Sunday, February 19, 2023

ಏನ್ ಮಾಡ್ತಾ ಇದ್ದಾರೆ ಅವ್ರು... !!!!

ಏನ್ ಮಾಡ್ತಾ ಇದ್ದಾರೆ ಅವ್ರು... !!!

ರಥಸಪ್ತಮಿ ಕಳೆದಿದ್ದರೂ.. ಶಿವರಾತ್ರಿಯ ಮಗ್ಗುಲಿಗೆ ಇದ್ದರೂ. ಚಳಿ ಇನ್ನೂ ಭುವಿಯನ್ನು ಬಿಡಲು ಹಠ ಮಾಡುತ್ತಿದ್ದ ಸಮಯ.. ನಡುರಾತ್ರಿ.. ಮರದ ಮರೆಯಿಂದ ಯಾರೋ ಪಿಸು ಮಾತಾಡಿದ ಹಾಗೆ... 

ರಸ್ತೆಯಲ್ಲಿದ್ದ ಮನೆಗಳೆಲ್ಲ ದೀಪ ಆರಿಸಿ ಆಗಲೇ ಎರಡನೇ ಜಾವದ ನಿದ್ದೆಯಲ್ಲಿದ್ದರು.. ನಾ ಸುಮ್ಮನೆ ನನಗೆ ವಹಿಸಿದ್ದ ಕೆಲಸವನ್ನು ಮಾಡುತ್ತಿದ್ದೆ.. ಜೊತೆಯಲ್ಲಿ ನನ್ನ ಮನೋನಾಯಕಿ.. 

ಸದ್ದು ಗದ್ದಲಕ್ಕೆ ಹೆದರದ ಜೀವ ನನ್ನದು.. ನನ್ನ ಪಾಡಿಗೆ ನನ್ನ ಕಾಯಕದಲ್ಲಿ ತೊಡಗಿದ್ದೆ.. ಯಾಕೋ ಆ ಪಿಸುಮಾತುಗಳು ನನ್ನ ಮನಸ್ಸನ್ನು ಸೆಳೆಯಲು ಸಫಲವಾದವು.. ಅಲ್ಲಿ ಕೇಳಿಸಿದ ಸಂಭಾಷಣೆ ನಿಮಗಾಗಿ.. 

*********

ಶ್ವೇತ ವಸ್ತ್ರಧಾರಿ : ಅಲ್ಲಿ ಏನು ಮಾಡ್ತಾ ಇದ್ದಾರೆ..  

ಜಟಾಧಾರಿ: ನನಗೂ ಗೊತ್ತಿಲ್ಲ ಅವನನ್ನು ಸೃಷ್ಟಿಸಿದ ಬ್ರಹ್ಮನಿಗೆ ಅವನ ತಲೆಯಲ್ಲಿ ಬರುವ ಯೋಚನೆಗಳ ಅರಿವಿರೋದಿಲ್ಲ.. ನಾವು ಸುಮ್ಮನೆ ಆವ ಏನ್ ಮಾಡ್ತಾ ಇದ್ದಾನೆ ..ಅವನು ಏನೇನು ಸಲಕರಣೆ, ಟೇಬಲ್, ಹತ್ತಿ, ದಾರ ಯಾವುದು ಬೇಕೋ ಅದನ್ನು ಅವನ ಬಳಿ ಇರುವಂತೆ ನೋಡಿಕೊಳ್ಳುವುದಷ್ಟೇ ನಮ್ಮ ಕೆಲಸ.. ಮತ್ತೆ ದೇವರನ್ನು ನಂಬಿರುವ ಅವನಿಗೆ ತಲೆ ಕೆಡದಂತೆ ನೋಡಿಕೊಳ್ಳುವುದು ನಮ್ಮ ಕಾಯಕವಷ್ಟೇ.. 

ಶ್ವೇತ ವಸ್ತ್ರಧಾರಿ : ಸರಿ ನೀವು ಹೇಳಿದಂತೆ ಆಗಲಿ.. ಆದರೆ ಅವ ತನ್ನ ಯೋಚನೆಗಳನ್ನು ಕಾರ್ಯರೂಪಕ್ಕೆ ತರುವ ತನಕ ಸಮಯ ಕಳೆಯಬೇಕು.. ಹೇಗೂ ನಾಳೆ ನಿಮ್ಮ ದಿನ ಅಲ್ಲವೇ.. ಯಾವುದಾದರೂ ಒಂದು ಪುಟ್ಟ ಕತೆ ಹೇಳಿ   ಸಮಯ ಕಳೆಯುತ್ತದೆ.. ಮತ್ತೆ ನಮ್ಮಿಂದ ಅವನಿಗೆ ಸಹಾಯ ಮಾಡೋದಕ್ಕಿಂತ ಅವನನ್ನು ಅವನ ಪಾಡಿಗೆ ಬಿಟ್ಟಂಗೂ ಆಗುತ್ತದೆ... 

ಜಟಾಧಾರಿ: ಒಂದೂರಿನಲ್ಲಿ ಒಂದು ಮಂಡಳಿ .. ಅಲ್ಲಿ ಗುರುಗಳು ಶಿಷ್ಯಕೋಟಿಗಳು.. ಸಮಾಜಸೇವೆ.. ಸಮಾಜದಿಂದ ಸೇವೆ.. ಸಮಾಜಕ್ಕೆ ಸೇವೆ ಈ ಮೂರು ಸಿದ್ಧಾಂತ ಹೊಂದಿದ್ದ ಮಂಡಳಿಯದು..  ಸೌಭಾಗ್ಯವೇ ತುಂಬಿ ತುಳುಕುತಿದ್ದ ಮಂಡಳಿಯದು.. ಸಮಾಜಕ್ಕೆ   ಸಂದೇಶ ಕೊಡುವ ಸಲುವಾಗಿ ಅನೇಕಾನೇಕ ಸಮಾಜಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.. (ಒಂದು ದೀರ್ಘ ಉಸಿರನ್ನು ಎಳೆದುಕೊಂಡು ಬಿಟ್ಟರು... ಹಣೆಯಲ್ಲಿ, ಮೈಮೇಲೆ ಹಚ್ಚಕೊಂಡಿದ್ದ ವಿಭೂತಿಯ ಗಾಳಿಯಲ್ಲಿ ತೇಲಿಹೋಗಿ ಶ್ವೇತಾ ವಸ್ತ್ರಧಾರಿಯ ಮೇಲೆ ಆಶೀರ್ವಾದದ ಪೂರ್ವಕವಾಗಿ ಬಿದ್ದಿತು.. ಅದನ್ನು ಅವರು ಕಣ್ಣಿಗೆ ಒತ್ತಿಕೊಂಡು ಸಂತಸಪಟ್ಟರು.. )

ಮುಂದುವರೆಸುತ್ತಾ.. ಆ ಮಂಡಳಿ ಒಂದು ಕಾರ್ಯಕ್ರಮದ ರೂಪು ರೇಷೆಗಳನ್ನು ಸಿದ್ಧ ಮಾಡಿಕೊಂಡಿತು.. ಅವರ ಉದ್ದೇಶ ತಮ್ಮ ಬಳಿ ಇದ್ದ ಜ್ಞಾನವನ್ನು ಸಮಾಜಕ್ಕೆ ಹಂಚುವುದು.. ಒಬ್ಬೊಬ್ಬರಿಗೆ ಹಂಚುತ್ತಾ ಹೋಗುವ ಬದಲು.. ಒಂದು ಪುಟ್ಟ ಕಾರ್ಯಕ್ರಮ ಮಾಡಿ ತಮ್ಮ ಇರುವಿಕೆಯನ್ನು ಆ ಪ್ರದೇಶಕ್ಕೆ ತಿಳಿಸುವುದು.. ಹಾಗೆ ತಮ್ಮ ಸಂದೇಶಗಳನ್ನು ಕರಪತ್ರಗಳ ಮೂಲಕ ಹಂಚುವುದು.. ಬಂದವರಿಗೆ ತಮ್ಮ ಮಂಡಳಿಯ ಉದ್ದೇಶಿತ ಪಠ್ಯಗಳನ್ನು ಹೇಳುವುದು.. ಕಡೆಯಲ್ಲಿ ತಮ್ಮ ಮಂಡಳಿಯ ರೂಪು ರೇಷೆಗಳು.. ಉಗಮವಾದ ತಾಣ, ಬೆಳೆದ ತಾಣ ಅದಕ್ಕೆ ಕಾರೀಣೀಕರ್ತರ ಬಗ್ಗೆ ಒಂದಷ್ಟು ವಿವರ.. ಮತ್ತೆ ಪ್ರಸಾದ ವಿನಿಯೋಗ.. ತಮ್ಮ ಶಿಶ್ಯಕೋಟಿಗಳ ಉದರಕ್ಕೆ ಸ್ವಲ್ಪ ತಿಂಡಿ ತಿನಿಸು... ಇದು ಕಾರ್ಯಕ್ರಮದ ವಿವರವಾಗಿತ್ತು .. 

ಶ್ವೇತ ವಸ್ತ್ರಧಾರಿ : ಆಹಾ ಪೀಠಿಕೆಯೇ ಎಷ್ಟು ಸೊಗಸಾಗಿದೆ.. ಪೂರ್ತಿ ಕೇಳುವ ಹಂಬಲ ನನ್ನದು ಮುಂದಕ್ಕೆ ಹೇಳಿ.. 

ಜಟಾಧಾರಿ: ಅಲ್ಲಿ ನೋಡು ಅಸ್ತಿಪಂಜರದಂತೆ ತನ್ನ ತಲೆಯಲ್ಲಿರುವ ಆಲೋಚನೆಯನ್ನು ನನ್ನ ಜಟೆಯಿಂದ ಬರುವ ಗಂಗೆಯಂತೆ ಹರಿಯುತ್ತಿದೆ.. ಇರಲಿ ಅವನಿಗೆ ಶುಭಕೋರುತ್ತಾ ಮುಂದೆ ಈ ಕತೆಯ ಬಗ್ಗೆ ಹೇಳುತ್ತೇನೆ.. 

ಮಂಡಳಿಯ ಶಿಷ್ಯಕೋಟಿಗಳು ತಮ್ಮ ಪರಿಶ್ರಮ ತುಂಬಿಸಿ.. ಒಂದುವೇದಿಕೆ ಸಿದ್ಧ ಮಾಡಿತ್ತು.. ಅಲ್ಲಿ ಒಂದು ಕಡೆ ನಿರಾಕಾರ ಶಿವನನ್ನು ಅಲಂಕರಿಸಿ.. ಅದಕ್ಕೆ ಬೇಕಾದ ಟಬೇಲ್, ಹೂವು, ಅಲಂಕಾರ.. ಜೊತೆಯಲ್ಲಿ ಎರಡು ಟೇಬಲನ್ನು ಒಂದರ ಮೇಲೆ ಒಂದು ಇರಿಸಿದ್ದು ಅದರ ಮೇಲೆ ಶಿವನನ್ನು ಕೂರಿಸಿದ್ದು ಇಷ್ಟವಾಯಿತು.. 

ಶ್ವೇತ ವಸ್ತ್ರಧಾರಿ : ಇದರ ಬಗ್ಗೆ ಕೊಂಚ ಹೇಳಿ ... 

ಜಟಾಧಾರಿ: ಯಾವುದರ ಬಗ್ಗೆ?

ಶ್ವೇತ ವಸ್ತ್ರಧಾರಿ : ಆ ಟೇಬಲ್ಲಿನ ಬಗ್ಗೆ.. 

ಜಟಾಧಾರಿ: ದೇಹ, ಆತ್ಮ ಎಂಬ ಎರಡು ಮಜಲಿನ ಹಾಗೆ ಒಂದು ದೊಡ್ಡ ಟೇಬಲ್ ಅದರ ಮೇಲೆ ಚಿಕ್ಕ ಟೇಬಲ್.. ಅಂದರೆ ದೊಡ್ಡ ಟೇಬಲ್ ದೇಹವಾದರೆ.. ಚಿಕ್ಕ ಟೇಬಲ್ ಆತ್ಮ.. ಅದರ ಮೇಲೆ ಪರಮಾತ್ಮನಾದ ನಾನು ವಾಹ್ ಸೂಪರ್ ಸೂಪರ್.. ಹೀಗಿರಬೇಕು ಯೋಚನೆಗಳು.. 


ಆ ಸರಿ ಮುಂದುವರೆಯುತ್ತಾ.. ಹೂವಿನ ಅಲಂಕಾರ.. ಎಲೆಗಳನ್ನು ಕತ್ತರಿಸಿ ಚಂದವಾಗಿ ಜೋಡಿಸಿದ ವಿನ್ಯಾಸ.. ತುಂಬಾ ತುಂಬಾ ಇಷ್ಟವಾಯಿತು.. ಅಲ್ಲಿಂದ ಮುಂದೆ.. ಬಂದ ಭಕ್ತಾದಿಗಳಿಗೆ.. ಶಿವನಿಗೆ ಪುಟ್ಟ ಪೂಜೆ ಸಲ್ಲಿಸಿ.. ನನ್ನ ಪ್ರಿಯ ಭಕ್ತೆಯಿಂದ ಅಕ್ಷತೆಯನ್ನ ತೆಗೆದುಕೊಂಡು.. ಅದನ್ನು ಶಿವನ ಮೇಲೆ ಅರ್ಚಿಸಿ... ತೀರ್ಥ ತೆಗೆದುಕೊಂಡ ಮೇಲೆ.. ಜ್ಞಾನ ಗಂಗೆಯನ್ನು ತಮ್ಮ ಮನಸ್ಸಿಗೆ ತುಂಬಿಕೊಳ್ಳಲು ಸಹಾಯ ಮಾಡುತ್ತಿದ್ದವರು ಆ ಮಂಡಳಿಯ ಶಿಷ್ಯಕೋಟಿಗಳು.. 



ಪ್ರತಿಯೊಬ್ಬರಲ್ಲೂ ಉತ್ಸಾಹ.. ಇಡೀ ದಿನದ ಕಾರ್ಯಕ್ರಮ ಅವರನ್ನು ಬಳಲಿಸಿದ್ದರು.. ಉತ್ಸಾಹ ಕುಂದದೆ ಬಂದ ಪ್ರತಿ ಭಕ್ತರಿಗೂ ಸ್ವಲ್ಪವೂ ಬೇಸರವಿಲ್ಲದ,, ಹೇಳಿದ ವಿಚಾರಗಳೇ ಆಗಿದ್ದರೂ.. ಸ್ಪೂರ್ತಿಯಿಂದ ಮನಮುಟ್ಟುವ ಹಾಗೆ ವಿಚಾರಗಳನ್ನು ಪ್ರಸ್ತುತ ಪಡಿಸುತಿದ್ದರು.. 










ಊಟದ ಸಮಯವಾಗಿದ್ದರೂ.. ಅವರಿಗೆ ಹಸಿವು ಅನ್ನುವ ಮಾಯೆ  ಕಾಡುತ್ತಲೇ ಇರಲಿಲ್ಲ.. ಕಾರಣ ಮಾಯೆಯನ್ನು ದಾಟಿ ಸಾಧಿಸುವ ಛಲ ಹೊತ್ತ ಸಾಧಕರು ಇವರು.. ಹಾಗಾಗಿ ಮಾಯೆಯೇ ಕೂಡ ಹತ್ತಾರು ಬಾರಿ ಯೋಚನೆ ಮಾಡುವ ಹಾಗೆ ಮಾಡಿತ್ತು.. ಈ ಸಾಧಕರ ಪರಿಶ್ರಮ.. 

ಶ್ವೇತ ವಸ್ತ್ರಧಾರಿ : ಸುಂದರ ನಿರೂಪಣೆ.. 

ಜಟಾಧಾರಿ: ನೋಡಪ್ಪ.. ಒಂದು ಪೀಳಿಗೆಯಿಂದ ಇನ್ನೊಂದು ಪೀಳಿಗೆಗೆ ಜ್ಞಾನದ ವಾಹಿನಿ ಸಾಗಬೇಕು.. ದಶಕಗಳಿಂದ ಸೇವೆಯೇ ನನ್ನ ಗುರಿ ಎಂದು ನಂಬಿರುವ ಈ ನನ್ನ ಪ್ರಿಯ ಶಿಷ್ಯೆ ಇಡೀ ದಿನ.. ಕೂತು ಬಂದವರಿಗೆ ನಗುಮೊಗ ತೋರಿಸುತ್ತಾ.. ಆಶೀರ್ವಚನವಾಗಿ ಅಕ್ಷತೆ ಕೊಟ್ಟು.. ಸೇವೆ ಸಲ್ಲಿದ ಈ ನನ್ನ ಪ್ರಿಯಶಿಷ್ಯೆಗೆ ನನ್ನ ಶುಭ ಹಾರೈಕೆಗಳು.. 

ಶ್ವೇತ ವಸ್ತ್ರಧಾರಿ : ಸುಂದರ ಕಥಾನಕ...

***********

ಕತ್ತಲು ಸರಿಯುತಿತ್ತು.. ದಿನಕರ ಬರಲಿ ಇನ್ನೂ ಕೆಲವು ತಾಸುಗಳಿತ್ತು.. ಮರದ ಹಿಂದೆ ಬರುತ್ತಿದ್ದ ಪಿಸು ಮಾತುಗಳು ಮೆಲ್ಲನೆ ಸದ್ದು ಕಡಿಮೆಯಾಗುತ್ತಿತ್ತು.. ಯಾಕೋ ಅರಿಯದೆ.. ಮರದ ಹಿಂದೆ ಮೆಲ್ಲನೆ ಸಾಗಿದೆ... ಅಲ್ಲೊಂದಷ್ಟು ವಿಭೂತಿಯ ರಾಶಿ ಇತ್ತು.. ಅದರ ಪಕ್ಕದಲ್ಲಿಯೇ ಬಿಳಿಯ ವಸ್ತ್ರ.. ಅದಕ್ಕೆ ಪೂರಕವಾಗಿ ಒಂದು ಬಿತ್ತಿ ಪತ್ರ ಅರ್ಥಾತ್ ಪಾಂಪ್ಲೆಟ್ ... 

ಕಣ್ಣುಜ್ಜಿಕೊಂಡೆ.. ಅರೆ ಕನಸೇ..ಗೊತ್ತಾಗುತ್ತಿಲ್ಲ .. ಸುಮ್ಮನೆ ಒಂದಷ್ಟು ಹೊತ್ತು ಲಿಂಗಾಷ್ಟಕ ಕೇಳಿದೆ.. ಅರೆ ಮಾರನೇ ದಿನ ನೆಡೆದ ಕಾರ್ಯಕ್ರಮ ನನ್ನ ಕಣ್ಣ ಮುಂದೆ ಹಾಗೆಯೇ ಬಂದುಬಿಟ್ಟಿತ್ತು.. 

ಯಾರಿಗೂ ಹೇಳಲಿಲ್ಲ.. ನನ್ನ ಕೆಲಸ ಮುಗಿಸಿ.. ಸ್ವಲ್ಪ ಹೊತ್ತು ವಿಶ್ರಾಂತಿ ಪಡೆದು.. ಮತ್ತೆ ಆ ಮಂಡಳಿಗೆ ಬಂದಾಗ ಆಗಲೇ ಜನ ಸಾಗರ ಮೆಲ್ಲನೆ ಹರಿದು ಬರುತಿತ್ತು... 

ಹಿಂದಿನ ದಿನ ಮನಸ್ಸಿಗೆ ಅನುಭವಕ್ಕೆ ಬಂದ ಹಾಗೆ ಒಂದೊಂದೇ ಘಟನೆಗಳು ಘಟಿಸುತ್ತಾ ಹೋಯಿತು.. 

ಬಂದವರೆಲ್ಲ ಖುಷಿ ಪಟ್ಟರು.. ಪ್ರತಿಕ್ಷಣದಲ್ಲೂ ಕಣಕಣದಲ್ಲೂ ಅನುಭವಿಸಿದ ಆ ಅನುಭವಾಮೃತವನ್ನು ಸೇವಿಸಿ ಮನೆಗೆ ಹಿಂದಿರುಗಿದಾಗತಡರಾತ್ರಿಯಾಗಿತ್ತು .. ಎಲ್ಲಾ ಸಿವನ ದಯೆ ಸಿವನ ದಯೆ ಎನ್ನುತ್ತಾ ಮಲಗಿದಾಗ ಹರ ಹರ ಮಹದೇವ್ ಎನ್ನುತ್ತಾ ನಿದ್ರಾದೇವಿ ತಲೆಸವರಿದಳು ..!!!

***********

ಜಟಾಧಾರಿ: ಏನಪ್ಪಾ ಹೇಗಿತ್ತು.. ಕಥೆ.. 

ಶ್ವೇತ ವಸ್ತ್ರಧಾರಿ : ಇದು ಕತೆಯಲ್ಲ.. ಜೀವನ.. ನಾಳೆ ನೋಡಬೇಕಿದ್ದ ಘಟನೆಯನ್ನು ಟರ್ ಟರ್ ಅಂತ ಗಡಿಯಾರಕ್ಕೆ ಕೀಲಿ ಕೊಟ್ಟು ನಮಗೆ ಬೇಕಾದಂತೆ ಸಮಯವನ್ನು ಸೆಟ್ ಮಾಡುವವರಂತೆ... ಮಾರನೇ ದಿನ ನೆಡೆಯುವ ಕಾರ್ಯಕ್ರಮವನ್ನು ಒಂದು ದಿನ ಮುಂಚಿತವಾಗಿ ಅನುಭವಕ್ಕೆ ಸಿಗುವಂತೆ ಮಾಡಿದ ನಿನಗೆ ಕೋಟಿ ನಮನಗಳು... 

ಜಟಾಧಾರಿ: ಶುಭಾಶಯಗಳು.. ನಿನಗೆ ಮತ್ತೆ ನಿನ್ನ ಮಂಡಳಿಗೆ..  ಪ್ರತಿಯೊಂದು ಕ್ಷಣವೂ ಶುಭವಾಗಲಿ.. ನೋಡು ಈ ಕೆಳಗಿನ ಚಿತ್ರದಲ್ಲಿ.. ಎಷು ದೊಡ್ಡ ಸಂದೇಶವಿದೆ.. ಹೇಳುವೆಯ.. ರಿಮೋಟ್ ಬಟನ್ ಒತ್ತಿದ ಕ್ಷಣ ಪ್ರೊಜೆಕ್ಟರ್ ನಲ್ಲಿ ಚಿತ್ರ ಬದಲಾಯಿತು.. 

ಶ್ವೇತ ವಸ್ತ್ರಧಾರಿ : (ಒಂದು ಕ್ಷಣ ಯೋಗದ ಮುದ್ರೆಗೆ ಹೋಗಿ.. ದೀರ್ಘ ಉಸಿರೆಳೆದುಕೊಡು)  ಭೀಷ್ಮನ ರೂಪದಲ್ಲಿ ನಾವು ಸಾಧಿಸುವ ಗುರಿಯಿರುತ್ತದೆ.. ಶ್ರೀ ಕೃಷ್ಣನ ರೂಪದಲ್ಲಿ ನಮ್ಮ ಪರಿಶ್ರಮ, ಅಂತಃ ಶಕ್ತಿ ಇರುತ್ತದೆ.. ಅರ್ಜುನನಾಗಿ ನಾವಿರುತ್ತೇವೆ... ನಾವು ನಮ್ಮ ಗುರಿ ಮರೆತು ಮಾಯೆಯ ಮೋಹಕ್ಕೆ ಒಳಗಾದಾಗ.. ನಮ್ಮಲ್ಲಿರುವ ಪರಿಶ್ರಮ ಅಂತಃ ಶಕ್ತಿನಮ್ಮನ್ನು ಸೋಲಿಸಿ ಗುರಿಯತ್ತ ಧಾವಿಸುತ್ತದೆ.. ಪರಿಶ್ರಮ ಅಂತಃ ಶಕ್ತಿ ಯಾವಾಗಲೂ ನಮಗೆ ಪೂರಕವಾಗಿ ಸಹಾಯರೂಪವಾಗಿ ಬರಬೇಕು.. ಅದೇ ನಮ್ಮನ್ನು ಬಿಟ್ಟು ಹೊರಗೆ ಹೋಗಲು ಹೆಜ್ಜೆ ಹಾಕಿದಾಗ ನಮ್ಮ ಸೋಲು ಕಟ್ಟಿಟ್ಟ ಬುತ್ತಿ.. ಅದಕ್ಕೆ ಅದರ ಕೈ ಕಾಲು ಹಿಡಿದು ಮತ್ತೆ ನಮ್ಮೊಳಗೇ ಬರುವಂತೆ ಪ್ರಾರ್ಥಿಸಿ ಗುರಿಯತ್ತ ಶ್ರಮಿಸಬೇಕು.. 

ಅದೇ ರೀತಿ ಒಂದು ಕಾರ್ಯಕ್ರಮ ಎಂದಾಗ ಒಬ್ಬರು ಮುಂದಾಳತ್ವ ವಹಿಸಿಕೊಂಡು ನುಗ್ಗುತ್ತಾರೆ.. ಅವರಿಗೆ ನಾವು ಪೂರಕವಾಗಿ ಸಾತ್ ಕೊಟ್ಟರೆ ಆಯಿತು.. ಆಗ ನೆಡೆಯುವುದೇ ಜಾದೂ... ಒಬ್ಬರೇ ಒಂದು ಬಂಡೆಯನ್ನು ಅಲುಗಾಡಿಸಲು ಸಾಧ್ಯವಿಲ್ಲ.. ಆದರೆ ಹತ್ತು ಕೈಗಳು ಸೇರಿದಾಗ.. ಬಂಡೆಯಂತಹ ಜಡ ಗುರಿಯೂ ಕೂಡ ದಾರಿ ಮಾಡಿಕೊಡುತ್ತದೆ.. 

ಜಟಾಧಾರಿ: ಆಹಾ ಎಷ್ಟು ಸುಲಭವಾಗಿ ನನ್ನ ಮನದಲ್ಲಿದ್ದ ಮಾತುಗಳನ್ನು ಹೇಳಿದೆ.. ತುಂಬಾ ತುಂಬಾ ಖುಷಿಯಾಯಿತು.. ನಿನ್ನ ಮಂಡಳಿಗೆ ಹಾಗೂ ನಿನ್ನ ಶಿಷ್ಯಕೋಟಿಗಳಿಗೆ ನನ್ನ ಶುಭಾಶೀರ್ವಾದಗಳು..

ಶ್ವೇತ ವಸ್ತ್ರಧಾರಿ : ಶಿವನೇ.. ನಿನ್ನ ಆಶೀರ್ವಾದ ನನಗೆ ಸಿಕ್ಕಿರುವಾಗ 84 ಜನ್ಮಗಳು ಕ್ಷಣಮಾತ್ರದಲ್ಲಿ ಕಳೆಯುತ್ತದೆ ಹಾಗೆ ನೀ ಕೊಟ್ಟ ನನ್ನ ಪ್ರತಿಯೊಬ್ಬ ಶಿಷ್ಯಕೋಟಿಗಳ ಜೀವನ ಡಬಲ್ ಲೈಟ್ ಆಗಿರುತ್ತದೆ.. ಹಾಏ ಪರಮಧಾಮದ ಪ್ರವೇಶಕ್ಕೆ ಸದಾ ಅರ್ಹರಾಗಿರುತ್ತಾರೆ .. .. ಶಿವನೇ ನಿನ್ನ ದಿನಕ್ಕೆ ನಿನಗೆ ಶುಭಾಶಯಗಳು..ನೀನಿಲ್ಲದೆಡೆಯೆಲ್ಲ.. ನೀನಿಲ್ಲದೆ ಏನಿಲ್ಲ.. ನಾನು ನಾನೆಂಬ ಅಜ್ಞಾನಿಗೆ ನಾನಿಲ್ಲ .. 

ಜಟಾಧಾರಿ: ಸುಂದರ ಮಾತು.. ನಿನಗೂ ಶುಭಾಶಯಗಳು.. ಮತ್ತೆ ಬರುವೆ ಮುಂದಿನ ವರ್ಷದಲ್ಲಿ.. ಸಮಸ್ತ ಜನೋ ಸುಖಿನೋಭವಂತು....!!!

Sunday, February 12, 2023

ಒಂದು ಸುಂದರ ಮುಂಜಾವು..

ಸರ್ ... 

ಏನ್ರಿ 

ನಾವು ಇಲ್ಲಿಂದ ಬಂದಿದ್ದೀವಿ.. ನಮ್ಮ ಕಾರ್ಯಕ್ರಮ ಇದು.. ನಮಗೆ ಇದು ಬೇಕು.. 

ಫೋಲಿಸ್ ಠಾಣೆಯಲ್ಲಿ ನೆಡೆದ ಚುಟುಕು ಮಾತುಗಳು.. ಬೇಕಾದ ಅನುಮತಿ ಸಿಕ್ಕಿತು.. ಪೋಲಿಸಿನವರು ನಿಮಗೆ ಬೇಕಾದ ವ್ಯವಸ್ಥೆ ಮಾಡಿಕೊಡುತ್ತೇವೆ.. ಹುಷಾರಾಗಿ, ಕ್ಷೇಮವಾಗಿ ಕಾರ್ಯಕ್ರಮ ನೆಡೆಯಲಿ ಶುಭವಾಗಲಿ  ನಿಮ್ಮನ್ನು ಯಾವುದೋ ಒಂದು ಶಕ್ತಿ ಕಾಪಾಡುತ್ತದೆ.. ಹೋಗಿ ಬನ್ನಿ ಶುಭವಾಗಲಿ ಎಂದು ಹಾರೈಸಿ ಕಳಿಸಿದರು.. 

ಬೆಳಿಗ್ಗೆ ಆಗಲೇ ಏಳೂವರೆ ಘಂಟೆ ದಾಟಿತ್ತು.. ಉತ್ಸಾಹದಿಂದ ಅನೇಕಾನೇಕಾ ಸೇವಾಧಾರಿಗಳು ಕೇಂದ್ರಕ್ಕೆ ಬಂದು ಸೇರಿದ್ದರು.. ಒಬ್ಬೊಬ್ಬರು ತಮಗೆ ತೋಚಿದ ರೀತಿಯಲ್ಲಿ ಕೆಲಸ ಮಾಡುತ್ತಿದ್ದರು.. ಎಲ್ಲರ ಗುರಿಯೊಂದೇ ಈ ಕಾರ್ಯಕ್ರಮ ಚೆನ್ನಾಗಿ ನೆಡೆಯಬೇಕು.. 

ಕೇಂದ್ರದ ಗುರುವಾಣಿ ಅಕ್ಕನವರು ಎಲ್ಲರಿಗೂ ತಿಂಡಿ ಕೊಟ್ಟ ಮೇಲೆ.. ಇಂದಿನ ಕಾರ್ಯಕ್ರಮದ ರೂಪುರೇಷೆಗಳನ್ನು ನಿಯಮಗಳನ್ನು ಹೇಳಿದರು.. ಕನ್ನಡ ಇಂಗ್ಲಿಷ್ ಹಿಂದಿ ಮೂರು ಭಾಷೆಯಲ್ಲಿ ಹೇಳಿದರು.. 

ಎಲ್ಲರೂ ತಲೆಯಾಡಿಸಿ.. ಒಪ್ಪಿಗೆ ಕೊಟ್ಟ ಮೇಲೆ ಶುರುವಾಯಿತು. 

ನಾ ಸದ್ದಿಲ್ಲದೇ ಒಂದು ಕೋಣೆಗೆ ಹೋಗಿ ಬಂದೆ.. ಯಾವುದೇ ತೊಂದರೆ ತಾಪತ್ರಯವಿಲ್ಲದೆ ಕಾರ್ಯಕ್ರಮ ನೆಡೆಯಲಿ ಎಂದು ಮನಸಾರೆ ಕೇಳಿದೆ.. ಅದೇ ಪ್ರಾರ್ಥನೆ ಬಂದವರೆಲ್ಲರದ್ದು ಆಗಿತ್ತು.. 

ರಸ್ತೆಗೆ ಬಂದು. .. ಒಂದಷ್ಟು ಫೋಟೋ ತೆಗೆದು.. ಆಗಸದ ಕಡೆ ನೋಡುತ್ತಾ ನಿಂತೇ.. 

"ಶ್ರೀ ಇವತ್ತು ಒಂದು ಜಾದೂ ತೋರಿಸುತ್ತೇನೆ.. ಆದರೆ ನಿನಗೆ ನಾ ಹೇಳುವುದಿಲ್ಲ... ಅದು ನಿನಗೆ ಅನುಭವಕ್ಕೆ ಬರುತ್ತದೆ.. ಓಕೆ ನಾ.. "

ನಾ ಆಗಸಕ್ಕೆ ಹೆಬ್ಬೆರಳು ತೋರಿ ನನ್ನ ಸಮ್ಮತಿ ಕೊಟ್ಟಿದ್ದೆ.. 

ಎಲ್ಲರೂ ಉತ್ಸಾಹದಿಂದ ಶಾಂತಿಯಾತ್ರೆಯಲ್ಲಿ ಪಾಲ್ಗೊಂಡರು.. ವಾಹನ ದಟ್ಟಣೆ ನಿವಾರಿಸುವವರು ಒಬ್ಬರು.. ನೆಡೆಯುತ್ತಾ ಬರುತ್ತಿದ್ದವರಿಗೆ ನೀರು, ಪಾನೀಯ.. ಕೊಡುವವರು ಒಬ್ಬರು.. ಸುಸ್ತಾಗಿದೆಯೇ ಸರಿ ಕಾರು ಹತ್ತಿ ಅಂತ.. . ಕಾರನ್ನು ನಿಲ್ಲಿಸಿ ಅದರೊಳಗೆ ಸುಸ್ತಾದವರನ್ನು ಕೂರಿಸಿ.. ನೀರು ಪಾನಕ ಕೊಟ್ಟು ಸುಧಾರಿಸುವವರು ಒಬ್ಬರು.. ಹೀಗೆ ತಮಗೆ ತೋಚಿದ ರೀತಿಯಲ್ಲಿ ಒಬ್ಬರಿಗೆ ಒಬ್ಬರು ಸಹಾಯಕವಾಗುತ್ತಿದ್ದರು.. 

ನನ್ನ ಪಾಡಿಗೆ ನನ್ನಿಷ್ಟದ ಕೆಲಸ ಫೋಟೋಗಳನ್ನು ತೆಗೆಯುತ್ತಾ ಹೆಜ್ಜೆ ಹಾಕುತ್ತಿದ್ದೆ.. ಮತ್ತೆ ನನ್ನ ಗಮನಕ್ಕೆ ಬರುತ್ತಿದ್ದ ಒಂದು ವಿದ್ಯಮಾನವನ್ನು ಗಮನಿಸುತ್ತಿದ್ದೆ.. 

"ಶ್ರೀ  ಮಹಾಭಾರತದಲ್ಲಿ ಯುದ್ಧ ಮುಗಿದ ಮೇಲೆ.... ಅರ್ಜುನ ಮತ್ತು ಭೀಮನಿಗೆ ಮಾತುಕತೆ ಆರಂಭವಾಯಿತು.. ಯುದ್ಧ ಗೆದ್ದಿದ್ದು ನನ್ನಿಂದ ನನ್ನಿಂದ ಅಂತ.. ಆಗ ಶ್ರೀ ಕೃಷ್ಣ ನಸುನಗುತ್ತಾ .. ಈ ಯುದ್ಧವನ್ನು ಪೂರ್ಣ ನೋಡಿದ ಒಬ್ಬ ಇದ್ದಾನೆ ಅವನನ್ನು ಕೇಳೋಣ.. ಅಂತ ಬರ್ಬರೀಕ ಅಂತ .. ಅವನನ್ನು ಕೇಳೋಣ ಅಂತ.. .. .. ಭೀಮಾರ್ಜುನ, ಕೃಷ್ಣನ ಜೊತೆ ಒಂದು ಬೆಟ್ಟದ ಬುಡಕ್ಕೆ ಬರುತ್ತಾರೆ.. ಬೆಟ್ಟದ ತುದಿಯಲ್ಲಿ ಒಂದು ತಲೆ ಬುರುಡೆ ಇರುತ್ತೆ.. ಅದೇ ಬರ್ಬರೀಕ.. ಅವನನ್ನು ಕೇಳಿದಾಗ.. ಬರ್ಬರೀಕ ಹೇಳುತ್ತಾನೆ.. ನನಗೆ ಶ್ರೀಕೃಷ್ಣನ ಚಕ್ರ ಬಿಟ್ಟು ಬೇರೆ ಏನೂ ಕಾಣಲಿಲ್ಲ.. ಆ ಚಕ್ರ ಒಂದೇ ಯುದ್ಧ ಮಾಡಿ ಗೆದಿದ್ದು.. "

ಅಶರೀರವಾನಿಗೆ ನಮಸ್ಕರಿಸುತ್ತಾ "ಹಾ ಸರಿಯಾಗಿದೆ.. ಯುಗಯುಗದಲ್ಲಿಯೂ ಒಂದು ಕಾಣದ ಅದೃಶ್ಯ ಶಕ್ತಿ ಇದ್ದೆ ಇರುತ್ತದೆ.. ಅದನ್ನು ಕೃಷ್ಣ ಎಂದು ಹೇಳಿ.. ಶಿವ ಎಂದು ಹೇಳಿ.. ಶಂಕರ ಎಂದು ಹೇಳಿ.. ಇಲ್ಲವೇ ಬ್ರಹ್ಮ ಎಂದು ಹೇಳಿ.. ಯಾವುದೋ ಕಾಣದ ಕೈ ನಮಗೆ ಅಭಯ ನೀಡುತ್ತದೆ. . ಜೊತೆಯಲ್ಲಿ ನಾವು ಬೀಳದಂತೆ ತಡೆಯುತ್ತದೇ" 

"ಹೌದು ಶ್ರೀ... ನೀ ಹೇಳೋದು ನಿಜ..ನೋಡು ನಿಮ್ಮ ಕಾರ್ಯಕ್ರಮಕ್ಕೆ ನಾ ಬರೋಣ ಅಂತಿದ್ದೆ.. ಆದರೆ ಹತ್ತಾರು ಸೆಂಟರುಗಳು.. ಹತ್ತಾರು ಸೇವಾಧಾರಿಗಳು, ಅಕ್ಕಂದಿರು, ಅಣ್ಣಂದಿರು.. ಎಲ್ಲರನ್ನೂ ಸಲಹಬೇಕು.. ಅದಕ್ಕೆ.. ಒಂದು ಕೆಲಸ ಮಾಡ್ತೀನಿ.. ಅದೇನು ಅಂತ ನಿನಗೆ ಈ ಕಾರ್ಯಕ್ರಮ ಮುಗಿದ ಮೇಲೆ ಹೇಳ್ತೀನಿ.. "

ಅಶರೀರವಾಣಿ ಅದೃಶ್ಯವಾಯಿತು.. 

ಶಾಂತಿ ಯಾತ್ರೆ.. ಶೋಭಾ ಯಾತ್ರೆ ಸುಸೂತ್ರವಾಗಿ ನೆಡೆಯಿತು... 











ಕಾರ್ಯಕ್ರಮಕ್ಕೆ ಬಂದವರಿಗೆ ಭರ್ಜರಿ ಭೋಜನ ಕೊಟ್ಟು.. ಹರಸಿ ಹಾರೈಸಿ... ಕೇಂದ್ರದ ಕೇಂದ್ರ ಬಿಂದು ಅಕ್ಕನವರು ಎಲ್ಲರನ್ನೂ ಉದ್ದೇಶಿಸಿ ಮಾತನಾಡಿ.. ಎಲ್ಲರಿಗೂ ಅಭಿನಂದನೆ ಹೇಳಿ... ಬೀಳ್ಕೊಟ್ಟರು... 

ಹೊರಗೆ ಬಂದಾಗ. ಮತ್ತೆ ಅಶರೀರವಾಣಿ "ಶ್ರೀ..  ನಾ ಬರಬೇಕಿತ್ತು.. ಆದರೆ ನನಗೆ ಬರೋಕೆ ಆಗಲಿಲ್ಲ. ಆದರೆ ನಿಮ್ಮ ಇಡೀ ಕಾರ್ಯಕ್ರಮದ ನೇತೃತ್ವ ವಹಿಸಿದ್ದು... ಒ.. ನಿಮಗೆ ತೊಂದರೆಯಾಗಬಾರದು ಅಂತ ನಿಮ್ಮ ಜೊತೆಯಲ್ಲಿ ಹೆಜ್ಜೆ ಹಾಕಿ.... ನೀವೆಲ್ಲರೂ ಕೇಂದ್ರವನ್ನು ಸೇರಿದ ತಕ್ಷಣ ಅದು ಮರೆಯಾಯಿತು... ಅದೇ ಇಡೀ ಕಾರ್ಯಕ್ರಮದ ರಕ್ಷಕ ಶಕ್ತಿ..  ಏನನ್ನೂ ಬಯಸದೆ.. ಏನನ್ನೂ ಬೇಡದೆ ಜೊತೆಯಾಗಿ ಬಂತು.. ರಕ್ಷಣೆಗೆ ನಿಂತಿತು .. ತನ್ನ ಕಾರ್ಯ ಮುಗಿದ ಮೇಲೆ ಕಾಣದಂತೆ ಮಾಯವಾಯಿತು.. " ಇದನ್ನೇ ಅಲ್ಲವೇ ಹೇಳುವುದು ಕಾಣದ  ಶಕ್ತಿ ಎಂದು.. 



ಎಷ್ಟು ನಿಜವಲ್ಲವೇ.. ಇಡೀ ಕಾರ್ಯಕ್ರಮವನ್ನು ನೋಡಿದಾಗ ನನಗೆ ಅರಿವಾಗಿದ್ದು.. ಕಾಣದ ಶಕ್ತಿ ತನ್ನ ಜಾದೂವನ್ನು ಒಂದು ಜೀವಿಯಲ್ಲಿ ತುಂಬಿ ಅದು ತನ್ನ ಕರ್ತವ್ಯವನ್ನು ನಿಷ್ಠೆಯಿಂದ ಮಾಡಿ.. ದಾರಿಯಲ್ಲಿ ಯಾವುದೇ ರೀತಿಯ ತೊಂದರೆಯಾಗದಂತೆ ನೋಡಿಕೊಂಡಿದ್ದುಅಲ್ಲದೆ  ಎದುರಾಳಿಯಾಗಿ ಯಾವುದೆ ಅದಾ ಸೋದರ ಸಂಬಂಧಿ ಗಲಾಟೆ ಮಾಡಿದರೆ ಬಾಯಿ ಮುಚ್ಚಿಕೊಂಡು ಕೂತಿರುವಂತೆ ಮಾಡುವಲ್ಲಿ ಯಶಸ್ವಿಯಾದರು.. 

ಹೌದು.. ಒಂದು ಚಿಕ್ಕ ಚೊಕ್ಕ ಕಾರ್ಯಕ್ರಮ ಯಶಸ್ವಿಯಾಗಿದ್ದು ಸರಳ ನಾಯಕತ್ವದಿಂದ.. ಮತ್ತು ಗೆದ್ದೇ ಗೆಲ್ಲುತ್ತೇನೆ ಎಂಬ ಛಲದಿಂದ... !!!

ಭಾನುವಾರವನ್ನು ಸುಂದರವಾಗಿ ಕಳೆದ ಖುಷಿ ನನ್ನದು... !

"ಶ್ರೀ ನಿನಗನ್ನಿಸಿದ ಒಂದೆರಡು ಮಾತುಗಳು ಶೈಲಿಯಲ್ಲಿ ಹೇಳು"

"ಆಗಲೇ ಚಿತ್ರಗಳ ಜೊತೆಯಲ್ಲಿ ಹೇಳುವೇ ... 

೧. ಮೊದಲ ಚಿತ್ರ : "ನಮ್ಮನ್ನು ಸದಾ ಭಗವಂತ ಕೈ ಹಿಡಿದು ನೆಡೆಸುತ್ತಾನೆ"



೨. ಎರಡನೇ ಚಿತ್ರ : ಭಗವಂತನ ಕೃಪಾಕಟಾಕ್ಷದ ಬೆಳಕು ನಮ್ಮ ಮೇಲೆ ಬೀಳಲೇ ಬೇಕು .. ಬಿದ್ದೆ ಬೀಳುತ್ತದೆ 



೩. ಮೂರನೇ ಹಾಗೂ ನಾಲ್ಕನೇ ಚಿತ್ರ :  ನಮ್ಮ ಚೌಕಟ್ಟಿನೊಳಗೆ ಇದ್ದಾಗ ಚಂದ್ರೋದಯ ಖಂಡಿತ..  ಅಂದರೆ  ಗುರುಹಿರಿಯರ ಮಾರ್ಗದರ್ಶನ .... ಹಾಗೆಯೇ ಚಂದ್ರ ಮನಸ್ಸಿನ ಬಿಂಬ ಅದೇ ನಮ್ಮ ಯಶಸ್ಸಿಗೆ ಮೂಲ ಕಾರಣ 





೫. ಐದನೇ ಚಿತ್ರ : ಯಶಸ್ಸೇ ಬರಲಿ.. ಗೆಲುವು ಕಷ್ಟವಾಗಿರಲಿ.. ಏನೇ  ಆಗಲಿ ಮನಸ್ಸಿಗೆ ಸದ್ದು ಮಾಡದಂತೆ ನೋಡಿಕೋ.. ಅದು ಸಾಧ್ಯವಾಗೋದು ಸತ್ ಸಂಗದಿಂದ ಮಾತ್ರ 




೬. ಆರನೇ ಚಿತ್ರ :  ಗುರುಹಿರಿಯರು ಹಾಕಿಕೊಟ್ಟ ಮಾರ್ಗವೇ  ರಾಜಮಾರ್ಗ... ಅದು ಸಿಗುವುದು ರಾಜಯೋಗದ ಬಲದಿಂದ 



೭. ಏಳನೇ ಚಿತ್ರ : ನಾವು ಅಂದುಕೊಂಡದ್ದಕ್ಕಿಂತ ಆ  ಮಹಾಮಹಿಮನ ಪ್ಲಾನ್ ಸದಾ ಬೇರೆಯದೇ ಆಗಿರುತ್ತೆ .. ಅದು ನಾವು ಅಂದುಕೊಂಡದ್ದಕ್ಕಿಂತ ಶೀಘ್ರವಾಗಿ ಹತ್ತಿರದಲ್ಲಿ ಕಾಣುತ್ತದೆ.. 



.  

೮. ಎಂಟನೇ ಚಿತ್ರ : ನಾವು ಪ್ರಾರ್ಥನೆ ಮಾಡುತ್ತೇವೆ.. ಆ ಭಗವಂತ ನಮ್ಮ ರಕ್ಷಣೆಗೆ ಹೇಗೆ ಯಾರನ್ನು ಕಳಿಸುತ್ತಾನೋ ನಮಗೆ ಅರಿವಿಗೆ ಬರುವುದಿಲ್ಲ..  ಆದರೆ ಕಳಿಸಿದ ಸಹಾಯದ ಬಗ್ಗೆ ವರ್ಣಿಸೋಕೆ ಮಾತೆ ಬರೋಲ್ಲ