Saturday, February 3, 2024

ಅಹಲ್ಯಾಶಬರಿ ಉಪಾಖ್ಯಾನದ ಅನುಭವ.. !

ಅಣ್ಣಾವ್ರ "ನಾನೂ ನೀನೂ ನೆಂಟರಯ್ಯ .. ನಮಗೆ ಭೇದ ಇಲ್ಲವಯ್ಯಾ ವಿಠ್ಠಲ .. " ಭಕ್ತ ಕುಂಬಾರದ ಅದ್ಭುತ ಹಾಡು ಬರುತಿತ್ತು.. ಮನೆಯ ಕರೆಘಂಟೆ ಸದ್ದು ಮಾಡಿತು.. 

ಬಾಗಿಲು ತೆಗೆದರೆ ಅಹಲ್ಯೆ ಮತ್ತು ಶಬರಿ .. ಬಿಳಿ ಉಡುಪಿನಲ್ಲಿ ಆಕರ್ಷಕವಾಗಿ ಕಾಣುತ್ತಿದ್ದರು.. 

ಅರೆ ನೀವು ನನ್ನ ಮನೆಯ ಬಾಗಿಲಲ್ಲಿ.. "ವೆಲ್ಕಮ್ ವೆಲ್ಕಮ್.. "

ನಗುತ್ತಾ ಅಹಲ್ಯೆ ಮತ್ತು ಶಬರಿ ಒಳಗೆ ಬಂದರು.. ಸಾಂಪ್ರದಾಯಿಕವಾದ ಸ್ವಾಗತ ನೆಡೆಯಿತು.. ಹಣೆಯಲ್ಲಿ ಕುಂಕುಮ.. ನಿಗಿ ನಿಗಿ ಹೊಳೆಯುತ್ತಿತ್ತು.. ಒಬ್ಬರ ಪ್ರತಿರೂಪ ಒಬ್ಬರು.. ಅಚಾನಕ್ ನೋಡಿದರೆ ಅಹಲ್ಯೆ ಶಬರಿ ಇಬ್ಬರೂ ಅಕ್ಕ ತಂಗಿ ಎನ್ನಬಹುದಿತ್ತು.. ಹಾಗಿದ್ದರೂ.. ಅದೇ ರೂಪ, ಅದೇ ಮುಖ.. ಅದೇ ನಗು.. ಆದರೆ ಅಹಲ್ಯೆ ಕಣ್ಣುಗಳು ಹೊಳೆಯುತ್ತಿದ್ದವು.. ಶಬರಿ ಕಣ್ಣುಗಳು ಮಿನುಗುತ್ತಿದ್ದವು.. 

ಶಬರಿ ನಸು ನಗುತ್ತಾ ಒಳಗೆ ಕಾಲಿಟ್ಟಳು.. ಅಹಲ್ಯೆ ಹಾಯ್ ಎನ್ನುತ್ತಾ ನಗುವ ಕಂಗಳ ಜೊತೆ ಒಳಗೆ ಬಂದಳು.. ಸುಮ್ಮನೆ ಇರದ ಕ್ಯಾಮೇರಾ ಕಚ ಕಚ ಅಂತ ಫೋಟೋ ತೆಗೆಯುತಿತ್ತು.. 

ಸುಂದರ ದೃಶ್ಯ.. ಕಂಗಳು ಮಂಜಾಗಿದ್ದವು.. ಆದರೆ ಕ್ಯಾಮೆರಾ ಕಣ್ಣುಗಳು ಅಲ್ಲ.. ಆ ಕ್ಷಣಗಳನ್ನು ಆಸ್ವಾಧಿಸುವುದೇ ಒಂದು ಅದ್ಭುತ ಅನುಭವ.. 

ಉಭಯಕುಶಲೋಪರಿ ಮಾತುಗಳು ಆದವು.. ಅಹಲ್ಯೆ ಕಲ್ಲಾಗಿದ್ದವಳು ಶ್ರೀ ರಾಮನ ಪಾದ ಸ್ಪರ್ಶದಿಂದ ಮತ್ತೆ ಮರಳಿದ್ದಳು.. ಅಹಲ್ಯೆ ಶ್ರೀ ರಾಮನ ಅಂಶವಾಗಿದ್ದಳು..ಶ್ರೀ ರಾಮನನ್ನು ಅನುಕ್ಷಣವೂ ಜಪಿಸುವಂಥಹ, ನೆನಪಿಸುವಂತಹ ದಿವ್ಯ ಬದುಕಾಗಿತ್ತು.. ನೋಡುತ್ತಾ ನೋಡುತ್ತಾ ಬದುಕು ಅಹಲ್ಯೆಯ ಬದುಕು ಸುಂದರವಾಗಿತ್ತು.. ಶ್ರೀ ರಾಮನ ಸಾನಿಧ್ಯವೇ ಆಕೆಯ  ಬದುಕಿನ ಮಂತ್ರವಾಗಿತ್ತು..

ಶಬರಿ ಶ್ರೀ ರಾಮನ ಬರುವಿಕೆಗಾಗಿ ಅತ್ಯುತ್ತಮ ಹಣ್ಣುಗಳನ್ನು ಆರಿಸಿ ಆರಿಸಿ ಶ್ರೀ ರಾಮನಿಗೆ ಕೊಡಲು ಇಟ್ಟಿದ್ದು.. ಅದನ್ನು ಶ್ರೀ ರಾಮನಿಗೆ ಕೊಟ್ಟ ಮೇಲೆ ತನ್ನ ಬದುಕಿನ ಸಾರ್ಥಕ್ಯ ಕಂಡಿದ್ದು ಇದು ನಿಮಗೆಲ್ಲ ತಿಳಿದ ವಿಚಾರವೇ.. ಇಲ್ಲಿ ಸ್ವಲ್ಪ ಬದಲಾವಣೆಯಿತ್ತು.. 

ಶಬರಿ ಶ್ರೀ ರಾಮನಿಗೆ ಹಣ್ಣುಗಳನ್ನು ಕೊಡುವ ಬದಲು ಸಿಹಿ ತಂದಿದ್ದಳು.. ಶ್ರೀ ರಾಮನಿಗೆ ಅಚ್ಚರಿ, ಖುಷಿ ಎಲ್ಲವೂ ಕಣ್ಣುಗಳಲ್ಲಿ ತುಂಬಿತ್ತು.. ಮಾತುಗಳು ಆಡಲಾರದಷ್ಟು ಖುಷಿ.. ಯಾಕೆಂದರೆ.. ಶ್ರೀ ರಾಮನನ್ನು ಕಂಡು ಶಬರಿಗೆ ಖುಷಿ ಮನದಲ್ಲಿಯೇ ಮೂಡಿದ್ದರೆ.. ಶಬರಿಯ ಕಂಡು ಶ್ರೀ ರಾಮನಿಗೆ ಈ ಬಾರಿ ಧನ್ಯತಾ ಭಾವ .. ತನ್ನ ಮನೆಗೆ ಮಗಳು ಬಂದಷ್ಟು ಖುಷಿ. ... 

ಶಬರಿ ಹಣ್ಣುಗಳನ್ನು ಕಚ್ಚಿ ಒಳ್ಳೆಯ ಹಣ್ಣುಗಳನ್ನೇ ಕೊಟ್ಟ ಹಾಗೆ.. ಇಲ್ಲಿ ಶಬರಿ ತಂದಿದ್ದ ಸಿಹಿಯನ್ನು ಅವಳಿಗೆ ಒಂದು ತುಂಡು ತಿನ್ನಿಸಿ..Hope  you don't mind ಎಂದಾಗ.. ಶಬರಿಯ ಕಣ್ಣುಗಳ ಹೊಳಪನ್ನು ಕಂಡಾಗ ಅರೆ ಇದನ್ನು ಕ್ಯಾಮೆರಾ ಕಣ್ಣಿನಲ್ಲಿ ಸೆರೆ ಹಿಡಿಯಬಾರದಿತ್ತೇ ಅನಿಸಿದ್ದು ಸುಳ್ಳಲ್ಲ.. 

ಕೆಲವು ಅನುಭವಗಳನ್ನು ಅನುಭವಿಸೋದು ..  ಆ ಅನುಭವವನ್ನು ಅಕ್ಷರ ರೂಪದಲ್ಲಿ ಹಿಡಿದಡೋದು ಎಲ್ಲವೂ ಒಂದು ಅದ್ಭುತ ಪಯಣದ ಮೈಲಿಗಲ್ಲುಗಳು.. 

ಮಗಳು ತಾಯಿಯ ಸಮಾನ ಅಂತಾರೆ.. ತಾಯಿಯನ್ನು ಇನ್ನೊಂದು ರೂಪದಲ್ಲಿ ಕಂಡು.. ಅದರ ಸಾಕ್ಷಾತ್ಕಾರವಾಗಿ ತಣ್ಣಗೆ ಇದನ್ನೆಲ್ಲಾ ಗಮನಿಸುತ್ತಿದ್ದ ತುಷಾರ ಹಾರದವಳ ನಸು ನಕ್ಕು ಖುಷಿಪಡುತ್ತಿದ್ದಳು .. 


"ಶ್ರೀ ರಾಮ ಬಂದವ್ನೆ ಸೀತೆಯ ಕಾಣಲಿಕ್ಕೆ" ಹಾಡು ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಬಂದಿದ್ದಾರೆ.. "ಕಾದಿರುವಳು ಶಬರಿ ಶ್ರೀ ರಾಮ ಬರುವನೆಂದು" ಶಾಲೆಯಲ್ಲಿ ಓದಿದ ಪದ್ಯ ನೆನಪಿಗೆ ಬಂತು.. 

ಇದೊಂದು ಅದ್ಭುತ ಅನುಭವ.. ಅಹಲ್ಯೆ, ಶಬರಿ, ತುಷಾರ, ಶ್ರೀ ರಾಮ ಎಲ್ಲರೂ ಧನ್ಯತಾ ಭಾವ ಅನುಭವಿಸುತ್ತಿದ್ದರು..!!!

ಶ್ರೀ ರಾಮನಂತೂ ಈ ಖುಷಿಯ ಸಂಗತಿಗಳಿಂದ ಪುಟ್ಟ ಹುಡುಗನಾಗಿ ಬಾಲರಾಮನೇ ಆಗಿ ನಲಿಯುತಿದ್ದ!


ಇರುವ ಮನೆಯೇ ಮಂದಿರವಾಗಿ.. ಅದೇ ಭವ್ಯ ಮಹಲಾಗಿ ಪರಿವರ್ತನೆಯಾದಂತೆ ಅನುಭವ.. ಮಹಲಿನ ಪ್ರತಿ ಕಣವೂ ಬೆಳಕಿನ ಪುಂಜದಿಂದ ಹೊಳೆಯಲು ಶುರು ಮಾಡಿತು.. !

2 comments: