Thursday, January 15, 2015

ಅಜ್ಜಿ ಬನ್ನಿ ಬನ್ನಿ ನಾವೆಲ್ಲಾ ನಿಮಗೋಸ್ಕರ ಕಾಯುತ್ತಿದ್ದೇವೆ.. !!!

"ಮಗು ಶ್ರೀಕಾಂತ ನಿನ್ನ ಮೇಲೆ ನನಗೆ ಕೋಪವಿದೆ.. "

"ಕತ್ತೆತ್ತಿ ನೋಡಿದೆ ಪಟದಲ್ಲಿದ್ದ ಅಜ್ಜಿ ಹುಬ್ಬನ್ನು ಮೇಲೆ ಏರಿಸಿದ್ದು ಚೆನ್ನಾಗಿ ಕಾಣುತ್ತಿತ್ತು"

"ಯಾಕೆ ಅಜ್ಜಿ ಏನಾಯಿತು.. ಏಕೆ ನಿಮ್ಮ ಈ ಮೊಮ್ಮಗನ ಮೇಲೆ ಕೋಪ.. ಎಡಪಂಥೀಯ ನಾಗಿದ್ದ ನನ್ನನ್ನು ಬಲಪಂಥೀಯನ ಮಾಡಿದ್ದೆ ನೀವು ಅಲ್ಲವೇ (ಬಾಲ್ಯದಲ್ಲಿ ನಾ ಎಡಚನಾಗಿದ್ದೆ .. ಅಜ್ಜಿ ಹೊಡೆದು ಹೊಡೆದು ಬಲಗೈಯಗೆ ಬದಲಾಯಿಸಿದರು)

"ಮತ್ತೆ ನೀ ನಿನ್ನ ಅಜ್ಜಯ್ಯನ ಮೂರು ಹಿಂದಿನ ತಲೆಮಾರಿನ ಬಗ್ಗೆ ಸಂಭಾಷಣೆ ಬರೆದಿದ್ದೆ.. ನನ್ನ ಬಗ್ಗೆ ಬರೆಯುತ್ತೀಯ ಎಂದು ಕಾಯುತ್ತಿದ್ದೆ.. ನೀ ಬರೆದೆ ಇಲ್ಲ.. ಅದಕ್ಕೆ ನಿನ್ನ ಮೇಲೆ ಕೋಪ ನನಗೆ"

"ಅಜ್ಜಿ ಅದಕ್ಕೆ ಯಾಕೆ ಕೋಪ.. ನನಗೂ ತುಂಬಾ ಆಸೆ ಇತ್ತು ಬರೆಯಬೇಕು ಎಂದು.. ಆದರೆ ನೀವು  ಇಷ್ಟಪಡುವ ನಿಮ್ಮ ಮೊದಲ ಮೊಮ್ಮಗಳ ಮನೆಗೆ ನೀ ಬಂದ ಮೇಲೆ ಬರೆಯೋಣ ಅಂತ ಕಾಯುತ್ತಿದ್ದೆ.. ಈಗ ನೋಡಿ ನಾಳೆ ನೀವು ಬರುತ್ತಿದ್ದೀರ.. ಅದಕ್ಕೆ ನಾ ಬರೆಯುತ್ತಿದ್ದೇನೆ.. "

"ಓಹ್ ಹೌದಲ್ವಾ..  ಕೃಷ್ಣವೇಣಿಯ ಮನೆಯಲ್ಲಿ ಬರುವುದು ನಾನು.. ಕಂದಾ.. ನಾ ನಾಳೆಗೆ ಕಾಯುತ್ತಿದ್ದೇನೆ.. ಹಾಗೆಯೇ ನಿನ್ನ ಬರಹ ಓದಲು ಕೂಡ"

ಹೀಗೆ ಸಾಗಿತ್ತು ಒಂದು ಸಂಭಾಷಣ ಲಹರಿ.. ತನ್ನ ಮಕ್ಕಳನ್ನು ಜೀವಕ್ಕಿಂತಲೂ ಹೆಚ್ಚು ಪ್ರೀತಿಸುವ ಎಲ್ಲಾ ತಾಯಿಯಂತೆಯೇ ನಮ್ಮ ಅಜ್ಜಿ ಕೂಡ.. ಆದರೆ ಅವರ ಶಕ್ತಿ ಇದ್ದದ್ದು ಎಲ್ಲಾ ಮಕ್ಕಳಲ್ಲಿರುವ ಉಲ್ಲಾಸ ಉತ್ಸಾಹಗಳನ್ನು ಗುರುತಿಸಿ ಅದಕ್ಕೆ ತಕ್ಕಂತೆ ಬೆಳವಣಿಗೆಗೆ ಅವರ ಶಕ್ತಿಗೆ ಅನುಸಾರವಾಗಿ ಮಮತೆಯ ಮಡಿಲು ತುಂಬಿಕೊಂಡು ನಿಂತದ್ದು ಅಜ್ಜಿಯ ಹಿರಿಮೆ.

ಇಂಥಹ ಮಹಾನ್ ಚೇತನದ ಬಗ್ಗೆ ಬರೆಯುವ ಒಂದು ಹಂಬಲ ಇತ್ತು... ಇದೀಗ ಹಾ ಹಾ ಹಾ ಪೂರೈಸಿಕೊಳ್ಳುವೆ.... !

***************
ಅಜ್ಜಿಗೆನೋ ಮಾತು ಕೊಟ್ಟು ಬಿಟ್ಟೆ.. ತಲೆ ನೋಡಿದರೆ ಪೂರ ಖಾಲಿ ಏನೂ ಹೊಳಿತಾ ಇಲ್ಲ.. ಅಜ್ಜಿಯನ್ನು ನೆನೆಸಿಕೊಂಡು ಹಾಗೆ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕೂತೆ.. ತೆರೆಯಿತು ಒಂದು ಭವ್ಯ ಲೋಕ... 

ಅಜ್ಜಿ, ಮುತ್ತಜ್ಜಿ, ಅವರ ತಾಯಿ (ಮಾತಾ, ಪಿತಾಮಹಿ, ಪ್ರಪಿತಮಹಿ) ಇವರ ಒಂದು ಸಂಭಾಷಣೆ ನಿಮಗಾಗಿ. 

ಪ್ರಪಿತಮಹಿ: ನಮ್ಮ ವಂಶದಲ್ಲಿ ಅದ್ಭುತ ಕಲೆಯನ್ನು ಹೊಂದಿದ್ದ ಗೋಪಾಲನ ಬಗ್ಗೆ ಸ್ವಲ್ಪ ಹೇಳಿ 
ಪಿತಾಮಹಿ : ನರಸು (ನಮ್ಮ ಅಜ್ಜಿ) ಅವರ ಮಾತಿನಲ್ಲೇ ಕೇಳಬೇಕು.. ತಾಯಿ ಹೃದಯ ಆಲ್ವಾ.. ಅದ್ಭುತ ಚೇತನದ ತನ್ನ ಕುದಿಯ ಬಗ್ಗೆ ಅವಳೇ ಹೇಳಲಿ. 
ಅಜ್ಜಿ : ಕಣ್ಣಲಿ ಹಾಗೆ ಒಂದು ಮಿಂಚು ಮೂಡಿತು.. ಹೃದಯ ತುಂಬಿಬಂದಿತು.. ಅಲ್ಲೇ ಚಿತ್ರ ಬರೆಯುತ್ತಿದ್ದ ತನ್ನ ಮಗನನ್ನು "ಗೋಪಾಲ ಬಾರೋ ಇಲ್ಲಿ" ಎಂದರೂ 
ನನ್ನ ಚಿಕ್ಕಪ್ಪ ಅರ್ಥಾತ್ ಗೋಪಾಲ ಚಿಕ್ಕಪ್ಪ (ನಾವುಗಳು ಯಾರೂ ನೋಡಲು ಆಗಲೇ ಇಲ್ಲ.. ಕಡಿಮೆ ಆಯಸ್ಸು ಹೊಂದಿದ್ದ ಚಿಕ್ಕಪ್ಪ ಬಲು ಬೇಗನೆ ನಮ್ಮನ್ನು ಬಿಟ್ಟು ಹೊರತು ಬಿಟ್ಟಿದ್ದರು)

ಅಜ್ಜಿ ನೋಡು ನಿಮಗೆ ಗೊತ್ತಲ್ಲ ಇವನೇ ನನ್ನ ಮಗ ಗೋಪಾಲ.. ಅದ್ಭುತ ಚಿತ್ರಕಾರ.. ಮಕ್ಕಳನ್ನು ಕಂಡರೆ ಅಪರಿಮಿತ ಪ್ರೀತಿ., ಒಮ್ಮೆ ಇವನು ಮೈದಾನದಲ್ಲಿ ಆಡುತ್ತಿದ್ದ ಶಾಲಾ ಮಕ್ಕಳನ್ನು ನೋಡಿದ.. ಎರಡು ಜಡೆಯನ್ನು ಹಾಕಿಕೊಂಡ ಹೆಣ್ಣು ಮಕ್ಕಳು ಕೈ ಕೈ ಹಿಡಿದುಕೊಂಡು ಗಿರಗಟ್ಲೆ ತಿರುಗುತ್ತಿದ್ದುದನ್ನು ನೋಡಿ ಹಾಗೆಯೇ ಬರೆದಿದ್ದ. ಎಷ್ಟು ನಿಜವಾಗಿತ್ತು ಎಂದರೆ ಹೆಣ್ಣು ಮಕ್ಕಳ ಹಾರುತ್ತಿದ್ದ ಜಡೆ, ಸುತ್ತಿಕೊಂಡಿದ್ದ ಲಂಗ ಎಲ್ಲವೂ ಹಾಗೆಯೇ ಮೂಡಿ ಬಂದಿತ್ತು. 

ಇವನಿಗೆ ಚಿತ್ರಕಲೆಯ ಅದ್ಭುತ ಹಿಡಿತ ಇತ್ತು.. ಒಮ್ಮೆ ನೋಡಿದರೆ ಹಾಗೆಯೇ ಬರೆದು ಬಿಡುತ್ತಿದ್ದ. 

ಇವನ ಮುಂದೆ ಯಾರೂ ಕೂಡ ಸಾವಿನ ಬಗ್ಗೆ ಮಾತಾಡಲೇ ಬಾರದು.. ಇವನು ಜೀವನವನ್ನು ಅಷ್ಟೊಂದು ಪ್ರೀತಿಸುತಿದ್ದ. ಮಕ್ಕಳನ್ನು ಕಂಡರೆ ಅಪಾರ ಪ್ರೀತಿ. ನನಗೆ ಇಷ್ಟೊಂದು ಮೊಮ್ಮಕ್ಕಳು ಇರುವುದನ್ನು ನೋಡಿದ್ದರೆ ಎಷ್ಟು ಸಂತಸ ಪಡುತ್ತಿದ್ದಗೊತ್ತಾ.  ಆದರೂ ಒಂದು ಸಮಾಧಾನ.. ನನ್ನ ಮೊಮ್ಮಕ್ಕಳು ಇವನನ್ನು ನೆನೆಸಿಕೊಳ್ಳುತ್ತಲೇ ಇರುತ್ತಾರೆ. ಇವನ ಬಗ್ಗೆ ತಿಳಿದಿರುವುದು ನನ್ನ ಇತರ ಮಕ್ಕಳು ಇವನ ಬಗ್ಗೆ ಹೇಳಿರುವುದರಿಂದ ಇವನ ಬಗ್ಗೆ ಅಪಾರ ಗೌರವ. 

ಇವನಿಗೆ Ten Commendments ಚಿತ್ರ ಬಗ್ಗೆ ವಿಪರೀತ ಹುಚ್ಚು, ಇವನು ಇಲ್ಲಿಗೆ ಬರುವ ಕೆಲ ದಿನಗಳ ಮೊದಲು ಆ ಸಿನೆಮಾವನ್ನು ನೋಡಿ ಬಂದಿದ್ದ. ಚಲನ ಚಿತ್ರಗಳನ್ನು, ಕಲೆಯನ್ನು ಬಹುಮಿತವಾಗಿ ಪ್ರೀತಿಸುತ್ತಿದ್ದ ಇವನನ್ನು  ಕಂಡರೆ ಎಲ್ಲರಿಗೂ ಬಲು ಪ್ರೀತಿ. 

ಹಳ್ಳಿಯನ್ನು, ಹಳ್ಳಿಯ ಆಹಾರ, ಹಳ್ಳಿಯ ಪರಿಸರ ಇವುಗಳನ್ನು ಸಿಕ್ಕಾಪಟ್ಟೆ ಇಷ್ಟಪಡುತ್ತಿದ್ದ. ಅವನಿಗೆ ಇಷ್ಟವಾದ ಹಳ್ಳಿ ಕಿತ್ತಾನೆಯಾಗಿತ್ತು. ನಮ್ಮ ಮಂಜಣ್ಣನ ಮಡದಿ ವಿಶಾಲು ಜೊತೆಯಲ್ಲಿ ಹೋಗುವ ಅವಕಾಶ ಸಿಕ್ಕರೆ ತಪ್ಪಿಸಿಕೊಳ್ಳುತ್ತಲೇ ಇರಲಿಲ್ಲ ಅಷ್ಟು ಪ್ರೀತಿಸುತಿದ್ದ ಹಳ್ಳಿಯನ್ನು. 

ತನ್ನ ಅಣ್ಣ, ಅಕ್ಕಂದಿರನ್ನು, ತಮ್ಮಂದಿರನ್ನು ಕಂಡರೆ ಅಭಿಮಾನ. ಯಾವುದೇ ಕಾರಣಕ್ಕೂ ಅವರಿಗೆ ನೋವು ಕೊಡುತ್ತಿರಲಿಲ್ಲ. ತಾನು ಜೀವನವಿಡಿ ನೋವಿನಲ್ಲಿದ್ದರೂ ಇನ್ನೋಬರನ್ನು ನೋವಿಗೆ ತಳ್ಳುತ್ತಿರಲಿಲ್ಲ.  ಮಂಜಣ್ಣನನ್ನು ತುಂಬಾ ಪ್ರೀತಿಸುತ್ತಿದ್ದ ಇವನು ಇಲ್ಲಿಗೆ ಬಂದ ಮೇಲೂ ಕೂಡ ಅವಾಗವಾಗ ಮಂಜಣ್ಣನನ್ನು ನೋಡಿ ಬರುತ್ತಿದ್ದ :-)

ಗೋಪಾಲ ಚಿಕ್ಕಪ್ಪ ಹಾಗೆಯೇ ಅನಂದಭಾಷ್ಪದಲ್ಲಿ ಮುಳುಗಿದ್ದರು.. "ಅಮ್ಮ ನನ್ನ ಬಗ್ಗೆ ಅದೆಷ್ಟು ಹೇಳುತ್ತೀಯ.. ನನ್ನ ವಂಶವಾಹಿನಿಯ ಬಗ್ಗೆ ನನಗೆ ಅಭಿಮಾನವಿದ್ದೆ ಇದೆ. ಅಣ್ಣ, ನೀನು, ಅಜ್ಜ ಅಜ್ಜಿ, ಅಪ್ಪು, ಮಂಜಣ್ಣ, ಗೌರಕ್ಕ ಎಲ್ಲರೂ ನನಗೆ ಪ್ರೀತಿ ಪಾತ್ರರು.

ಪಿತಾಮಹಿ. ಪ್ರಪಿತಮಹಿ ನಿಶ್ಯಭ್ಧರಾಗಿದ್ದರು... ಅವರ ಎಲೆ ಅಡಿಕೆ ಸಂಚಿ ಕೂಡ ಯಾವುದೇ ಸದ್ದು ಮಾಡುತ್ತಿರಲಿಲ್ಲ. ಹಾಗೆ ಒಂದು ರೀತಿಯಲ್ಲಿ ಕಾಲ ಗರ್ಭದಲ್ಲಿ ಹೊಕ್ಕು ಬಂದ ಅನುಭವ. 

ಗೋಪಾಲ ಚಿಕ್ಕಪ್ಪ ಹಾಗೆ ಎಲ್ಲರನ್ನು ಒಮ್ಮೆ ಎಚ್ಚರಿಸಿ ನೋಡಿ ಅನೇಕ ದಿನಗಳಿಂದ ಗೂಗಲ್ ಗ್ರೂಪ್ ನ ಕೋರವಂಗಲ ತಂಡ ನಿಷ್ಕ್ರಿಯವಾಗಿದೆ.. ಅದಕ್ಕೆ ಹುಟ್ಟು ಹಬ್ಬಕ್ಕೆ ಶುಭ ಹಾರಿಸಲು ಅಮ್ಮ ನೀನು ಹೇಗೂ ನಾಳೆ ನನ್ನ ಪ್ರೀತಿ ಪಾತ್ರಳಾದ ಮಗಳು ಕೃಷ್ಣವೇಣಿಯ ಮನೆಗೆ ಹೋಗುತ್ತಿದ್ದೀಯ ನನ್ನ ಶುಭಾಶಯಗಳನ್ನು ಈ ಕೆಳಕಂಡ ಮಕ್ಕಳಿಗೆ ತಿಳಿಸಿಬಿಡು. (ಆಶಾ ಮತ್ತು ಜ್ನಾನೇಶ ಅವರ ವಿವಾಹದಿನಕ್ಕೆ ಶುಭ ಕೋರಿದ್ದೆ ಕಡೆಯ ಪತ್ರವಾಗಿತ್ತು)

ವಿಜಯ  :ಕೋರವಂಗಲದ ಮೊದಲ ಮೊಮ್ಮಗ..ಯಾವುದೇ ಕೆಲಸವಿರಲಿ ಮುನ್ನುಗ್ಗುವ ಕಲೆ ಸಿದ್ಧಿಸಿರುವ ಇವನಿಗೆ, ಆಗಲ್ಲ ಎನ್ನುವ ಪದದ ಅರ್ಥವೇ ತಿಳಿದಿಲ್ಲ.. ಇವನಿಗೆ ಹುಟ್ಟು ಹಬ್ಬದ ಶುಭಾಶಯಗಳು (ತಡವಾಗಿ ತಲುಪಿಸುತ್ತಿರುವೆ)
ಕೃಷ್ಣವೇಣಿ : ಮೊದಲ ಮೊಮ್ಮಗಳು ಇವು.. ಛಲ, ಸಾಧನೆ.. ಆಹಾ ಇವಳ ಬಗ್ಗೆ ಹೇಳುವುದೇ ಒಂದು ಕುಶಿ.. ಜೀವನದ ಸೋಲಿನಿಂದ ಪಾಠವನ್ನು ಕಲಿಯಬೇಕು ಜೊತೆಯಲ್ಲಿ ಗೆಲುವಿನ ಕಡೆ ಹೆಜ್ಜೆ ಹೇಗೆ ಹಾಕಬೇಕು ಎನ್ನುವುದಕ್ಕೆ ಉತ್ತಮ ಉದಾಹರಣೆ. ಹುಟ್ಟು ಹಬ್ಬದ ಶುಭಾಶಯಗಳು (ತಡವಾದ ಶುಭಾಶಯಗಳು)
ರಮ್ಯ : ತನ್ನ ಪಾಡಿಗೆ ತಾನು ಇದ್ದು, ನಗು ಮೊಗವನ್ನು ಧರಿಸಿರುವ, ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಡುತ್ತಿರುವ ರಮ್ಯ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು (ತಡವಾಗಿ ತಲುಪಿರುವ ಶುಭಾಶಯಗಳು)
ಅಖಿಲ : ಓದಿನಲ್ಲಿ, ಸಾಧನೆಯಲ್ಲಿ ಯಶಸ್ಸಿನ ಹೆಜ್ಜೆ ಇಡುತ್ತಾ ತನ್ನ ಅಪ್ಪ ಅಮ್ಮನ ಮನವನ್ನು ಬೆಳಗುತ್ತಿರುವ ಈ ಕಂದನಿಗೆ ಹುಟ್ಟು ಹಬ್ಬದ ಶುಭಾಶಯಗಳು (ತಡವಾದ ಶುಭಾಶಯ ಪತ್ರ)
ರೂಪ ಅಕಾ ನಾಗಲಕ್ಷ್ಮಿ : ಈಕೆ ವೀರ ಮಾತೆ.. ಕುಮಾರ ಭರತನನ್ನು ಭಾರತ ಭೂಮಿಗೆ ತಂದಿರುವ ಇವರಿಗೆ ಭರತನ ಭವಿಷ್ಯಕ್ಕೆ ವರ್ಷ ತಮ್ಮನ್ನೇ ಅರ್ಪಿಸಿಕೊಂಡಿದ್ದಾರೆ. ಆ ಚೈತನ್ಯದ ಚಿಲುಮೆಯನ್ನು ಅತ್ಯುತ್ತಮವಾಗಿ ರೂಪಿಸುತ್ತಿರುವ ರೂಪ ಅಕಾ ನಾಗಲಕ್ಷ್ಮಿಯವರಿಗೆ ತಡವಾದ ಶುಭಾಷಯ ಹಾರೈಕೆಗಳು. 


ಅಮ್ಮ ನೀ ಹೋಗಿ ಬಾ.. ಹಾಗೆ ನನ್ನ ನೆನಪುಗಳನ್ನು ಕೋರವಂಗಲದ ಎಲ್ಲಾರಿಗೂ ತಲುಪಿಸಿಬಾ.. 

*************

ಅಜ್ಜಿಗೆ ಬಹಳ ಕುಶಿಯಾಯಿತು.. ಮೇಲಿನ ಪತ್ರವನ್ನು ನೋಡಿ.. ತನ್ನ ಚೀಲವನ್ನು ತೆಗೆದುಕೊಂಡು ಭುವಿಗೆ ಬರಲು ಹೊರಟೆ ಬಿಟ್ಟರು.. 

ಅಜ್ಜಿ ಬನ್ನಿ ಬನ್ನಿ ನಾವೆಲ್ಲಾ ನಿಮಗೋಸ್ಕರ ಕಾಯುತ್ತಿದ್ದೇವೆ.. !!!

4 comments:

  1. ವಾರೆ ವಾಹ್ ಹೀಗೆಲ್ಲಾ ಬರೆಯೋಕೆ ನಿಮಗೆ ಮಾತ್ರ ಸಾಧ್ಯ . ಅದ್ಭುತವಾಗಿದೆ ಅಜ್ಜಿಯ ಬಗ್ಗೆ ಚಿತ್ರಣ ಹಾಗು ನಿಮ್ಮ ಕಲ್ಪನೆ . ಪದಗಳನ್ನು ಅದೆಲ್ಲಿಂದ ಹೆಕ್ಕಿ ತರುತ್ತೀರ ಶ್ರೀ . ಅಜ್ಜಿಯ ಬಗ್ಗೆ ನಿಮ್ಮ ಬರಹ ಓದಿದರೆ ಆ ಅಜ್ಜಿ ಖಂಡಿತಾ ನಿಮ್ಮನ್ನು ಮನತುಂಬಿ ಆಶೀರ್ವದಿಸುತ್ತಾರೆ . ಒಳ್ಳೆಯ ಬರಹಕ್ಕೆ ನನ್ನ ಪ್ರೀತಿಯ ನಮನಗಳು

    ReplyDelete
    Replies
    1. ಅಜ್ಜಿ ನನ್ನ ಬಾಳಿನಲ್ಲಿ ಒಂದು ಹೆಜ್ಜೆ ಗುರುತನ್ನೇ ಬಿಟ್ಟು ಹೋಗಿದ್ದಾರೆ. ಆ ಹೆಜ್ಜೆ ಗುರುತುಗಳ ಒಂದು ಪುಟ್ಟ ಚಿತ್ರಣ ಇಲ್ಲಿದೆ
      ಧನ್ಯವಾದಗಳು ಬಾಲೂ ಸರ್

      Delete
  2. ಕೋರವಂಗಲ ಗ್ರೂಪ್ ಮತ್ತೆ ಸಕ್ರಿಯವಾಗಲಿ ಎಂದು ಹಾರೈಸುತ್ತೇವೆ.
    ಸಾವಿನ ಬಗ್ಗೆ ಮಾತನಾಡಬಾರದು ಎನ್ನುವ ಆಶಯ ಇಷ್ಟವಾಯಿತು.

    ReplyDelete
    Replies
    1. ಬದರಿ ಸರ್ ಬಹು ಕಾಲದ ನಂತರ ನನ್ನ ಲೋಕದಲ್ಲಿ ನಿಮ್ಮ ಹೆಜ್ಜೆ ಗುರುತು ಧನ್ಯವಾದಗಳು

      Delete