Monday, April 27, 2026

"ಮಾವಿನ ಹಣ್ಣು ಬೇಕಾ.. "

ವಾರದ ಅಂತ್ಯ.. 

ಒಂದಷ್ಟು ರೀಲುಗಳು, ಯು ಟ್ಯೂಬ್ ಕ್ಲಿಪ್ಪುಗಳು ಅಂತ ಕೂತಿದ್ದ ..

ಕನ್ನಡದ ಚಿತ್ರರಂಗದಲ್ಲಿ ಪ್ರಾಯಶಃ ಮೊದಲ ಬಾರಿಗೆ ಟಾಕೀಸಿನ ಮುಂದೆ "ಹೆದರಿಕೆಯುಳ್ಳವರು, ಗರ್ಭಿಣಿ ಸ್ತ್ರೀಯರು ಈ ಚಿತ್ರ ನೋಡಬೇಡಿ ಅಂತ ಫಲಕ ಹಾಕಿಸಿಕೊಂಡ ಚಿತ್ರ ನಾ ನಿನ್ನ ಬಿಡಲಾರೆ

ಅದರಲ್ಲಿಯೂ ಸ್ಮಶಾನದಲ್ಲಿ ಅನಂತ್ ನಾಗ್ ತಿರುಗಿ ನೋಡುವ ದೃಶ್ಯ ಎಂಥಹ ಗಟ್ಟಿ ಎದೆಯರ ಗುಂಡಿಗೆಯನ್ನು ಒಮ್ಮೆ ಝಲ್ ಎನಿಸಿದ್ದು ಸುಳ್ಳಲ್ಲ.. 

 ಅವನಿಗೂ ಅನುಭವವಾಗಿತ್ತು.. ಬಾಲಕನಾಗಿದ್ದಾಗ ಆ ಚಿತ್ರವನ್ನು ನೋಡಿದ್ದು ಹಸಿ ಹಸಿ ನೆನಪು.. 

ಹೀಗೆ ರೀಲ್ಸು , ಕ್ಲಿಪ್ಪು ಅಂತ ನೋಡುತ್ತಿದ್ದವ.. ಹಾಗೆ ನಾ ನಿನ್ನ ಬಿಡಲಾರೆ ಚಿತ್ರವನ್ನು ಮತ್ತೊಮ್ಮೆ ನೋಡಿಯೇ ಬಿಟ್ಟ.. 

ಹೊರಗೆಲ್ಲ ಹುಣ್ಣಿಮೆಯ ಹತ್ತಿರದ ಬೆಳದಿಂಗಳು.. ಬೇಸಿಗೆ ಕಾಲದ ರಾತ್ರಿಯಾದರೂ ಬೆಳದಿಂಗಳ ತಂಪಿನ ಬೆಳಕಿನ ಜೊತೆ ತಣ್ಣನೆಯ ಗಾಳಿಯೂ ಬೀಸುತಿತ್ತು.. ತೆರೆದ ಕಿಟಕಿಯಿಂದ ಗಾಳಿ ತೇಲಿ ಬರುತಿತ್ತು.. ಮನಸ್ಸಿಗೆ ಉಲ್ಲಾಸ ತುಂಬಿತ್ತು.. 

ಸಿನೆಮಾ ಓಡುತ್ತಿತ್ತು.. 

ಮದುವೆಯ ಮುಂಚೆ ವಿವಾಹ ಪತ್ರಿಕೆಯ ಮೇಲೆ ಇಂಕು ಚೆಲ್ಲಿಯಾಗಿತ್ತು.. 
ಪತ್ರಿಕೆಗಳೆಲ್ಲ ಗಾಳಿಯಲ್ಲಿ ಹಾರಾಡಿಯಾಗಿತ್ತು.. 
ಮದುವೆಯ ದಿಬ್ಬಣ ಬರುವಾಗ ಕಟ್ಟಿದ ಕೋಣ ಹಗ್ಗ ಬಿಚ್ಚಿಕೊಂಡು ಅನಂತ್ ನಾಗ್ ಅವರ ಕಾರಿನತ್ತ ನುಗ್ಗಿದ್ದ ದೃಶ್ಯವಾಗಿತ್ತು.. 
ಪ್ರಥಮ ರಾತ್ರಿಯಲ್ಲಿ ಅನಂತ್ ನಾಗ್ ತಲೆ ನೋವು ಅಂತ ಕಿರುಚಿ ಕೆಳಗೆ ಬಿದ್ದಾಗಿತ್ತು.. 
ಆಸ್ಪತ್ರೆಯಲ್ಲಿ ಡಾಕ್ಟ್ರರು ಏನೂ ತೊಂದರೆ ಇಲ್ಲ ಎಂದು ತಪಾಸಣೆ ಮಾಹಿತಿಯನ್ನು ನೋಡಿ ಹೇಳಿದ್ದರೂ ಕೂಡ..
ಒಂದೆರಡು ದಿನ ಆಸ್ಪತ್ರೆಯಲ್ಲಿ ಇರಲಿ ಎಂದು ಹೇಳಿದ್ದ ದೃಶ್ಯವಾಗಿತ್ತು.. 
ಮಧ್ಯರಾತ್ರಿಯಲ್ಲಿ ಅನಂತ್ ನಾಗ್ ಸೀದಾ ಎದ್ದು ಮಸಣದ ಕಡೆಗೆ ಹೋಗಿದ್ದು.. 
ಲಕ್ಷ್ಮಿ ಅವರನ್ನು ಹಿಂಬಾಲಿಸಿದ್ದು.. 
ಲಕ್ಷ್ಮಿ ಅವರನ್ನು ಅಶ್ವಥ್ ಮತ್ತು ಬಾಲಣ್ಣ ಹಿಂಬಾಲಿಸಿದ್ದು . 
ನಂತರ  ಅನಂತ್ ನಾಗ್ ತಿರುಗಿ ನೋಡಿದ ದೃಶ್ಯ ... 
ಅವರ ಮೈಮೇಲೆ ಬಂದ ದೆವ್ವದ ಮಾತುಗಳು.. 

ಎದೆ ಝಲ್ ಎನಿಸುವ ದೃಶ್ಯಗಳು ಹೇರಳವಾಗಿದ್ದವು.. 

ಅದರಲ್ಲೂ ಅನಂತ್ ಮೇಲೆ ದೆವ್ವ ಬರುವ ದೃಶ್ಯಗಳೂ ಅದಕ್ಕೆ ನೀಡಿರುವ ಹಿನ್ನೆಲೆ ಸಂಗೀತ..ದೆವ್ವ ಬಿಡಿಸುವವನ ಜೊತೆ ಮಾತುಗಳು .. ಹೆದರಿಕೆಯನ್ನು ಹೆಚ್ಚು ಮಾಡುತ್ತಲೇ ಇತ್ತು.. ಅದೇ ಗುಂಗಿನಲ್ಲಿ ಯಾವಾಗಲೂ ನಿದ್ರಾದೇವಿ ಆವರಿಸಿದ್ದಳು.. 

ಟಿವಿ ತನ್ನ ತಾನೇ ಆಫ್ ಆಗಿತ್ತು.. ಟಿವಿಗೆ ಟೈಮರ್ ಇಟ್ಟಿದ್ದರಿಂದ ತೊಂದರೆ ಇರಲಿಲ್ಲ.. 

ಮನೆಯ ದೀಪಗಳೆಲ್ಲ ಆರಿತ್ತು.. 

ಬಾಯಾರಿಕೆ ಎಂದು ಪಕ್ಕದಲ್ಲಿ ನೋಡಿದರೆ ನೀರಿನ ಬಾಟಲ್ ಖಾಲಿ..

ಸರಿ ಅಡಿಗೆ ಮನೆಗೆ ಹೋಗಿ ನೀರು ಕುಡಿಯೋಣ ಅಂತ ದೀಪ ಹಾಕೋಕೆ ಹೋಗದೆ  .. ಹಾಗೆ ಅಡಿಗೆ ಮನೆಗೆ ಹೋದ ..

ಹೊರಗೆ ಬೆಳದಿಂಗಳು .. ಆದರೆ ಕಿಟಕಿಗಳಿಗೆ ದಪ್ಪನೆ ಪರದೆ ಹಾಕಿದ್ದರಿಂದ ಕತ್ತಲು.. 

ನೀರು ಕುಡಿದು.. ಯಾಕೋ ಬಾಗಿಲಿನ ಕಡೆ ನೋಡಿದರೆ.. ಅಂಗಳದ ದೀಪ ಉರಿಯುತ್ತಿದೆ ಎನ್ನುವ ಅನುಭವ.. 

ದೀಪದ ಸ್ವಿಚ್ ಮೇಲೆ ಕೈಯಾಡಿಸಿದರೆ.. ಆಫ್ ಆಗಿದ್ದರ ಸಂಕೇತ ತೋರಿಸುತ್ತಿತ್ತು.. ದೀಪ ಹಾಕದೆ ಹಾಗೆ ನೋಡಿದ್ದ .. 

"ಹೀ ಹೀ ಹೀ " ನಗುವಿನ ಸದ್ದು.. 

ಕ್ಷಣದಲ್ಲಿಯೇ ಮೈಪೂರ್ತಿ ಬೆವರು.. .. ರೋಮ ರೋಮಗಳು ಸೆಟೆದು ನಿಂತ ಅನುಭವ.. 

"ಮಾವಿನ ಹಣ್ಣು ಬೇಕಾ.. " 


ಪೂರ್ಣ ಹೆದರಿಕೆ.. 

ನಾ ನಿನ್ನ ಬಿಡಲಾರೆ ಚಿತ್ರದ ಪೂರ್ತಿ ಭಯಾನಕ ದೃಶ್ಯಗಳು ಕಣ್ಣ ಮುಂದೆ ಪವರ್ ಪಾಯಿಂಟ್ ಪ್ರೆಸೆಂಟೇಷನ್ ಕೊಟ್ಟು ಹೋದವು.. 

ನೀರು ಕುಡಿದಿದ್ದರೂ ನಾಲಿಗೆ ಪೂರ್ಣ ಒಣಗಿದ ವಾಟೆಗರಿಯಾಗಿತ್ತು.. 

ಭಯದಿಂದಲೇ ಹೋಗಿ ಹಾಲಿನ ದೀಪ ಹಾಕಿದರೆ.. ತನ್ನ ಮಡದಿ ಮಾವಿನ ಹಣ್ಣನ್ನು ತಿನ್ನುತಿದ್ದಾಳೆ.. 

ಉಫ್ ಉಫ್... 

ಜೋರಾದ ನಗು.. ಅವಳದು 

ಮೈಯೆಲ್ಲಾ ಒದ್ದೆಅವನದ್ದು  !

Monday, April 13, 2026

ಸೀಮಾವಲೋಕನ ಜೊತೆಗೆ ಶೀತಲೈಶ್ವರ್ಯ... !

"ಶ್ರೀ ನೀನು ಮನುಷ್ಯನ.. ಏ ಇಲ್ಲ ಬಿಡು ಮನುಷ್ಯರು ಹೀಗೆ ಇರೋಕೆ ಸಾಧ್ಯವೇ ಇಲ್ಲ.. "

"ಇದ್ಯಾಕೆ ಅಣ್ಣಾವ್ರೇ ಹೀಗೆ ಎಡ ಬಲ ಸೇರಿಸಿ ಉಗೀತಾ ಇದ್ದೀರಾ ಯಾಕೆ ಅಂತಹ ತಪ್ಪು ಏನು ಮಾಡಿದೆ.." 

"ಅಲ್ಲ ಕಣೋ ಶ್ರೀ ನಿನ್ನ ಮಡದಿಯ ಜನುಮದಿನ ನನ್ನ ಪುಣ್ಯದಿನದ ಮಾರನೇ ದಿನ .. ಆಕೆಗೆ ಖುಷಿಯಾಗಿ ಇಟ್ಟುಕೊಳ್ಳೋದು ಬಿಟ್ಟು ಆಫೀಸ್ ಕೆಲಸ ಅದು ಇದು ಮೀಟಿಂಗ್ ಪಾಟಿಂಗು ಅಂತ ಆಕೆಗೆ ಬೇಸರ ಮಾಡೋದೇ.. ಅಲ್ಲಿ ನೋಡಿ ನಿನ್ನ ಮಕ್ಕಳು ಪಾಪು, ಪಾಪ ಎಷ್ಟು ಸೊಗಸಾಗಿ ಸಿಂಗಾರ ಮಾಡಿಕೊಂಡಿದ್ದಾರೆ. ನಿನ್ನ ಮನದನ್ನೆ ನೋಡು. ಅಲ್ಲಿ ನೋಡು.. ಎಷ್ಟು ಮುದ್ದಾಗಿ ಪುಟ್ಟ ಮಗು ತರಹ ಕಾಣುತ್ತಿದ್ದಾಳೆ.. ಅಂತಹ ಸಮಯ ಬಿಟ್ಟು.. ಈ ಸಮಯ ಕೆಲಸದ ಸಮಯ ಅಂತ ಲ್ಯಾಪ್ಟಾಪ್ ಇಟ್ಕೊಂಡು ಕೂತಿದ್ದೀಯಾ ಅಲ್ಲ. ನೀನು ಮನುಷ್ಯನೋ.. ಇಲ್ಲ.. "

ಕ್ಷಮಿಸಿ ಅಣ್ಣೋರೆ.. ಹಾಗೇನು ಇಲ್ಲ.. ಮನಸ್ಸು ಯಾಕೋ ಪಕಪಕ ಅಂತಾ ಇದೆ.. ಅಷ್ಟೇ.. ಅದು ಬಿಟ್ರೆ ಇನ್ನೇನೂ ಇಲ್ಲ.. 

"ಕ್ಷಮೆ. ನಿನಗೆ ಕ್ಷಮೆ.. "(ಭಕ್ತ ಪ್ರಹ್ಲಾದದಲ್ಲಿ ಹಿರಣ್ಯ ಕಷಿಪು, ಮಹೇಂದ್ರನಿಗೆ  ಹೇಳಿದ ಧ್ವನಿಯಲ್ಲಿ ಅಣ್ಣಾವ್ರು ಅಬ್ಬರಿಸಿದರು)

"ಅಯ್ಯೋ ಅಣ್ಣಾವ್ರೇ ಇಷ್ಟು ಆಗ್ರಹವೇಕೆ ಅಣ್ಣಾವ್ರೇ (ನಾನೂ ಕಡಿಮೆ ಏನಲ್ಲ... ಮಹೇಂದ್ರನಂತೆ ನಾನೂ ನಾಟಕೀಯವಾಗಿ ಒಂದು ಡೈಲಾಗು ಬಿಟ್ಟೆ)

"ನೋಡು ಈಗ ನೀನು ಅವರ ಜೊತೆ ಹೊರಗೆ ಹೋದಾಗ ಯಾವ ಹಾಡು ಬರುತ್ತದೆಯೋ ಅದೇ ಹಾಡಿನ ಪದಗಳ ಮೇಲೆ ನೀನು ನಿನ್ನ ಮಡದಿಯನ್ನು, ನಿನ್ನ ಮಕ್ಕಳನ್ನು ಹೊಗಳಿ... ಅವರ ಹಿಂದಿನ, ಮತ್ತು ಮುಂದೆ ಬರುವ ಜನುಮದಿನಕ್ಕೆ ಸೇರಿಸಿ ಬರೆಯಬೇಕು.. ಅದೇ ನಿನಗೆ ನಾ ಕೊಡುವ ಶಿಕ್ಷೆ ಕಂ ಕ್ಷಮೆ.. ..ಆ ಮುದ್ದು ನಿನ್ನ ಸಂಗಾತಿಗೆ ಕೇಕ್ ತರಿಸಿದ್ಧೇನೆ..ಹೋಗಿ ಖುಷಿ ಪಡಿ..ಶುಭವಾಗಲಿ...



ಅಣ್ಣಾವ್ರ ಸುಗ್ರೀವಾಜ್ಞೆ ಆಗಿತ್ತು...

"ಆಗಲಿ ಅಣ್ಣಾವ್ರೇ ನೀವು ಹೇಳಿದಂತೆ ಆಗಲಿ"

ಕಾಲಿಟ್ಟ ಕೂಡಲೇ.. 

ಕವಿರತ್ನ ಕಾಳಿದಾಸ ಚಿತ್ರದ 

ಸದಾ ಕಣ್ಣಲಿ ಪ್ರಣಯದಾ ಕವಿತೆ ಹಾಡುವೆ
ಸದಾ ನನ್ನಲಿ ಒಲವಿನ ಬಯಕೆ ತುಂಬುವೆ

ಹಾಡು ಬರಬೇಕೆ .. ಮನಸ್ಸು ಮತ್ತೆ ಗೊಂದಲದ ಗೂಡು.. ಈ ಹಾಡನ್ನು ಹೇಗಪ್ಪಾ ಶುಭಾಶಯದ ಮಟ್ಟಕ್ಕೆ ತರೋದು.. 

ಗಟ್ಟಿಯಾಗಿ ಹೋಟೆಲಿನ ಬಾಗಿಲಲ್ಲಿಯೇ ನಿಂತೇ.. ಚಿ ಉದಯಶಂಕರ್ ಸರ್.. ರಾಜಕುಮಾರ್ ಸರ್. ನೀವೇ ನನಗೆ ಸ್ಫೂರ್ತಿ ಕೊಡಬೇಕು.. ಬೇರೆ ದಾರಿ ಇಲ್ಲ ಅಂತ.. ಒಂದು ಹತ್ತು ಸೆಕೆಂಡುಗಳು ಕಣ್ಣು ಮುಚ್ಚಿ ನಿಂತೇ.. ಆಗಸದಿಂದ ಎರಡು ಕಿರಣಗಳು ಮನದೊಳಗೆ ಇಳಿದಂತೆ ಭಾಸವಾಯಿತು.. 
ಬಂದೆ ಬಿಡ್ತು.. 

(ಚಿ ಉದಯಶಂಕರ್ ಅವರ ಕ್ಷಮೆ ಕೋರಿ.. ಒಂದು ಪಲ್ಲವಿಯನ್ನು ಸೇರಿಸಿಬಿಟ್ಟಿದ್ದೀನಿ)

ನನ್ನ ಗೆಳತೀ ಜನವರಿ ತಿಂಗಳಲ್ಲಿ ಜನುಮದಿನವನ್ನು ಸಂಭ್ರಮಿಸಿದ್ದಳು.... ನನ್ನ ಪರಿಸ್ಥಿತಿಯನ್ನು ಕನ್ನಡಿಗಿಂತ ಚೆನ್ನಾಗಿ ಅರಿಯುವ ನನ್ನ ಗೆಳತೀ ಅಂದು ನಗು ನಗುತ್ತಾ ಗೊತ್ತು ಬಿಡಿ ಅಪ್ಪ ಅಂತ ನನ್ನ ಸಮಾಧಾನ ಮಾಡಿದ್ದಾಳು.. ಆ ಕ್ಷಣವನ್ನು ನೆನೆಯುತ್ತಾ

ಮಗುವಿನಲ್ಲಿ ಶಾಂತಾವಾಗಿ..  
ಬೆಳದಂತೆ ಬುದ್ದಿವಂತಳಾಗಿ 
ಸಿಎ ಕನಸೆಲ್ಲ 
ನನಸು ನನಸು ಮಾಡಿ 
ಅಮ್ಮನ ಮೊಗದಲ್ಲಿ ಮಗುವಾಗಿ 
ನಗು ತಂದಂತೆ 
ಈ ನಗುವಿಗೆ ಸೋತೆನು 
ಸೋತೆ ನಾನು!!!
 

ನಾ ಗುಡಿ ಕಟ್ಟಿದರೆ ನೀವು ಕಳಸ ಇಡುತ್ತೀರಾ ಅಂತ ಯಾವಾಗಲೂ ರೇಗಿಸುವ ನನ್ನ ಮನದನ್ನೆಗೆ ಅವಳ ಅಂದವನ್ನು ಹೊಗಳುತ್ತಾ.. ಜನುಮದಿನಕ್ಕೆ ಉಡುಗೊರೆಯ ರೂಪದಲ್ಲಿ ಪಲ್ಲವಿ ಸಿದ್ಧವಾಯಿತು.. 

ಕಣ್ಣೆರಡು ಕಮಲಗಳಂತೆ, 
ಮುಂಗುರುಳು ದುಂಬಿಗಳಂತೆ ।೨।
ನಾಸಿಕವು ಸಂಪಿಗೆಯಂತೆ, 
ನೀ ನಗಲು ಹೂ ಬಿರಿದಂತೆ ।೨।
ನಡೆಯುತಿರೆ (ತಾನೇ ಸಂಯೋಜಿಸಿದ) ನಾಟ್ಯದಂತೆ ।೨।
ರತಿಯೆ ಧರೆಗಿಳಿದಂತೆ
ಈ ಅಂದಕೆ ಸೋತೆನು, 
ಸೋತೆ ನಾನು

ನನಗೆ ಇಲ್ಲವಾ ಹಾಡು ಅಪ್ಪ ಅಂತ ಕೋಪದಿಂದ ನನ್ನ ಇನ್ನೊಬ್ಬ ಮಗಳು ..ಕೂಗಿದಳು .. ಅವಳ ಸುಂದರ ಕಣ್ಣುಗಳು ಕೆಂಪಾಗಿದ್ದವು... ಮೆಲ್ಲನೆ ಸಮಾಧಾನ ಮಾಡುತ್ತಾ.. ಮಗಳೇ.. ಮಗಳೇ ಎಂದು ಹೇಳುತ್ತಾ.. 

ಗುಡುಗುಗಳು ತಾಳದಂತೆ 
ಮಿಂಚುಗಳು ಮೇಳದಂತೆ
ಸುರಿವಾ ಮಳೆ ನೀರೆಲ್ಲಾ, 
ಪನ್ನೀರ ಹನಿ ಹನಿಯಂತೆ ।೨।
ಜೊತೆಯಾಗಿ ರಿಷಬ್ ಇರೆ ಸಾಕು, 
ಭೂಲೋಕ ಸ್ವರ್ಗದಂತೆ
ನಿನ್ನ ಪ್ರೇಮಕೆ ಅವನು ಸೋತನು 
ಸೋತು ಗೆಲುವಾದನು.... 

*****
ಮೆಲ್ಲನೆ ನಿಟ್ಟುಸಿರು ಬಿಟ್ಟೆ.. ನನ್ನ ಮುದ್ದು ಮಕ್ಕಳು.. ಮಡದಿಯನ್ನು ಸಮಾಧಾನ ಪಡಿಸಿದೆ ಅಂದು ಅನಿಸಿತು.. ಇದರ ಜೊತೆ ಅಣ್ಣಾವ್ರು ಕೂಡ ಜೋರಾಗಿ ಚಪ್ಪಾಳೆ ತಟ್ಟಿದರು.. ಅರೆ ಅಣ್ಣಾವ್ರಿಗೆ ಸಂತೋಷ ಆಯಿತು ಅಂದರೆ ಎಲ್ಲವೂ ಅರಾಮ್.. ಎಲ್ಲವೂ ಸುಖಾಂತ್ಯ ಅನ್ನಿಸಿತು.. 

ಅಣ್ಣಾವ್ರ ಮುಖ ನೋಡಿದೆ.. .. ಜೋರಾಗಿ ನಗುತ್ತಾ.. 

ಶ್ರೀ ನಿನ್ನ ಮುದ್ದು ಮಕ್ಕಳಿಗೆ. .. ಮತ್ತು ನಿನ್ನ ಮನದನ್ನೆಗೆ ಈ ಹಾಡು ಸಮರ್ಪಿತ.. ಇದನ್ನು ನನ್ನ ಆಪ್ತಗೆಳೆಯ ಚಿ ಉದಯಶಂಕರ್ ಬರೆದದ್ದು.. ನಿಮಗೆ ಶುಭವಾಗಲಿ.. ಎಂದು ಹಾಡುತ್ತಾ.. ಗಗನದಲ್ಲಿ ತಾರೆಯಾದರು.. 

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು.
ದೇವರ ರೂಪ ನೀನೆ ಮಗು
ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
\
ಹೂವು ನಕ್ಕಾಗ ತಾನೇ…
ಅಂದ ಇರುವುದು
ದುಂಬಿ ಬರುವುದು
ಚಂದ್ರ ನಕ್ಕಾಗ ತಾನೇ
ಬೆಳಕು ಬರುವುದೂ
ಕಡಲು ಕುಣಿವುದೂ
ಸೂರ್ಯನಾಡೊ ಜಾರೊ ಆಟ
ಬಾನು ನಗಲೆಂದೆ
ಬೀಸೊ ಗಾಳಿ ತೂಗೊ ಪೈರು
ಭೂಮಿ ನಗಲೆಂದೆ
ದೇವರು ತಂದ ಸೃಷ್ಟಿಯ ಅಂದ
ಎಲ್ಲರು ನಗಲೆಂದೆ

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ

ಆಕಾಶದಾಚೆ ಎಲ್ಲೋ…
ದೇವರಿಲ್ಲವೋ…..
ಹುಡುಕಬೇಡವೋ
ಆ ಮಾಯಗಾರ ತಾನೂ….
ಗಿರಿಯಲಿಲ್ಲವೋ…..
ಗುಡಿಯಲಿಲ್ಲವೋ
ಪ್ರೀತಿಯಲ್ಲಿ ಸ್ನೇಹದಲ್ಲಿ
ಇರುವನು ಒಂದಾಗಿ
ತಂಪಿನಲ್ಲು ಕಂಪಿನಲ್ಲು
ಬರುವನು ಹಿತವಾಗಿ
ಸಂತಸದಲ್ಲಿ ಸಂಭ್ರಮದಲ್ಲಿ
ಮಕ್ಕಳ ನಗುವಾಗೀ…

ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಬಾಳಿನ ದೀಪಾ ನಿನ್ನ ನಗು
ದೇವರ ರೂಪ ನೀನೆ ಮಗು
ನಗುತ ನಗುತ ಬಾಳೂ ನೀನು
ನೂರು ವರುಷಾ
ಎಂದು ಹೀಗೆ ಇರಲೀ ಇರಲಿ
ಹರುಷ ಹರುಷಾ
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು
ಉಲ್ಲಾಸದ ಶುಭ ದಿನಕೆ
ಸಂತೋಷವೇ ಉಡುಗೊರೆಯು!!!!