Wednesday, June 20, 2012

ನಾಗರಾಜ ಚಿಕ್ಕಪ್ಪ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು!!!


ಸುರಾಸುರರು ಅಮೃತಕ್ಕಾಗಿ ಕ್ಷೀರಸಾಗರ ಕಡೆಯಲು ಅನುವಾದಾಗ ಮಂಧರ ಪರ್ವತ,  ಹಾಗು ವಾಸುಕಿಗೆ ಅಹಂ ಶುರುವಾಗುತ್ತೆ...!!!


"ನಾವಿಬ್ಬರು ಇಲ್ಲದಿದ್ದರೆ ಮಂಥನ ಆಗೋಲ್ಲ...ನಾವೇ ಪರಮಶ್ರೇಷ್ಟರು"..ಈ ಹುಮ್ಮಿನಲ್ಲಿ ಮಂಥನ ಕಾರ್ಯ ಶುರುವಾಗುತ್ತದೆ..


ಪರ್ವತ ಹಾಗು ವಾಸುಕಿಯಾ  ಹುಮ್ಮಿನಿಂದಾಗಿ ಮಂಥನ ಕಾರ್ಯ ಅಂದುಕೊಂಡಂತೆ ಕ್ಷಿಪ್ರಗತಿಯಲ್ಲಿ ಸಾಗುತ್ತಿರಲಿಲ್ಲ..


ದೇವತೆಗಳಿಗೆಲ್ಲ ಚಿಂತೆಶುರುವಾಗುತ್ತದೆ..ವಿಷ್ಣುವಿನ ಮೊರೆ ಹೋಗುತ್ತಾರೆ...


"ಮಹಾ ವಿಷ್ಣು..ನಿನಗೆ ತಿಳಿಯದ್ದು ಏನಿದೆ...ಕಾರ್ಯ ಆಗುತ್ತಿಲ್ಲ..ಪರ್ವತ, ಹಾಗು ವಾಸುಕಿಯ ಗರ್ವ ಭಂಗವಾಗಬೇಕು ಏನು ಮಾಡೋದು"


"ದೇವತೆಗಳೇ ಯೋಚಿಸಬೇಡಿ..ಕಲಿಯುಗದಲ್ಲಿ, ಹಾಸನದ ಕೋರವಂಗಲದಲ್ಲಿ ರಂಗಸ್ವಾಮಿ ಹಾಗು ಸುಬ್ಬನರಸಮ್ಮನವರಿಗೆ  ಜನಿಸುವ ಪುತ್ರರತ್ನನ ಬಗ್ಗೆ ಹೇಳುತ್ತೇನೆ ಆಗ ಇವರ ಹಮ್ಮು ಬಿಮ್ಮು ಕಡಲಲ್ಲಿ ಕರಗಿಹೋಗುತ್ತದೆ..."


"ಅದು ಹೇಗೆ?"


"ಆ ಪುತ್ರ ರತ್ನ..ಯಾವುದೇ ವಿಷಯವಾಗಲಿ, ಚರ್ಚೆಯಾಗಲಿ, ಅದರ ಆಳಕ್ಕೆ ಹೋಗಿ ವಿಷಯದ ಭಾವಾರ್ಥ, ಗೂಡಾರ್ಥ, ತಿರುಳನ್ನು ಹೊರಗೆ ತೆಗೆಯುವ ಪರಿ..ಅದನ್ನು ಕೇಳಿಯೇ ತಿಳಿಯಬೇಕು....ಅಂತಹ ಪ್ರತಿಭಾಶಾಲಿ ಆ ಪುತ್ರರತ್ನ..."


ಮಹಾವಿಷ್ಣು ಪರ್ವತ, ಹಾಗು ವಾಸುಕಿಗೆ ಈ ಪುತ್ರರತ್ನ ಬಗ್ಗೆ ಹೇಳುತ್ತಾ ಹೋದಂತೆ..ಅವರಿಬ್ಬರು 


"ಮಹಾವಿಷ್ಣು ನಮ್ಮದು ಮಹಾಪರಾಧವಾಯಿತು..ನಾವೇ ಮಥಿಸುವುದರಲ್ಲಿ ಶ್ರೇಷ್ಟರು ಎಂದುಕೊಂಡಿದ್ದೆವು..ಆದ್ರೆ ಈ ಪುತ್ರರತ್ನನಿಂದ ಕಲಿಯಬೇಕಾದು ಬಹಳ ಇದೆ...ಕ್ಷಮೆ ಇರಲಿ..ನೀನು ವಹಿಸಿದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುತ್ತೇವೆ.."


ಇಂತಹ ಮಹಾನುಭಾವರು ನಮ್ಮ ಕುಟುಂಬದಲ್ಲಿ ಇರುವುದು ನಮ್ಮ ಪುಣ್ಯವೇ ಸರಿ..


ನಾಗರಾಜ ಚಿಕ್ಕಪ್ಪ ನಿಮ್ಮ ಮಾತುಗಳು, ನೀವು ವಿಶ್ಲೇಷಿಸುವ ಪರಿ, ನಗುನಗುತ ಜೀವನ ಮಾಡುವ ವೈಕರಿ...ನಮಗೆಲ್ಲ ದಾರಿ ದೀಪ..ನಿಮ್ಮ ಹುಟ್ಟು ಹಬ್ಬಕ್ಕೆ ಶುಭಾಶಯಕೋರುವ ಯೋಗ ನಮಗೆ ಬಂದಿರುವುದು ನಮ್ಮ ಪುಣ್ಯವೇ ಸರಿ..


ನಾಗರಾಜ ಚಿಕ್ಕಪ್ಪ ನಿಮಗೆ ಹುಟ್ಟುಹಬ್ಬದ ಶುಭಾಶಯಗಳು!!! 

Thursday, June 14, 2012

ಮಹಾಭಾರತ-ಕುರುಕ್ಷೇತ್ರ-ಭೀಷ್ಮ-ಅರ್ಜುನ-ಕೃಷ್ಣ

ಮಹಾಭಾರತ ನನಗೆ ಯುಕ್ತಿ, ಶಕ್ತಿ ಬೇಕಾದಾಗೆಲ್ಲ ಮೊಗೆ ಮೊಗೆದು ಕೊಡುವ ಅದ್ಭುತ ಕಾವ್ಯ..

ಬಾಲ್ಯದಲ್ಲಿ ಓದಿದ ಮಹಾಭಾರತದ ಚಿಕ್ಕ, ಪುಟ್ಟ ಕತೆಗಳು, ವೀರೋಚಿತ ಪಾತ್ರಗಳು, ಸಂಭಾಷಣೆ, ವ್ಯಕ್ತಿತ್ವ,  ಇವೆಲ್ಲವೂ ಮನದಾಳದಲ್ಲಿ ಸುಂದರ ಛಾಪನ್ನು ನನಗರಿವಿಲ್ಲದೆ ಒತ್ತಿ ಬಿಟ್ಟಿದ್ದವು.

ಬಿ.ಆರ್. ಚೋಪ್ರರವರ ಮಹಾಭಾರತ ದೂರದರ್ಶನದಲ್ಲಿ ಶುರುವಾದಾಗ ಮನಸಿಗೆ ಆದ ಸಂತೋಷ ಅಷ್ಟಿಷ್ಟಲ್ಲ. ಅದ್ಭುತ ಸಂಭಾಷಣೆ, ಅಭಿನಯ, ಕೃಷ್ಣನ ಮುಗ್ಧ ನಗು, ಭೀಷ್ಮನ ಪಾತ್ರದಾರಿ, ಅರ್ಜುನ ಬಾಣ ಬಿಡುವ ಶೈಲಿ.. ಒಂದೇ ಎರಡೇ ಎಲ್ಲವು ಸೊಗಸು..

ಈ ಲೇಖನ ಆ ಅದ್ಭುತ ಕಾವ್ಯಕ್ಕೆ ಒಂದು ಸಣ್ಣ ನುಡಿ ನಮನ.  ಅ ಅಮೋಘ ಕಾವ್ಯದ ಬಗ್ಗೆ ಏನೇ ಬರೆದರೂ ಅದು ಸಮುದ್ರದಿಂದ ಒಂದು ನೀರಿನ ಬಿಂದುವನ್ನು ಹೆಕ್ಕಿ ತೆಗೆದಂತೆ..

ಕುರುಕ್ಷೇತ್ರ ರಣಾಂಗಣದಲ್ಲಿ ಭೀಷ್ಮ ಅಜೇಯನಾಗಿರುತ್ತಾನೆ...ಅರ್ಜುನನ ಕದನ ಸಾಮರ್ಥ್ಯದ ಬಗ್ಗೆ ಕೃಷ್ಣನಿಗೆ ಅಸಹನೆ ಮೂಡುತ್ತದೆ..ತನ್ನ ಪ್ರತಿಜ್ಞೆಯನ್ನು ಮರೆತು ಕೃಷ್ಣ ತನ್ನ ಸುದರ್ಶನ ಚಕ್ರವನ್ನು ಹಿಡಿದು ರಥದಿಂದ ಧುಮುಕಿ ಭೀಷ್ಮನೆಡೆ ಸಾಗುತ್ತಾನೆ..ಆಗ ಅರ್ಜುನ ಕೃಷ್ಣ ಕಾಲು ಹಿಡಿದು ಕ್ಷಮೆ ಬೇಡುತ್ತಾನೆ, ಭೀಷ್ಮ ಆನಂದದಿಂದ ಫುಳಕಿತನಾಗುತ್ತಾನೆ.

ಇದನ್ನೇ ಈ ಕೆಳಗಿನ ಚಿತ್ರ ಪರಿಣಾಮಕಾರಿಯಾಗಿ ವಿವರಿಸುತ್ತದೆ ..

ಭೀಷ್ಮನಿಗೆ ಅರ್ಜುನ ತುಂಬಾ ಪ್ರೀತಿ ಪಾತ್ರನು.. ಅರ್ಜುನನಿಗೆ ಭೀಷ್ಮನ ಬಗ್ಗೆ ಅತೀವ ಗೌರವ..ಇಬ್ಬರು ಒಬ್ಬರಿಗೊಬ್ಬರು ಯುದ್ದದಲ್ಲಿ ಎದುರಾದಾಗ ಈ ಮಮಕಾರಗಳು ಡಿಕ್ಕಿ ಹೊಡೆದು ಇಬ್ಬರನ್ನು ಘಾಸಿಗೊಳಿಸುತ್ತದೆ ..ಆಗ ಕೃಷ್ಣ ಹೀಗೆ ಮುಂದುವರಿದರೆ ಯುದ್ಧ ಮುಗಿಯಲಾರದು ಎನಿಸಿ ತಾನೇ ಮಾಡಿದ ಪ್ರತಿಜ್ಞೆಯನ್ನು  (ಯುದ್ಧದಲ್ಲಿ ತಾನು ಆಯುಧ ಹಿಡಿಯುವುದಿಲ್ಲ)  ಮುರಿದು ಭೀಷ್ಮನೆಡೆಗೆ ಸುದರ್ಶನಧಾರಿಯಾಗಿ ಮುನ್ನುಗ್ಗುತಾನೆ..ಆಗ ಅರ್ಜುನ ಕೃಷ್ಣನನ್ನು ಸಮಾಧಾನಗೊಳಿಸಿ ಶಾಂತಗೊಳಿಸುತ್ತಾನೆ ...ಭೀಷ್ಮ ತನ್ನ ಅಭಿಲಾಷೆ ಈಡೇರಿದಕ್ಕಾಗಿ ಸಂತುಷ್ಟನಾಗಿ ಕೃಷ್ಣನನ್ನು ಸ್ತುತಿಸುತ್ತಾನೆ..(ಕೃಷ್ಣನನ್ನು ಆಯುಧಧಾರಿಯಾಗಿ ನೋಡಬೇಕೆನ್ನುವ  ಆಶಯ) 


ಈ ಪ್ರಸಂಗ ನನ್ನ ಮನಸಿಗೆ ಅನ್ನಿಸಿದ್ದು ಹೀಗೆ...

ನಮ್ಮ ಲಕ್ಷ್ಯ, ಗುರಿ, ಸಾಧನೆ  ಭೀಷ್ಮನನ್ನು, ನಮ್ಮನ್ನು ಅರ್ಜುನ , ಹಾಗು ನಮ್ಮ ಮನಸಾಕ್ಷಿ ಕೃಷ್ಣನನ್ನು ಪ್ರತಿನಿಧಿಸುತ್ತದೆ. ನಮ್ಮ ಶ್ರಮ, ಪರಿಶ್ರಮ ನಮ್ಮ ಗುರಿ ಕಡೆಗೆ ಇರಬೇಕು..ಅದು ವಿಚಲಿತವಾದಾಗ ನಮ್ಮ ಗುರಿ ನಮ್ಮನ್ನೇ ಸುಡಲು, ಪೀಡಿಸಲು ಶುರು ಮಾಡುತ್ತೆ..ಆಗ ನಮ್ಮ  ಮನಸಾಕ್ಷಿ ನಮ್ಮನ್ನು ಬಿಟ್ಟು ತಾನೇ ಗುರಿ ಮುಟ್ಟಲು ಸಿದ್ದವಾಗುತ್ತದೆ..ಮನಸಾಕ್ಷಿ ಇಲ್ಲದೆಯೇ ನಾವು ಗುರಿ ಸಾಧಿಸಲು ಸಾಧ್ಯವಿಲ್ಲ, ಅದರ ಸಹಾಯ, ಸಲಹೆ, ಮಾರ್ಗದರ್ಶನವಿಲ್ಲದೆ ನಾವು ಏನು ಮಾಡಲು ಆಗದು, ಅದೇ ನಮ್ಮನ್ನು ಬಿಟ್ಟು ಹೋಗಲು ಸಿದ್ಧವಾದರೆ ನಮ್ಮ ಅಧೋಗತಿಯೇ ಸರಿ..ಆಗ ಗುರಿ, ಸಾಧನೆ ನಮ್ಮನ್ನು ಕಂಡು ಕನಿಕರದ ನಗೆ ನಗುತ್ತದೆ...

ನಮ್ಮ ಮನಸಾಕ್ಷಿಯ ಜೊತೆ ನಾವು ನಮ್ಮ ಗುರಿಯೆಡೆಗೆ ತೆರೆಳಲು ಸಿದ್ದವಾದರೆ ಎಂತಹ ಅಡ್ಡಿ ಆತಂಕಗಳು ದೂರವಾಗಿ ಓಡುತ್ತವೆ..ಶಂಖನಾದ ನಮ್ಮ ಹುಮ್ಮಸ್ಸು, ಕೃಷ್ಣ ನಮ್ಮ ಮಾರ್ಗದರ್ಶಿ, ಇವೆರಡು ಜೊತೆ ಇದ್ದಾಗ ಅಸಾಧಾರಣ ಗುರಿ ಕೂಡ ಸಾಮಾನ್ಯವಾಗುತ್ತದೆ ಅಲ್ಲವೇ...

Wednesday, May 30, 2012

ನನ್ನ ಅಜ್ಜಯ್ಯನ ಒಂದು ಮಧುರ ಸಂಭಾಷಣೆ...



"ಏನೂ ಲಕ್ಷ್ಮಿಕಾಂತ..ನೀನು ಸುಮ್ಮನಿದ್ದೀಯ..ಎಲ್ಲರು ಬರೆಯುತಿದ್ದಾರೆ..ನೀನು ಏನು ಬರೀಲಿಲ್ಲ ಅಂತ ಯೋಚನೆ ಮಾಡ್ತಾ ಇದ್ದೆ..ಆದ್ರೆ ನಿನ್ನ ಉತ್ತರ ನನಗೆ ಗೊತ್ತು...ನಾನೇ ಹೇಳಲೇ ಕಾಂತ..."

ಹೇಳಿ ಅಜ್ಜಯ್ಯ..

"ನನ್ನ ಎರಡು ತಲೆಮಾರನ್ನು ನೀನು ಪರಿಚಯಿಸಿದ್ದು, ಕಳೆದ ಯುಗಾದಿ ಹಬ್ಬಕ್ಕೆ ಅಜ್ಜ, ಅಜ್ಜಿಯರನ್ನು ಕರೆಸಿದ್ದು..ಎಲ್ಲ ನಿನ್ನ ಕಪಿ ತಲೆಯೊಳಗೆ ಹೇಗೆ ಬರುತ್ತೋ ನಾನು ಬೇರೆ ಕಾಣೆ..ನಿಜಕ್ಕೂ ನಾನು ಬಹಳ ಹೆಮ್ಮೆ ಪಟ್ಟು ಕೊಳ್ಳಬೇಕು..ನಿಮ್ಮಂತಹ ಮೊಮ್ಮಕ್ಕಳನ್ನು ಪಡೆಯೋಕೆ..."

"ಹೀಗೆ ಸ್ವರ್ಗದಲ್ಲಿ ಓಡಾಡುತಿದ್ದಾಗ...ಸೂರ್ಯ ದೇವ ಹೇಳಿದ.."ರಂಗಸ್ವಾಮಿ ಅವರೇ..ನನ್ನ ಸೌರ ಮಂಡಲ ಹೆಂಗಿದೆ...ಅಂತ..ನಮ್ಮ ಗ್ರಹಗಳು ಹೇಗೆ ಬೆಳಗುತಿದ್ದೆ ಅಂತ..."

ಅದಕ್ಕೆ ನಾನು ಕೊಟ್ಟ ಉತ್ತರ ಏನು ಗೊತ್ತ ಮಗು.."...ಸೂರ್ಯ ದೇವ..ನನ್ನ ನವ ಗ್ರಹಗಳನ್ನು ನೋಡು..ಅವುಗಳ ಮುಂದೆ ಹಹಹಹ..."

"ಮಗು..ಸೂರ್ಯ ದೇವ ತನ್ನ ಬೆಳಕನ್ನು ಎಲ್ಲರಿಗೂ ಸಮಾನವಾಗಿ ಹಂಚುತ್ತಾನೆ..ನಾನು ಕೂಡ ಹಾಗೆ ನನ್ನ ಆಸ್ತಿ....ನನ್ನ ಪ್ರೀತಿ..ನನ್ನ ಆಶೀರ್ವಾದ ಅದನ್ನು ನನ್ನ ಗ್ರಹಗಳಿಗೆ ಸಮಾನವಾಗಿ ಉಣ ಬಡಿಸಿದ್ದಿನಿ.."

"ಮಗು ಹೊತ್ತಾಯ್ತು..ಇನ್ನು ೩೦ ದಿನಗಳಲ್ಲಿ ಬರುತ್ತೇನೆ..ನನ್ನ ಗ್ರಹಗಳನ್ನು ಒಂದೇ ಕಡೆ ಸೇರಿಸುವ ಜವಾಬ್ಧಾರಿ ನಿನ್ನದು...ತುಂಬಾ ಮುಖ್ಯವಾದ ವಿಷಯ ಹೇಳುವುದಿದೆ..."

"ಬರುತ್ತೇನೆ ಮಗು..."

"ನಿನ್ನೊಲುಮೆ ನಮಗಿರಲಿ ತಂದೆ...ಕೈ ಹಿಡಿದು ನೀ ನೆಡೆಸು ಮುಂದೆ.." ಮೊಬೈಲ್ ಅಲಾರಂ ಹೊಡಿತಾ ಇತ್ತು...ಎಚ್ಚರವಾಗಿ ನೋಡಿದರೆ..ಆಗ್ಲೇ ಬೆಳಗಿನ ಜಾವ ೪.೩೦.....ಆಹಾ ಎಂತಹ ಮಾತುಗಳು ಅಜ್ಜಯ್ಯನದು...ಎದ್ದು ಅವರ ಸುತ..ನಮ್ಮ ಅಪ್ಪನ ಫೋಟೋಗೆ ನಮಸ್ಕರಿಸಿ ಅಜ್ಜಯ್ಯ..ನಮ್ಮ ಅಪ್ಪನನ್ನು ಚೆನ್ನಾಗಿ ನೋಡಿಕೊಳ್ಳಿ....ಕಂಡಿತ ಎಲ್ಲರನ್ನು ಸೇರಿಸುತ್ತೇನೆ..ಮಾತಾಡೋಣ...

Tuesday, May 22, 2012

52nd Marriage Anniversary of My parents - 23.05.1960

Marriage happens in an age..
Dreams are getting feathered..
Feathers are getting coloured...
colours are getting spread across the lives..
The new lives will bloom in all the way..

One such occassion came on 23rd May 1960 near a small village near Hassan, where two great souls of my era came together.


The togetherness brought love, affection, as well as four off-springs..

The four off-springs joined together to bring best moments in their parents life..

One such great occasion was celebrating parents Golden Anniversary a good two years ago.

This is an occasion where a small tribute to our great parents for their hard work to shape us the way we wanted!!!!

My father blessing from the top, but living in our heart, and the surrounding all the way!!!!
My mother leading from the front and guiding our family in every corner...!!

"Anna" - "Amma" we are blessed to have you as the parents!!!

ನಮ್ಮ ತಂದೆ-ತಾಯಿಗೆ ವಿವಾಹ ದಿನದ ಶುಭಾಶಯಗಳು (23.05.1960)

"ಮಂಗಳದ ಈ ಸುದಿನ ಮಧುರವಾಗಲಿ..ನಿಮ್ಮೊಲುಮೆ ಈ ಮನೆಯ ನಂದಾ ದೀಪವಾಗಲಿ.."

ಮಕ್ಕಳ ಮದುವೆಯನ್ನ  ನೋಡುವ ಭಾಗ್ಯ ಮಾತಾ-ಪಿತೃಗಳಿಗೆ ಇರುತ್ತೆ..

ಮಕ್ಕಳಿಗೆ ತಂದೆ-ತಾಯಿಯರ ಮದುವೆ ನೋಡುವ ಭಾಗ್ಯ ಮಾತಾ-ಪಿತೃಗಳ  ೬೦,೭೦, ಎಂಭತ್ತು ವರ್ಷಗಳ ಶಾಂತಿವ್ರತದಲ್ಲಿ ಸಿಗುತ್ತದೆ..ಅಂತಹ ಭಾಗ್ಯವನ್ನ ಕರುಣಿಸಿದ ನಿಮಗೆ ನಾವು ಶಿರ-ಮನ ಬಾಗಿ ವಂದಿಸುವೆವು..

ನಮ್ಮ ಪೂಜ್ಯ ಮಾತಾ ಪಿತೃಗಳು ನಮ್ಮ ಜನನಕ್ಕೆ ಕಾರಣವಾದ ವಿವಾಹ ಮಹೋತ್ಸವದ ದಿನ ಇಂದಿಗೆ ೫೨ ವರುಷಗಳ ಹಿಂದೆ ನಡೆದಿತ್ತು..

ಐವತ್ತೊಂದು ವರುಷ  ಸುಖ ಸಂಸಾರ ಮಾಡಿ, ನಲಿದು ನಮ್ಮ ಏಳಿಗೆಗಾಗಿ ಶ್ರಮಿಸಿದ,  ಮನಸಿಗೆ ಹರುಷ ತಂದ ನಮ್ಮ ಮಾತಾ ಪಿತೃಗಳ ಸುವರ್ಣ ಸಂಸಾರವನ್ನ ಕಣ್ಣಾರೆ ಕಂಡ ನಾವೇ ಪುಣ್ಯವಂತರು...

ಎಲ್ಲರು ಹೇಳುತ್ತಾರೆ..ನಮ್ಮ ಪರಮ ಪೂಜ್ಯ ಮಾತಾ ಪಿತೃಗಳು ಪುಣ್ಯ ಮಾಡಿದ್ದಾರೆ ಅಂತ..ಆದ್ರೆ ಅವರ ಮಕ್ಕಳಾಗಲು ನಾವು ಪುಣ್ಯ ಮಾಡಿದೇವೆ..

ನಮ್ಮ ತಂದೆ-ತಾಯಿಗೆ ವಿವಾಹ ದಿನದ ಶುಭಾಶಯಗಳು....

ಎಲ್ಲರನ್ನು ಸದಾಕಾಲ ನೆನೆಯುವ, ಹರಸುವ ಗಗನದಲ್ಲಿ ತಾರೆಯಾಗಿರುವ "ಅಣ್ಣ" ನಮ್ಮನ್ನು, ಮನೆಯನ್ನು ಮನೆತನವನ್ನು ಹರಸಿ, ಬೆಳೆಸಿ..

ನಿಮ್ಮ ಹಾರೈಕೆ, ಆಶೀರ್ವಾದ ನಮಗೆ ಶ್ರೀ ರಕ್ಷೆ...ಅಮ್ಮನ ಖುಷಿಯಲ್ಲಿ, ಸಂತಸದಲ್ಲಿ  ನಿಮ್ಮನ್ನ ಕಾಣುತ್ತೇವೆ...ನೀವು ಸದಾ ನಮ್ಮ ಜೊತೆಯಲ್ಲಿ ಇರುತ್ತೀರ..ಇರುವಿರಿ...

ಇಂತಿ ನಿಮ್ಮ "ಅನುಗ್ರಹ" ಇರುವ ಸದನದ ಕುಡಿಗಳು 

Monday, April 23, 2012

Prakash Chaya's lovely day

One day, Chaya was on the way to her house after a gruelling work in the office...She was so tired that the moment she left the office in the cab..she was in deep slumber...

phone was ringing..cab's music player was belting a lilting music.  Cab was zipping on the road, on that day there was very less traffic or rather traffic was smoothely flowing like a swift river.
"Madam, Madam" driver said..
Chaya's was in deep slumber..she didnt heard the voice
"Madam, Madam" driver tried to wake her up again

Suddenly Chaya realised, somebody is calling her..She opens her eyes slowly...
"Madam!..you are stop has come..!"
"Oh shucks..I slept all the way...sorry sorry..i was tired..so i slept off"
Driver smiled at her "Madam, Its ok madam..have a good evening madam"
"Thank you so much..bye"

When she opened the gate of her house, and slowly started climbing the stair case, and reached her floor.

She knock on the door, The door gently opens up

Shireesh slowly open the door, and gives a warm smile to his mother..

"Oh my little cutie! how are you?"

Shireesh smiles at her again, and slowly runs towards the sofa set, and brings out a bouquet of flowers "My Sweet mother, wish you a wonderful marriage anniversary"

Chaya's all tension, tiredness started walking towards the air, and vanishes..

She lifts him up and hugs, and gives a peck on the cheek..by the time Prakash comes in.."Wish you happy anniversary, there is a surprise on the Sofa set...for you"

She smiles at Prakash, and the cute Shireesh brings the surprise packet

She slowly opens it and started smiling with the tears on

There was cute cartoon Shireesh with a beautiful words!!!!


Sunday, April 8, 2012

A decade of glorious moments..

"Marriage" is combination of two souls who drifted from heaven to live together on the earth.
Marriage is like a railway track..to run a train and trail of life, need two lines running parallel to each other..by supporting each other..
The Marriage life is not an exam where scoring the marks is the criteria..
Opportunity to live happily open its jaws all the time...
It is a life's path filled with flowers...
Today we completed 3653 days (leap years 2004, 2008 & 2012) of our married life..


A decade of glorious moments!!!!


A wonderful gift by the almighty to fill the life with lives who creates a different colourful dreams all the way.
What more to expect...!!!!!!!!!!!!!!!!