Monday, January 2, 2012

ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ..

"ಮೊದಲು ಕಿವಿ ಹೋಯ್ತು....ಆಮೇಲೆ ಕಣ್ಣು ಹೋಯ್ತು..ಪ್ರಾಣ ಒಂದು ಉಳಿದಿದೆ"

ನನಗೆ ನಮ್ಮ ಅಪ್ಪ ಹೇಳಿದ ಕಡೆ ಸ್ಪಷ್ಟ ಮಾತುಗಳು...ಇನ್ನೂ ಕಿವಿಯಲ್ಲಿ ಗುಯ್ಯ್ಗಗುಟ್ಟುತ್ತ ಇದೆ...


ತಮ್ಮ ಇಡಿ ಜೀವನದಲ್ಲಿ ಛಲ ಹಾಗು ಆತ್ಮ ವಿಶ್ವಾಸದಿಂದ ಬೆಳೆದು ನಮ್ಮನ್ನು ಹಾಗೆ ಬೆಳಸಿದ ನಮ್ಮ ಅಪ್ಪ ಇಂದು ಸಂಜೆ ಸುಮಾರು ೫.೩೫ಕ್ಕೆ ನಮ್ಮನ್ನು ಹರಸಿ ಹೊರಟರು ...ಕಾಲನ ಕರೆ ಬಂದಾಗ ಯಾರು ನಿಲ್ಲುವುದಿಲ್ಲ ಎನ್ನುವ ಸತ್ಯ ನಮಗೆ ಅರಿವಾದ ಆ ಕ್ಷಣ ನಿಜಕ್ಕೂ ಯಾತನಮಯ .


ಬೇರೆಯವರ ಹುಟ್ಟು- ಸಾವಿನ  ಬಗ್ಗೆ  ಬರೆಯೋದು  ತುಂಬಾ  ಸುಲಭ..ತಮ್ಮ ಬಂಧು-ಮಿತ್ರರ ಬಗ್ಗೆ ಬರೆಯುವುದು ಕಷ್ಟ ಅಂತ ಪ್ರತೀತಿ..ಆದ್ರೆ ನಮ್ಮ ಅಪ್ಪ ನಮ್ಮ ಒಳಗೆ ಇದ್ದು ನನಗೆ ಬರೆಯೋದಕ್ಕೆ ಚೈತನ್ಯ ತುಂಬಿದ್ದರೆ ಅಂತ ನನ್ನ ಬಲವಾದ ನಂಬಿಕೆ...


ಜೀವನದ ಪ್ರತಿಯೊಂದು ಕ್ಷಣದಲ್ಲೂ  ತಾಳ್ಮೆ, ಮೃದು ಮನಸಿಗೆ ಹೆಸರಾಗಿದ್ದ ನಮ್ಮ ಅಪ್ಪ..ಅವರ ಅಂತಿಮ ಕ್ಷಣಗಳು ಯಾತನಮಯವಾಗಿದ್ದು ವಿಧಿ ವಿಪರ್ಯಾಸ.  ಪ್ರಾಯಶಃ ಆ ತಾಳ್ಮೆಯೇ ನಮ್ಮ ಮನಸನ್ನು ಹಿಡಿತದಲ್ಲಿರಿಸಿದೆ ಅಂದರೆ ತಪ್ಪಿಲ್ಲ..


ಸುಮಾರು ಎಪ್ಪತೊಂಬತ್ತು ಹುಟ್ಟು ಹಬ್ಬಗಳನ್ನ ಆಚರಿಸಿದ ಹಿರಿಯ ಜೀವ..ತನ್ನ ಎಂಬತ್ತನೇ ವರುಷಕ್ಕೆ ಕಾಲು ಇರಿಸಿದ ಸುಮಾರು ಮೂರು  ತಿಂಗಳ ತರುವಾಯ ತನ್ನ ನೆನಪನ್ನು ನಮಗೆ ನೀಡಿ ಹೋಗಿದ್ದಾರೆ...


ನಮ್ಮ ಅಪ್ಪನ ಬಗ್ಗೆ ಏನೇ ಬರೆದರೂ ಅದು ಕಮ್ಮಿ ಎನ್ನುವುದು ನನ್ನ ಭಾವನೆ...


ಅವರ ತಾಳ್ಮೆ, ಎಂತಹ ಸಮಯದಲ್ಲೂ ಅಸಹನೆಗೊಳ್ಳದ ಸ್ವಭಾವ ತನ್ನ ಎಲ್ಲ ಮಕ್ಕಳನ್ನು ಒಂದು ನೆಲೆಗಟ್ಟಿಗೆ ಮುಟ್ಟಿಸಲು ಪಟ್ಟ ಶ್ರಮ ಎಲ್ಲದಕ್ಕೂ ನಾವು ಚಿರಋಣಿ...


ಅಣ್ಣ ನೀವೆಲ್ಲೂ ಹೋಗಿಲ್ಲ...ನಮ್ಮೆಲ್ಲೆ ಇದ್ದೀರಾ...ನಮಗೆ ಮಾರ್ಗದರ್ಶನ ನೀಡುತ್ತ ಇರಿ...


ಹೋಗಿ ಬನ್ನಿ ಅಣ್ಣ...ನಿಮ್ಮ ಅಪ್ಪ, ಅಮ್ಮ, ಚಿಕ್ಕಮ್ಮ ಎಲ್ಲರೂ  ನಿಮಗಾಗಿ ಕಾಯುತ್ತ ಇದ್ದಾರೆ...


ನಿಮ್ಮ ಶ್ರಮ ಸಾರ್ಥಕವಾಗುವುದು ನಮ್ಮ ಸಾರ್ಥಕ ಜೀವನದಲ್ಲಿ...ಅದೇ ನಿಮಗೆ ನಾವು ತೋರುವ ಶ್ರದ್ದಾಂಜಲಿ...

Friday, December 23, 2011

ನಾಗರತ್ನ ಅಜ್ಜಿಯ ಸುಂದರ ಬದುಕಿಗೆ ಒಂದು ನಮನ

 ನಮ್ಮ ಅಜ್ಜಿಯ ತಂಗಿಯಾದ ನಾಗರತ್ನ ಅಜ್ಜಿ ಸುಮಾರು ಎಂಬತ್ತೈದು ವಸಂತಗಳನ್ನು ಕಳೆದು ಇಂದು ಮುಂಜಾನೆ ಸುಮಾರು ೧೨.೩೦ ನಮ್ಮನ್ನ ಅಗಲಿ ಪರಲೋಕದ ಕಡೆಗೆ ಪ್ರಯಾಣ ಬೆಳಸಿದರು.

ನಾನು ಸುಮಾರು ಐದು-ಆರು ವರುಷದ ಕೂಸಾಗಿದ್ದಾಗ ನಮ್ಮನ್ನ ಬಿಟ್ಟು ಅಗಲಿದ ಅಜ್ಜಿಯಾ ನಂತರ ಅವರ ಸೋದರಿಯಾದ ನಾಗರತ್ನ ಅಜ್ಜಿಯೇ ಆ ಸ್ಥಾನವನ್ನು ತುಂಬಿದ್ದರು. ಯಾವಗೆಲ್ಲ ಅಜ್ಜಿಯ ನೆನಪಾದಾಗ ಮನಸು ಶಿವಮೊಗ್ಗದ ಕಡೆ ಹೊರಳುತ್ತಿತ್ತು. 

ನಮ್ಮ ಕೊರವಂಗಲ ಕುಟುಂಬಕ್ಕೆ ಸದಾ ಹತ್ತಿರ ಇದ್ದ, ಆಶಿರ್ವದಿಸುತಿದ್ದ ಒಂದು ಹಿರಿಯ ಚೇತನ ನಮ್ಮನ್ನ ಅಗಲಿದ್ದಾರೆ.  ಕಳೆದ ಒಂದು ವರುಷದ ಅವದಿಯಲ್ಲಿ ಎರಡು ಬಾರಿ ನೋಡಿ, ನಲಿದು ಆಶೀರ್ವಾದ ಪಡೆದ ಬಗ್ಗೆ ನೆನದರೆ ಕಣ್ಣಾಲಿಗಳು ತುಂಬಿ ಬರುತ್ತೆ..

ನಾಗರತ್ನ ಅಜ್ಜಿಯು ಜೀವನದ ಸುಂದರ ಕ್ಷಣಗಳಲ್ಲಿ  ದಾಖಲಿಸಬೇಕಾದ್ದು ತುಂಬಾ ಇದೆ ಅದರಲ್ಲಿ ಕೆಲವು
  • ತುಂಬು ಸಂಸಾರವನ್ನು ಸುಂದರವಾಗಿ ಯಶಸ್ಸಿನತ್ತ ನಡೆಸಿದರು
  • ನಮ್ಮ ಅಪ್ಪನಿಗೆ ತೋರಿಸಿದ ಪ್ರೀತಿ, ವಿಶ್ವಾಸ ಯಾವಾಗಲು ಸ್ಮರಣೀಯ
  • ಬಸುರಿ, ಬಾಣಂತಿಯರಿಗೆ ಕೊಡುವ ಮದ್ದು ಶಿವಮೊಗ್ಗ ಹಾಗು ಸುತ್ತಲ ಪ್ರದೇಶದಲ್ಲಿ ಜನ-ಜನಿತವಾಗಿ ಪತ್ರಿಕೆಯಲ್ಲೂ ಪ್ರಕಟವಾಗಿದ್ದು ಸಂತಸದ ಕ್ಷಣಗಳು. 
  • ಸತತ ಮೂರು ಪೀಳಿಗೆಯಲ್ಲಿ ಮೊದಲ ಮಗು ಗಂಡಾಗಿ..ಸುವರ್ಣ ಅಭಿಷೇಕ ಮಾಡಿಸಿಕೊಂಡಿದ್ದು
  • ತನ್ನ ಮೊಮ್ಮಕ್ಕಳ ಮದುವೆಯ ಸಂಭ್ರಮದಲ್ಲಿ ನಲಿದ ಹಿರಿಯ ಚೇತನ
 ಅವರ ಜೀವನದ ರೂಪು ರೇಷೆಗಳು, ನಡೆದ ಮಾರ್ಗ, ನುಡಿದ ಮಾತುಗಳು ಯಾವಾಗಲು ನಮಗೆ ದಾರಿ ದೀಪ..

Wednesday, November 16, 2011

ಜ್ಞಾನದ ಕಿಚ್ಚನ್ನು ಹಚ್ಚುವ "ಪ್ರಕಾಶ"ರ ಜೊತೆ ಜ್ಞಾನದ ಒಡತಿ "ಶಾರದೆ" - ಮೈತ್ರಿ

ಮನೆ ಬೇಕಾ ಅಥವಾ ಅನುಗ್ರಹವಿರುವ ಸದನ ಬೇಕಾ ಅಂದ್ರೆ ಯಾವಾಗಲು ನನ್ನ ಮನ ಸದನಕ್ಕೆ ಹಾತೊರೆಯುತ್ತದೆ..

ಮೈತ್ರಿ ಹೊರಗಿನಿಂದ!!!!
ನಾನು ಸುಮಾರು ಮನೆಗಳಿಗೆ, ಗೃಹಪ್ರವೇಶಕ್ಕೆ ಹೋಗಿದ್ದೇನೆ..ಒಂದು ಮನೆ ತನ್ನ ವಿನ್ಯಾಸದಿಂದ, ಅಲಂಕಾರಗಳಿಂದ ಕಣ್ಣು ಸೆಳೆಯುತಿತ್ತು...ಆದ್ರೆ ನನ್ನ ಮನ ಸದಾ  ಮನಸನ್ನು ಸೂರೆಗೊಳ್ಳುವ ಮನೆಯನ್ನು ಹುಡುಕುತ್ತಲೇ ಇತ್ತು...

ಅಂತಹ  ಒಂದು ಸುಂದರ ಸುವರ್ಣ ಕ್ಷಣಗಳು ಹಾಸನದಲ್ಲಿ ಸಾಲಗಾಮೆ ರಸ್ತೆಯಲ್ಲಿನ ಒಂದು "ಮೈತ್ರಿ" ಕೂಟದಲ್ಲಿ ಸಿಕ್ಕಿತು..
ಈ "ಮೈತ್ರಿ"ಯಾ  ಆತ್ಮವಾಗಿರುವುದು ನನ್ನ ಚಿಕ್ಕಪ್ಪ ಆದ ಆನಂದದ ಹಾಗು ಜ್ಞಾನದ ಚಿಲುಮೆ ಹತ್ತಿಸುವ "ಪ್ರಕಾಶ"..ಅವರ ಮನದೊಡತಿ ನನ್ನ ಚಿಕ್ಕಮ್ಮ "ಶಾರದ"..

ಎಂತಹ ಒಂದು ಅದ್ಬುತ ಸುಯೋಗ ಹಾಗು ಸಂಯೋಗ...

"ಮೈತ್ರಿ"ಯ ಮೈತ್ರಿ ಜೋಡಿ
ಜ್ಞಾನದ ಕಿಚ್ಚನ್ನು ಹಚ್ಚುವ "ಪ್ರಕಾಶ"ರ ಜೊತೆ ಜ್ಞಾನದ ಒಡತಿ "ಶಾರದೆ"

ಎಲ್ಲವು ಅಚ್ಚು ಕಟ್ಟು...ಪ್ರತಿಯೊಂದು ವಸ್ತುವು ಒಂದು ಕಥೆ ಹೇಳುತ್ತೆ!!!
ಹೊರಗಿನಿಂದ ಮನೆ ವಿನ್ಯಾಸ ನೋಡಿದರೆ...ಎಲ್ಲವು ಖಾಲಿ ಖಾಲಿ ಯಾಕೆ ಇಷ್ಟೊಂದು ಸ್ಥಳ ವ್ಯರ್ಥ ಮಾಡಿದ್ದರೆ ಅಂತ ಅನ್ನಿಸೋದು ಬಹು ಸಹಜ...ಒಳಗೆ ನಿಧಾನವಾಗಿ ಹೊಕ್ಕಂತೆ..ಮನೆ ಅಚಾನಕ್ಕಾಗಿ "ಗೃಹ"/"ಸದನ"ವಾಗಿ ಮಾರ್ಪಾಡಾಗುವುದು ಇಲ್ಲಿನ ಸೋಜಿಗಗಳಲ್ಲಿ ಒಂದು...

ಮನುಜನಿಗೆ ಮನೆಯಲ್ಲಿ ಎಷ್ಟು ಜಾಗ ಬೇಕೂ ಅಷ್ಟೇ ತನ್ನ ಮನಸಿಗೂ ಜಾಗ ಬೇಕು ಅನ್ನಿಸುವ ಒಂದು ಸಣ್ಣ ಕೋಣೆ ನನಗೆ ತುಂಬಾ ಕಾಡಿತು...ಇಂತಹ ಒಂದು ಅದ್ಬುತ ಸನ್ನಿವೇಶ "ಅಮೃತವರ್ಷಿಣಿ"ಸಿನೆಮಾದಲ್ಲೂ ಮೂಡಿ ಬಂದಿದೆ...ಒಂದು ಕೋಣೆಯಲ್ಲಿ ಏನು ಇಲ್ಲದೆ ಖಾಲಿ ಕೋಣೆಯಲ್ಲಿ ತಮ್ಮ ಮನಸಿನ ಭಾವನೆಗಳನ್ನು ವಿನಿಮಯ ಮಾಡಿಕೊಳ್ಳುವ ದೃಶ್ಯ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ನಿರ್ದೇಶಕ ದಿನೇಶ್ ಬಾಬು.

ಜ್ಞಾನ ಪ್ರಕಾಶ ಹಚ್ಚುವ ಶಾರದ ವಿಲಾಸ
ಅಂತಹ ಒಂದು ಸೊಗಸಾದ ಕೋಣೆ ಈ ಸದನದಲ್ಲೂ ಕಂಡು ಬಂದಿತು......ಅದಕ್ಕೆ ನಾನು ಕೊಟ್ಟ ಹೆಸರು
"ಜ್ಞಾನ ಪ್ರಕಾಶ ಹಚ್ಚುವ ಶಾರದ ವಿಲಾಸ"

ಜ್ಞಾನ ಭಂಡಾರ
ಚಿಕ್ಕಪ್ಪ "ಪ್ರಕಾಶ" ರಚಿಸಿದ ರೇಖಾ ಚಿತ್ರ
ಈ ಸದನದಲ್ಲಿ ಪ್ರತಿಯೊಂದು ವಸ್ತುವು ಅಚ್ಚುಕಟ್ಟು..ವಸ್ತುಸಂಗ್ರಹಾಲಯ, ಗ್ರಂಥಾಲಯ, ಜ್ಞಾನ ಭಂಡಾರ, ಎಲ್ಲವು ಸಮೃದ್ಧ

ಮೈತ್ರಿಯ ಯಜಮಾನ ಹೆಮ್ಮೆಯ ಮೈತ್ರಿಯ ನಗುಮುಖದೊಂದಿಗೆ
ಈ ಸದನದ ವಿನ್ಯಾಸಕಾರರು,ಯಜಮಾನರು,ಯಜಮಾನತಿ, ಸದಸ್ಯರಿಗೂ ಎಲ್ಲರಿಗು ಮನದಲ್ಲೇ ನಮನ ಹೇಳುತ್ತಾ ಹೊರಗೆ ಬಂದಾಗ ಮನಸು ಏನನ್ನೋ ಪಡೆದ,ಸಾಧಿಸಿದ ಒಂದು ಅದ್ಬುತವನ್ನು ನೋಡಿ ಪುಲಕಿತನಾಡೆ ಎಂದು ನನ್ನ ಬೆನ್ನನ್ನು ತಾನೇ ತಟ್ಟಿತು...

Friday, October 21, 2011

Shekar & Sunitha - First Year of their marriage life

  Good things in the life always walks around in the form of dolls...



The Cute Putty!
Dolls always likes to eat fine cooled ice creams

The Cool coloured cream of happiness
Ice Creams always helps to step ahead in the growing moments...
Growing life...growing desires...growing happiness

But steps can not be taken alone...it requires another pair...
The Best Couple who steps ahead of everyone!!!!
 The putty factor found a perfect partner as Shekar
Searching for right soul mate among hundreds!!!
God has blended fine pair of S & S and made them a perfect pair
The Blend of S & S
That, it creates a nice canvas to look so ravishing
The bonding of S & S
The God created a perfect symphony of music in S & S life....and also a pefect gift in the form of
Perfect symphony of happiness!
A pefect shelter to live the moments of happiness all the time...
Best Home!!!!
Wish you the best couple, best returns of happiness all the time...
Wish you many more marriage anniversary ahead....

Friday, September 16, 2011

Rahul Dravid - The heights of application

China were always patted their own back saying they had the guts to create a great wall of china which is visible from moon....but not every one can not visit neither great wall of china..nor the moon...
Great Wall...but stands at less heights than RD

But the cricket buffs have a wonderful and glorious opportunity to witness the great wall of India at their will...
The Master of perfection!

Yes you are very much in line for a square driving seat.....
Elegant..and the Trade Mark!!!!

Am talking about RD...The Rahul Dravid...
Stylish Player!!!!

I was always one of the biggest fans of two cricketing giants who stepped and debuted at Lords..to become the lords of the cricket..
The Aggression and Patience in one frame!!!! The Real  Dada Giri!!!!

One is the Dada - Sourav Ganguli, the other Wall of patience - Rahul Dravid..

Rahul anytime ready to wear the flag on his chest....

The real attitude, the real selflessness we can see in him.  Who can forget he made "The White Lightening" Allan Donald dance on the pitch in frustration..as RD literally frustrated him to tear his hairs in despair.
RD Explosion!!!!!

Who can forget, master minding with VVS Lakshaman to give their own pill to the marauding Australians..just executing the plan of Dada to perfection to decimate Waugh's Aussie team.

Who can forget rare victory on Australian soil because of RD's patience presence.

To accommodate a balance in the team as per DADA's plan, he kept wickets for many one dayers, especially 2003 world cup, where the team india beaten only in the hands of Aussies to finish as runners up.

He has the stamina, Patience, Perseverance, Skills, and a great attitude to play for the team and the county..

He just finished his final one day match with a calculated innings of 69 Runs.  He is the man for anything..but the false pundits who claim they have cricketing brain just made him cool his legs from last three years from not allowing to play in one dayers...

In his final hurrah he showed what anyone can do, if they have will power, and attitude to decimate any still challenges..let alone the WALL...

TEAM INDIA NEVER CRUMBLES AS LONG AS WALL IN THE MIDDLE OF THE PITCH!!!!!

Saturday, September 3, 2011

New Member to my family

We were in a dilemma from past few years...whether new member to be added to my family or is it OK to manage and nourish one...

On the hindsight, the necessity of new member is also discussed, debated, and virtually we couldn't come to any conclusion.

Life always teaches, easy decision difficult to take..and difficult decision easy to take..

Considering all the permutations and combinations, we decided to go for second one...and ya..we were happy with our decision made....

and the expected expectation turned to be true...and real...
                                      . 


                                      . 


                                      . 


                                      . 


                                      . 


TVS - Victor - The first family member!!!!!

                                      . 


                                      . 


                                      . 


                                      . 


                                      . 

Maruthi Suzuki Ritz - The Second family member!!!!

Sunday, August 21, 2011

ಅಣ್ಣ - ಅಂದ್ರೆ ನಾನೇ


ಕರ್ನಾಟಕದ ಯಾವ ಮೂಲೆಗೆ ಹೋದರು ಅಣ್ಣ ಅಂದ್ರೆ ಗೊತ್ತಿರೋದು ಒಬ್ಬರೇ...ಅವರೇ ನಮ್ಮ ವರನಟ ರಾಜಣ್ಣ....ಆದ್ರೆ ಆಗಸ್ಟ್ ೨೦ ರಂದು ನಮ್ಮ ಸ್ವಾತಂತ್ರ ಉದ್ಯಾನವನಕ್ಕೆ ಹೋದಾಗ ಅಲ್ಲಿ ಒಬ್ಬರಲ್ಲ ಇಬ್ಬರಲ್ಲ ಸಾವಿರಾರು ಅಣ್ಣ ಇದ್ದರು...

ಅವರೇ ನಮ್ಮ ನಿಮ್ಮ ಅಣ್ಣ ಹಜಾರೆ....ಅಲ್ಲಿದ್ದ ಜನ-ಜಂಗುಳಿ ಬರಿ ವಯಸ್ಸಾದವರು ಮಾತ್ರ ಇರಲಿಲ್ಲ..ಇಡಿ ಪ್ರಾಂಗಣ ಯುವಶಕ್ತಿಯಿಂದ ತುಂಬಿ ತುಳುಕುತ್ತಿತ್ತು....ಸಾಮಾನ್ಯವಾಗಿ ಮಾಲ್, ಪುಬ್ ಸಂಸ್ಕೃತಿಯಿಂದ ಯುವ ಜನ ದಾರಿ ತಪ್ಪುತ್ತಿದ್ದಾರೆ ಅನ್ನುವ ಸಾಮಾನ್ಯ ದೂರು ಅಲ್ಲಿ ಕಾಣುತ್ತಿರಲಿಲ್ಲ...ದಾರಿ ತಪ್ಪಿದ ರಾಜಕಾರಣಿಗಳಿಗೆ ಒಂದು ಸಣ್ಣ ಛಡಿ ಏಟು ಕೊಡುವ ಒಂದು ಸಣ್ಣ ಆದ್ರೆ ಮನಸಿಗೆ ನಾಟುವ ಧರಣಿ ನಡೆಯುತ್ತ ಇತ್ತು...

ಅಲ್ಲಿಗೆ ಹೋಗಿ ಕಳೆದ ಕೆಲವು ಘಂಟೆಗಳು ಚಿರಸ್ಮರಣೀಯ...ಬರಿ ಧರಣಿಯಿಂದ ಏನು ಆಗುತ್ತೆ ಅಂತ ಮೂಗು ಮುರಿಯುವರು ತಿಳಿಯ ಬೇಕಾದ ಒಂದು ಸಣ್ಣ ಸಂಗತಿ ಎಂದರೆ...ದೊಡ್ಡ ದೊಡ್ಡ ಕಾಡು ಸುಟ್ಟು ಕರಕಲಾಗೋದು ಒಂದು  ಸಣ್ಣ ಕಿಡಿಯಿಂದ...ದೊಡ್ಡ ಮರ ಬಿದ್ದು ಹೋಗುವಂತೆ ತೂತಾಗುವುದು ಒಂದು ಗೊದ್ದ ಕಟ್ಟುವ ಗೆದ್ದಲಿನಿಂದ...

ಈ ಸಣ್ಣ ಆದ್ರೆ ಪ್ರಭಾವಶಾಲಿ ಧರಣಿಯಿಂದ ಏನು ಆಗುತ್ತೆ ಅಥವಾ ಏನು ಆಗೋಲ್ಲ ಎನುವುದಕ್ಕಿಂಥ..ನಮ್ಮ ಜನ ನಿಧಾನವಾಗಿಯಾದರೂ ಎಚ್ಚೆತ್ತು ಕೊಳ್ಳುತಿದ್ದಾರೆ ಎನುವುದು ನಿಜಕ್ಕೆ ತೀರ ಹತ್ತಿರ ಇರುವ ಮಾತು...