ಧಾರ್ಮಿಕ ದೃಷ್ಟಿಯಿಂದ ತ್ರಿಮೂರ್ತಿಗಳ ವಾಸಸ್ಥಾನ ಈ ಅರಳಿ ಮರ..
ಶಿವರೂಪಾಯ ವೃಕ್ಷರಾಜಾಯತೇ ನಮಃ"
ಅದರ ಎಲೆಗಳು ಒಂದಕ್ಕೊಂದು ಅಂಟಿಕೊಂಡಿರುವುದಿಲ್ಲ..ಪ್ರತಿ ಎಲೆಯಲ್ಲೂ ಕೂಡ ಅದರ ಸರಕು ಸಾಗಣೆಯ ದಾರಿಯನ್ನು ನೋಡಬಹುದು...ಎಲ್ಲ ಸಸ್ಯದ ಎಲೆಗಳಲ್ಲು ಇದು ಇರುತ್ತದಾದರೂ ಅರಳಿ ಎಲೆ ತನ್ನದೇ ಒಂದು ವಿಶಿಷ್ಟ ಪಾಠವನ್ನು ಸಾರುತ್ತದೆ..
ಎಲೆಯು ಆರಂಭದಲ್ಲಿ ಹಾಗೂ ಅಂತ್ಯದಲ್ಲಿ ಸಣ್ಣದಾಗಿರುತ್ತದೆ... ಮಧ್ಯೆ ನೇರವಾದ ಸಣ್ಣ ಹಾದಿ ...ಅದರ ಎಡ ಬಲದಲ್ಲಿ ನೂರಾರು ಕವಲುಗಳು..ಆ ಕವಲುಗಳು ಮತ್ತೆ ಮತ್ತೆ ಒಡೆದು ಅನೇಕ ಕವಲುಗಳು..ಹೀಗೆಯೇ ಸಾಗುತ್ತದೆ..ಅಂಚಿಗೆ ಬರುತ್ತಾ ಬರುತ್ತಾ...ಅದರ ಹಾದಿ ಇನ್ನೂ ಕಡಿದಾಗುತ್ತ ಸಾಗುತ್ತದೆ...ಕಡೆಗೆ ಬಿಂದುವಾಗಿ ನಿಲ್ಲುತದೆ..ಅದು ಅದರ ಗುರಿ..
ನಾವು ಕೂಡ ಪ್ರತಿ ದಿನ ಪ್ರತಿ ಕ್ಷಣ ನೂರಾರು ಮಂದಿಯನ್ನು ಭೇಟಿ ಮಾಡುತ್ತೇವೆ, ಪ್ರತಿ ಒಬ್ಬರದು ವಿಭಿನ್ನ ಹಾದಿ, ವಿಭಿನ್ನ ಜೀವನ, ವಿಭಿನ್ನ ಗುರಿ..ಅಡೆತಡೆಗಳನ್ನು ದಾಟಿ ಬಂದ ಮೇಲೆ ಮಾತ್ರ ಗುರಿ ನಮ್ಮನ್ನ ಅಲಂಗಿಸಿಕೊಳ್ಳುತ್ತೆ
ನಾವು ಹಾಗೆಯೇ..ಒಂದು ಸಣ್ಣ ಎಳೆ ಹಿಡಿದು ನಮ್ಮ ಕೆಲಸ ಶುರು ಮಾಡುತ್ತೇವೆ..ನಮ್ಮ ಗುರಿ ಕೂಡ ದೊಡ್ಡದೇ ಇದ್ದರೂ ಕೂಡ ಅದು ದೂರದಿಂದ ಒಂದು ಸಣ್ಣ ಬಿಂದುವಾಗಿರುತ್ತದೆ..ಹಾದಿ ಕಠಿಣ, ದುರ್ಗಮ, ಕಡಿದು ಇರುತ್ತದೆ. ಅದರ ಉದ್ದಕ್ಕೂ..ನೂರಾರು ಅಡ-ತಡೆಗಳು, ಕವಲೊಡೆದ ಭಾವನೆಗಳು, ಸಾಗುವ ಆಸೆ ಆಕಾಂಕ್ಷೆಗಳು..
ಆದರೆ ಇವುಗಳು ನಮ್ಮನ್ನು ಧೃತಿಗೆಡಿಸಬಾರದು..ನಾವು ನಂಬಿರುವ ಮೌಲ್ಯ, ನಂಬಿಕೆ ಹಾಗೂ ಛಲ ಇವನ್ನು ಹಿಡಿದು ಸಾಗಿದಾಗ ಮಾತ್ರ ಗುರಿ ನಮ್ಮ ಕಣ್ಣ ಮುಂದೆಯೇ ಇರುತ್ತದೆ...ಹಾಗು ಕಣ್ಣು ಮಿಟುಕಿಸಿ ಸಂತಸ ಪಡುತ್ತದೆ..


.jpg)