Saturday, December 30, 2017

ಬಯಸದೆ ಬಂದ ಭಾಗ್ಯ.. .. !

ಭಕ್ತ ಕುಂಬಾರ ಚಿತ್ರದ ಅಂತಿಮ ದೃಶ್ಯ.. ಗೋರನ ಕೈಗಳು ಮತ್ತೆ ಮೂಡಿಬರುತ್ತೆ .. ಮಗು ಸಿಗುತ್ತೆ ..

ವಿಠಲ ಗೋರನನ್ನು ಮತ್ತು ಆತನ ಕುಟುಂಬವನ್ನು ಅನುಗ್ರಹಿಸಿದಾಗ ಅಣ್ಣಾವ್ರು ಹೇಳುವ ಮಾತು

"ವಿಠಲ ಕೊಡುವವನು ನೀನೆ.. ತೆಗೆದುಕೊಳ್ಳುವವನು ನೀನೆ.. ಮತ್ತೆ ಕೊಟ್ಟು ಉದ್ಧಾರ ಮಾಡುವವನು ನೀನೆ.. "

ಈ ದೃಶ್ಯ ನೋಡುತ್ತಾ ಹಲವಾರು ಬಾರಿಮೂಕನಾಗಿದ್ದೇನೆ ..

 ಗಾಬರಿ ಆಗಬೇಡಿ ಮತ್ತೆ ನನ್ನ  ಪ್ರೀತಿಯ ಓದುಗರಾದ ನಿಮ್ಮನ್ನು ಭಾವಸಾಗರದಲ್ಲಿ ತೇಲಿಸುವುದಿಲ್ಲ.. ಅಳಿಸೋಲ್ಲ..

ದುಡ್ಡು ದುಡ್ಡು ದುಡ್ಡು ಇದು ತೆಲುಗು ಮೂಲದ ಶ್ರೀ ಯಂಡಮೂರಿ ವೀರೇಂದ್ರನಾಥ ಅವರ ಅದ್ಭುತ ಕಾದಂಬರಿ.. ಅಲ್ಲಿನ ನಾಯಕ ಎಲ್ಲವನ್ನು ಕಳೆದುಕೊಂಡಿರುತ್ತಾನೆ.. ಆಗ ಅವನಿಗೆ ದೊರೆಯುವ ನುಡಿಮುತ್ತು.. "ಕಳೆದುಕೊಂಡಲ್ಲೇ ಹುಡುಕು... "

ನನ್ನ ಪ್ರೀತಿಯ ವಿಕ್ಟರ್ ಮತ್ತು ರಿಟ್ಜ್ ನನಗೆ ಹೇಳಿದ್ದು ಇಷ್ಟೇ.. ಶ್ರೀ ದೇವರ ಚಿತ್ರಕಥೆಯಲ್ಲಿ ಇದ್ದ ಹಾಗೆ ನೆಡೆದಿದೆ.. ಇದನ್ನು ನೆನೆದು ನೆನೆದು ಮನಸ್ಸನು ಘಾಸಿ ಮಾಡಿಕೊಳ್ಳದೆ ಮುಂದೆ ಹೆಜ್ಜೆ ಇದು.. ಕಳೆದುಕೊಂಡಲ್ಲೇ ಹುಡುಕು..

ಭಗವಂತನ ಲೀಲೆ ಏನಿರುತ್ತೋ ಯಾರಿಗೆ ಗೊತ್ತು.. ನನಗರಿವಿಲ್ಲದೆ ಬಳುವಳಿಯಾಗಿ ಬಂತು ಕಾಣದ ಕಡಲಿಂದ ಒಂದು ಪ್ರೀತಿಯ ಉಡುಗೊರೆ.. ಬೇಡ ಅನ್ನಲಿಕ್ಕೆ ಸಮಯವೇ ಇರಲಿಲ್ಲ.. ಜೊತೆಯಲ್ಲಿ ಬೇಡ ಎನ್ನುವ ಗುಂಡಿ ನಿಷ್ಕ್ರಿಯವಾಗಿತ್ತು.. ಅಲ್ಲಿ ಒತ್ತಬೇಕಾದ್ದು "ಹೌದು" ಎನ್ನುವ ಗುಂಡಿ ಒಂದೇ..

ಶ್ರೀ ನಿಮ್ಮ ಉಡುಗೊರೆ ತಗೊಳ್ಳಿ ಅಂತ ಹೇಳಿದಾಗ ನಾ ನಂಬಲು ಸಿದ್ಧನಿರಲಿಲ್ಲ.. ಹಾಗಾಗಿ ನನ್ನ ಮಾತೃ ದೇವೋಭವ ಅವರಿಗೆ ತೆಗೆದುಕೊಳ್ಳಲು ಹೇಳಿದೆ.. ಅವರ ಕೈಯಿಂದ ನನಗೆ ಬಂತು..

ಅದು ಏನೂ ಅಂತೀರಾ.. ಚಿತ್ರಗಳನ್ನು ನೋಡಿ..





ನಾ ಚಲಾಯಿಸಲು ಸಿದ್ಧನಿರಲಿಲ್ಲ.. ಕಾರಣ ಗೊತ್ತಿಲ್ಲ.. ಆದರೆ ನನ್ನ ತಮ್ಮ ಮುರುಳಿ.. ನೀನೆ ಓಡಿಸಬೇಕು ಅಂತ ಹಠ ಮಾಡಿದ.. ಪಕ್ಕದಲ್ಲಿ ನನ್ನ ಸ್ನೇಹಿತೆ ಶೀತಲ್.. "ಅಪ್ಪ ಯು ಕ್ಯಾನ್ ಡು ಇಟ್" ಅಂದಳು.. ಅಮ್ಮ ಹೂಂ ಎಂದರು..

ಸ್ಟೇರಿಂಗ್ ಹಿಡಿದಾಗ ಹಾಗೆ ಕಣ್ಣ ಮುಂದೆ ಸಿನಿಮಾ ಓಡಿತು.. ಕಣ್ಣುಗಳು ಮಂಜಾದವು.. ಶ್ರೀ.. ಕಮಾನ್ ಅಂದಿತು ಒಳಗಿರುವ ಶಕ್ತಿ.. ಸಲೀಸಾಗಿ ಮನೆಯ ತನಕ ಬಂದೆ..

ಪೂಜೆ ಮಾಡಿಸುವ ಬಗ್ಗೆ ಮಾತಾಯಿತು.. ಅಮ್ಮ ನೀನೆ ಮಾಡಬೇಕು ಅಂತ ಹಠ ಮಾಡಿದೆ..

ಮುರುಳಿ.. ಇವನೊಬ್ಬ .. ಇವನಿಗೆ ಏನೂ ಹೇಳೋದು.. ಅಂತ ಬಯ್ದ..

ಅಕ್ಕ "ಮಾತೃ ದೇವೋಭವ ಕಣೋ" ಅಂದ್ಲು..

ಫಲಿತಾಂಶ.. ಅಮ್ಮನ ಕೈಯಲ್ಲಿ ಪೂಜೆ ಆಯಿತು..ನನಗಲ್ಲ.. ಬದಲಿಗೆ ಮನೆಗೆ ಬಂದ ಉಡುಗೊರೆಗೆ.. 



ತಲೆ ಎತ್ತಿ ನೋಡಿದೆ..
​ಬಯಸದೇ ಬರುವ ಭಾಗ್ಯ 
ಅರಿವಿಲ್ಲದೇ ಬರುವ ಅಡೆತಡೆಗಳು 
ನಮ್ಮನ್ನ ಪುಟಕ್ಕಿಟ್ಟ ಚಿನ್ನವಾಗಿಸುತ್ತವೆ..

ಭಾಗ್ಯ ನಿನ್ನದೇ ಲೀಲೆ ಎಂದು ಭಗವಂತನಿಗೆ ವಂದನೆ ಹೇಳಿದರೆ
ಅಡೆತಡೆಗಳು ನೀನಿದ್ದರೆ ಲೀಲೆ ಎಂದು ಭಗವಂತನಿಗೆ ಶರಣಾಗುತ್ತದೆ..

ಶುಭಮಂಗಳಮಯವಾಗಿರಲಿ 

ಎಂದು ಅಶರೀರವಾಣಿ ನುಡಿದು.. ಅದರ ಜೊತೆಯಲ್ಲಿಯೇ "ಸೂಪರ್" ಚಿನ್ಹೆ ಕಾಣಿಸಿತು.. 

14 comments:

  1. ಹೊಸತು ಹೊಸತು ತರುತಿದೆ...ಹಾರ್ದಿಕ ಅಭಿನಂದನೆಗಳು ಶ್ರೀಮನ್

    ReplyDelete
  2. ಆಹಾ ಖುಷಿಯ ವಿಚಾರ ಇದು, ಶುಭವಾಗಲಿ. ಹೊಸ ಕಾರಿನ ಹೊಸ ಪಯಣ ಜೀವನದ ಉತ್ಸಾಹ ಹೆಚ್ಚಿಸಲಿ. ನಮಗೆಲ್ಲಾ ಈ ಬಾಬ್ತು ಒಳ್ಳೆಯ ಊಟ ಸಿಗಲಿ.

    ReplyDelete
  3. ಶುಭವಾಗಲಿ, ಶ್ರೀಕಾಂತ.

    ReplyDelete
  4. Congratulations sri Anna 💐👍
    Take care 👍

    ReplyDelete
  5. Sri... shubhavaagali. Jothegoodiruva Hosa sadasya nimage sadaa kaala saath kodali. Jeevanada payana sukhamayavaagirali.

    ReplyDelete