ರ "ಚಲಿಸುವ ಮೋಡಗಳು" ಚಿತ್ರ ಉದಯ ಮೂವೀಸ್ ನಲ್ಲಿ ಬರುತ್ತಿತ್ತು.. ಹಾಗೆ ಮೈ ಮರೆತು ನೋಡುತ್ತಿದ್ದ..

ಸ್ವಲ್ಪ ಹೊತ್ತಾದ ಮೇಲೆ "ಕಾಣದಂತೆ ಮಾಯವಾದನೋ ನಮ್ಮ ಶಿವ ಕೈಲಾಸ ಸೇರಿಕೊಂಡನೋ.. ಕೊಡುವುದನ್ನು ಕೊಟ್ಟು.. ಬಿಡುವುದನ್ನು ಬಿಟ್ಟು ಕೈಯ ಕೊಟ್ಟು ಓಡಿ ಹೋದನೋ" ಲೋಹಿತ್ ಹಾಡಿ ಅಣ್ಣಾವ್ರು-ಅಂಬಿಕಾ ಕುಣಿದಿದ್ದ ಹಾಡು ಬರುತ್ತಿತ್ತು..

ಅರೆ.. ಆ ಸತ್ತ ವ್ಯಕ್ತಿಯ ಹೆಸರು ಶಿವ.. ಅವನು ಕೂಡ ಕೈಲಾಸವಾಸಿಯಾಗಿದ್ದಾನೆ....

"ಕತ್ತಲ್ಲಲ್ಲಿ ನ್ಯಾಯವಿಟ್ಟನೋ ನಮ್ಮ ಶಿವ"

ಹುರ್ರೆ.. ಹುರ್ರೇ..

ತಕ್ಷಣ ತನ್ನ ಮೊಬೈಲ್ ತೆಗೆದುಕೊಂಡು ಸೀನಪ್ಪನಿಗೆ "ರೀ ಸೀನಪ್ಪ.. ನೀವು ಸೀದಾ ಸ್ಟೇಷನ್ನಿಗೆ ಹೋಗಿ.. ಎದುರು ಬೋಂಡಾ ಅಂಗಡಿಯ ಗಣಪನನ್ನು ಕರೆದುಕೊಂಡು ನಮ್ಮ ಮನೆಗೆ ಬನ್ನಿ"

ಕತ್ತಲಲ್ಲಿ ಬೆಳಕು ಮೂಡಿದ ಅನುಭವ.. ತಕ್ಷಣ ಇನ್ನೊಂದು  ಫೋನ್ ರಂಗನಿಗೆ "ರೀ ರಂಗ.. ಅಣ್ಣಾವ್ರ ಚಲಿಸುವ ಮೋಡಗಳು ಚಿತ್ರದಲ್ಲಿ ಕಾಣದಂತೆ ಮಾಯವಾದನೋ ಹಾಡಿನ ಸಾಹಿತ್ಯ ನನಗೆ ಬೇಕು.. ನಿಮ್ಮ ಮೊಬೈಲ್ ನಲ್ಲಿ ಆ ಹಾಡಿದೆ ಅಲ್ಲವೇ.. ನಿಧಾನಕ್ಕೆ ಕೇಳಿ ಕೇಳಿ ಇಡೀ ಹಾಡನ್ನು ಬರೆದುಕೊಂಡು ಬನ್ನಿ.. "

ರಂಗ ತಲೆ ಕೆರೆದುಕೊಂಡ.. ಸೀನಪ್ಪನ ಜೀಪು ಪೊಲೀಸ್ ಸ್ಟೇಷನ್ ಬಾಗಿಲಲ್ಲಿ ಕಿರ್ರ್ ಸದ್ದು ಮಾಡುತ್ತಾ ಬ್ರೇಕ್ ಹಾಕಿ ನಿಂತಿತು.. !!! 

Wednesday, February 1, 2017

To be, or not to be - A Experience!!!

"To be, or not to be" a famous punching line from William Shakespeare's Hamlet.. 

My situation was also on the same lamp post, neither here nor there. As a practice from so many years, morning as soon I woke up, I closed my eyes, and sat for a while.  A strange decision I took, and decided to walk-in to the invitation!!!

A decision sounded a like a london's big ben clock alarm. Without blinking for the second time, I was in the campus of the school!

The next two hours was a mesmerizing experience.  I had experience this kind of scene on the tracks of Dudsagar railway tracks in one of my adventurous trips/treks.  The goods carriage train was zooming past in-front of us with more than 50 plus bogies making rhythmic symphony.  

In the same way, students performance was one after another it was an awesome experience.  The students performed batch after batch. What was appreciable point was there was no lack of co-ordination. Two kids used to walk up to the stage, applauds the previous performance, and few words on the environment, mother earth..by the time they finish two or three lines, the other kids would take their position to ignite a stellar performance.  

I found some of the kids doing a small jig on the stage itself... waah!

Teachers, encouraging each and every minute of the program, students were on high with energy, jumping with joy, there was no limit for their enthusiasm.. such was the energy in the auditorium.  I honestly felt, there was no single second of boredom.  If there was any equipment to measure the enthusiasm level in the auditorium, probably, the equipment would have failed to show the maximum score, coz, sky was only the limit.  

Honestly this is not an exaggerated words, but it is just shot from the heart unfiltered.  

It all started with a back to school experience.  The rhythmic bands, the inspiring guard of honor, wow...and as soon as entered the auditorium, thunderous welcome by clapping students and parents..words fail to express :-)

The guests from various phases in the society, The Commander, The Doctor, The Political activist, The IT engineer, The Journalist, The Teacher and The Automotive Industry representative..a rare and wonderful combination.  

Every kid out there was a special one.  Their performance on the stage was wonderful, so their performance in the academics, cultural programs and sports.  The talent evenly distributed across all the segments of student carrier.  Play while Playing, Learn while Learning the mantra for success.  

I could not blink my eyes twice in the whole event, coz, if i blinked, i would have missed a step or two of these energy filled kids.  

When the prize was distributed to the talented kids, I felt, I was stuck by their enthusiasm.  While coming back home, My soul was fully energised, when i looked at the mirror, my soul said....Sri...thats it..If you had missed this, you would have missed something from your life...How true it turned out to be!!!!

Pics may not tell the complete story, but few pictures really do a difference in people life.  



One such picture would be the great entrance of the school, and of course the seven samurai who were part of this gala event!!!



My few words to the school channel was ",The doctor describes there are many blood groups..A+, B+, O+, A-, B- and so on....but irrespective of any blood group.. the B+ (Be positive) attitude .. keep that attitude, the attitude takes care of everything!!!



I should thank Mr. Prakash Jingade, who helped me to rewind my years, and travel back to three decades!  

When I walked out of the auditorium, I had a formatted soul as seen in the picture below :-)

I should thank and applaud the wonderful team efforts of the  kids, the parents, the teachers, the volunteers and the management of Ryan International School!

A Royal salute from my side to Ryan Ryan and Ryan!!!